ವಾಹನ ಹಿಂದಿಕ್ಕುವ ಭರದಲ್ಲಿ ಬಸ್ಗಾಗಿ ಕಾಯುತ್ತಿದ್ದ ಮಹಿಳೆಗೆ ಢಿಕ್ಕಿಯಾದ ಲಾರಿ; ದುರ್ಮರಣ
Team Udayavani, Dec 20, 2023, 5:20 PM IST
ಕುಣಿಗಲ್ : ಲಾರಿಯೊಂದು ಮತ್ತೊಂದು ವಾಹನವನ್ನು ಹಿಂದಿಕ್ಕಲು ಹೋಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬರಿಗೆ ಢಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟ ಘಟನೆ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ದೊಡ್ಡಮಾವತ್ತೂರು ಗ್ರಾಮದಲ್ಲಿ ಬುಧವಾರ(ಡಿ.20 ರಂದು) ನಡೆದಿದೆ.
ದೊಡ್ಡಮಾವತ್ತೂರು ಗ್ರಾಮದ ಎಸ್.ವಿ. ವಿನುತ (20) ಮೃತ ದುರ್ಧೈವಿ. ಮೋಹನ್ (35) ಗಾಯಗೊಂಡ ವ್ಯಕ್ತಿ.
ಘಟನೆ ವಿವರ: ವಿನುತ ತಮ್ಮ ತವರು ಮನೆ ಹುಲಿಯೂರುದುರ್ಗಕ್ಕೆ ಹೋಗಲೆಂದು ದೊಡ್ಡಮಾವತ್ತೂರು ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ವೇಳೆ ಹುಲಿಯೂರುದುರ್ಗ ಕಡೆಯಿಂದ ಕುಣಿಗಲ್ ಕಡೆಗೆ ಹೊಗುತ್ತಿದ್ದ ಲಾರಿ ಮತ್ತೊಂದು ವಾಹನವನ್ನು ಹಿಂದಿಕ್ಕಲು ಹೋಗುವ ಭರದಲ್ಲಿ ರಸ್ತೆಯ ಬಲಭಾಗದ ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿನುತಾ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆಯ ಕೈ ಕಾಲು ತುಂಡಾಗಿ, ದೇಹ ಛಿದ್ರವಾಗಿ ರಸ್ತೆಯಲ್ಲಿ ಬಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳಿಕ ಲಾರಿ ರಸ್ತೆಯಲ್ಲಿ ನಡೆದುಕೊಂಡು ಹೊಗುತ್ತಿದ್ದ ಮೋಹನ್ಗೆ ಢಿಕ್ಕಿ ಹೊಡೆದಿದೆ ನಂತರ ರಾಮಣ್ಣ ಅವರಿಗೆ ಸೇರಿದ ಮನೆಯ ಕಾಂಪೌಡ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾಂಪೌಡ್ ಪೂರ್ಣವಾಗಿ ಬಿದ್ದು ಗೇಟ್ ಮುರಿದಿದೆ. ಕಾಂಪೌಡ್ನಲ್ಲಿ ನಿಲ್ಲಿಸಿದ ಬೈಕ್ ಬೈಕ್ ಜಖಂಗೊಂಡಿದೆ.
ಘಟನೆಯಲ್ಲಿ ಗಾಯಗೊಂಡ ಮೋಹನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.