ಬಯೋಮೆಟ್ರಿಕ್ ರದ್ದತಿಗೆ ಆಗ್ರಹ
Team Udayavani, May 8, 2021, 9:13 PM IST
ಕೊರಟಗೆರೆ: ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಬಯೋ ಮೆಟ್ರಿಕ್ ಪದ್ಧತಿ ಯಿಂದಕೊರೊನಾ ರೋಗ ಹರಡುವ ಭೀತಿ ಎದು ರಾಗಿದ್ದು, ಸರ್ಕಾರ ಬಯೊ ಮೆಟ್ರಿಕ್ ರದ್ದು ಪಡಿಸಿಒಟಿ ಪಿ ಅಥವಾ ಚೆಕ್ಲಿಸ್ಟ್ನ ಮೂಲಕ ಪಡಿತರಪದಾ ರ್ಥ ವಿತರಣೆಗೆ ಅವಕಾಶ ಕಲ್ಪಿಸು ವಂತೆಆಗ್ರ ಹಿಸಿ, ಕೊರಟಗೆರೆ ನ್ಯಾಯ ಬೆಲೆ ಅಂಗಡಿಮಾಲೀ ಕರ ಸಂಘ ಶುಕ್ರವಾರ ತಹಶೀಲ್ದಾರ್ ಗೋವಿಂದರಾ ಜು ರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ84 ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿವೆ.ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ಸೇರಿ 40 ಸಾವಿರಕ್ಕೂ ಅಧಿಕ ಪಡಿತರ ಕಾರ್ಡ್ಗಳಿವೆ. ಜನರು ಪಡಿತರ ಪಡೆಯುವಾಗಕಡ್ಡಾಯ ವಾಗಿ ಬಯೋಮೆಟ್ರಿಕ್ ನೀಡ ಬೇಕಾಗಿದೆ. ಸಾಮಾಜಿಕ ಅಂತರ ಮತ್ತು ಕೊರೊನಾಹರಡುವಿಕೆ ತಡೆಯಲು ನಮಗೆ ಕಷ್ಟಸಾಧ್ಯವಾಗಿದೆ. ತಕ್ಷಣ ಬಯೋ ಮೆಟ್ರಿಕ್ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕೊರಟಗೆರೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಕೊರೊನಾಸೋಂಕಿನಿಂದ 83 ಜನ ನ್ಯಾಯಬೆಲೆ ಅಂಗಡಿಮಾಲೀಕರು ಮೃತಪಟ್ಟಿದ್ದಾರೆ ಎಂದರು.ದಾಸರಹಳ್ಳಿ ನ್ಯಾಯಬೆಲೆ ಅಂಗಡಿ ಮಾಲೀಕರಮೇಶ್ ಮಾತನಾಡಿ, ನ್ಯಾಯಬೆಲೆ ಅಂಗಡಿಮಾಲೀಕರಿಗೆ ಸರ್ಕಾರ ಯಾವುದೇ ಭದ್ರತೆಕಲ್ಪಿಸಿಲ್ಲ.
ತಾಲೂಕಿನ 84 ಪಡಿತರ ಕೇಂದ್ರದಲ್ಲಿಕನಿಷ್ಟ 700ರಿಂದ 800ಪಡಿತರ ಕಾರ್ಡ್ಗಳಿವೆ.ಗ್ರಾಮೀಣ ಜನತೆಯ ನೇರ ವಾಗಿ ಸಂಪರ್ಕನಮಗೆ ಇರುತ್ತದೆ. ನಮಗೆ ಆರೋಗ್ಯಭದ್ರತೆಯ ಜತೆ ಸರ್ಕಾರದ ವಿಶೇಷ ಸೌಲಭ್ಯಘೋಷಣೆ ಮಾಡಬೇಕು ಎಂದರು.ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಸರ್ಕಾರಿ ನ್ಯಾಯಬೆಲೆ ಅಂಗಡಿಯಮಾಲೀಕರು ಸಲ್ಲಿಸಿರುವ ಮನವಿಯನ್ನುನಾನು ಕೊಡಲೇ ಡೀಸಿ ಮತ್ತು ಸರ್ಕಾ ರಕ್ಕೆ ಪತ್ರಬರೆಯುತ್ತೇನೆ ಎಂದರು. ಕೊರಟಗೆರೆನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದನಿರ್ದೇಶಕ ರಂಗರಾಜು, ನಾಗೇಶ್, ಆನಂದ್,ಸೋಮಶೇಖರ್, ರಾಮಚಂದ್ರಪ್ಪ, ಶಿವಣ್ಣ,ರಂಗಧಾಮಯ್ಯ, ನಂದೀಶ್ ಹಾಗೂಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ