ಎಪಿಎಲ್ ‘ಅನ್ನ ಭಾಗ್ಯ’ ಯೋಜನೆ ಅಕ್ಕಿಗೆ ಕತ್ತರಿ
ಜಿಲ್ಲೆಯಲ್ಲಿ 1,09,585 ಎಪಿಎಲ್ ಕಾರ್ಡ್ 15,302 ಮಂದಿಗೆ ರೇಶನ್ ಇಲ್ಲ
Team Udayavani, Jul 23, 2019, 5:25 AM IST
ಸಾಂದರ್ಭಿಕ ಚಿತ್ರ.
ಗ್ರಾಮೀಣ ಭಾಗದಲ್ಲಿ ಎಪಿಎಲ್ ಕಾರ್ಡ್ದಾರರಿಂದ ಅಕ್ಕಿಗೆ ಹೆಚ್ಚಿನ ಬೇಡಿಕೆಯಿಲ್ಲ. ಇದಕ್ಕೆ ಕಾರಣ ಕೆಲವು ಬಿಪಿಎಲ್ ಕಾರ್ಡ್ದಾರರು ಅಕ್ಕಿ ಪಡೆಯದೆ ಇರುವುದು. ಇದರಿಂದಾಗಿ ಅವರ ರೇಶನ್ ಅಂಗಡಿಯಲ್ಲಿ ಸಂಗ್ರಹವಾಗುತ್ತದೆ. ಅದನ್ನು ಪಡಿತರ ಸಾಮಗ್ರಿ ನೋಂದಾಯಿತ ಎಪಿಎಲ್ ಕಾರ್ಡ್ದಾರರಿಗೆ ನೀಡಲಾಗುತ್ತಿದೆ. ಆದರೆ ನಗರದಲ್ಲಿ ಬಿಪಿಎಲ್ ಕಾರ್ಡ್ ಗಿಂತ ಎಪಿಎಲ್ ಕಾರ್ಡ್ದಾರರ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಅಕ್ಕಿ ಸಂಗ್ರಹವಾಗುತ್ತಿಲ್ಲ.
ಉಡುಪಿ: ಜಿಲ್ಲೆಯರೇಶನ್ಅಂಗಡಿಗಳಲ್ಲಿ ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಯೋಜನೆಯ ಅಡಿ ಎಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಣೆಯಾಗುತ್ತಿಲ್ಲ.
ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಎಪಿಎಲ್ ಕಾರ್ಡ್ದಾರರಿಗೆ ಅಗತ್ಯವಿರುವ ಅಕ್ಕಿ ಹಂಚಿಕೆಯಾಗಿಲ್ಲ. ಇರುವ ಕ್ಲೋಸಿಂಗ್ ಸ್ಟಾಕ್ ಬಳಸಿಕೊಳ್ಳುವಂತೆ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಆದೇಶ ಬಂದಿದೆ. ಆದರೆ ಉಡುಪಿಯಲ್ಲಿರುವ ಕ್ಲೋಸಿಂಗ್ ಸ್ಟಾಕ್ನಲ್ಲಿ ಜಿಲ್ಲೆಯ ಎಪಿಎಲ್ ಕಾರ್ಡ್ದಾರರಿಗೆ ಅಗತ್ಯವಿರುವ ಪ್ರಮಾಣದ ಅಕ್ಕಿ ದಾಸ್ತಾನಿಲ್ಲ. ಇದು ಸಮಸ್ಯೆಗೆ ಕಾರಣ. ಇಂತಹುದೇ ಸಮಸ್ಯೆ ರಾಜ್ಯದ ಇನ್ನೂ ಹಲವು ಜಿಲ್ಲೆಗಳಿಗೂ ತಟ್ಟಿರುವ ಸಾಧ್ಯತೆ ಇದೆ.
ಅಕ್ಕಿ ದಾಸ್ತಾನು ಕೊರತೆ
ಜಿಲ್ಲೆಯಲ್ಲಿ ಒಟ್ಟು ಎಪಿಎಲ್ 72,050 ಕಾರ್ಡ್ಗಳಿವೆ. ಹಲವು ತಿಂಗಳಿನಿಂದ ಕ್ಲೋಸಿಂಗ್ ಸ್ಟಾಕ್ ಅಡಿಯಲ್ಲಿ ಎಪಿಎಲ್ ಕಾರ್ಡ್ದಾರರಿಗೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯ ಕೆಲವು ರೇಶನ್ ಅಂಗಡಿಗಳಲ್ಲಿ ಎಲ್ಲ ಎಪಿಎಲ್ ಕಾರ್ಡ್ದಾರರಿಗೆ ಅಗತ್ಯವಿರುವಷ್ಟು ಪ್ರಮಾಣದ ಅಕ್ಕಿ ದಾಸ್ತಾನಿಲ್ಲದೆ ಎಪಿಎಲ್ ಕಾರ್ಡ್ ದಾರರು ಪರದಾಡುವಂತಾಗಿದೆ.
ಅಕ್ಕಿ ಖರೀದಿಗೆ ಪತ್ರ
ಪ್ರಸ್ತುತ ಜಿಲ್ಲೆಯಿಂದ ಎಪಿಎಲ್ ಕಾರ್ಡ್ದಾರರಿಗೆ ಅಕ್ಕಿ ಖರೀದಿಸಿ ನೀಡುವಂತೆ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದ್ದಾರೆ.
ಗ್ರಾಮೀಣ ಭಾಗದಲ್ಲಿ ಎಪಿಎಲ್ ಕಾರ್ಡ್ದಾರರಿಂದ ಅಕ್ಕಿಗೆ ಹೆಚ್ಚಿನ ಬೇಡಿಕೆಯಿಲ್ಲದ ಕಾರಣ ಇರುವ ದಾಸ್ತಾನು ಸಾಕಾಗುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯಿದ್ದು, ದಾಸ್ತಾನು ಸಾಲುತ್ತಿಲ್ಲ.
2.2 ಲಕ್ಷ ಕಾರ್ಡ್ಗಳಿವೆ
ಜಿಲ್ಲೆಯಲ್ಲಿ ಒಟ್ಟು 2,29,508 ಕಾರ್ಡ್ಗಳಿವೆ. ಉಡುಪಿ ತಾಲೂಕಿನಲ್ಲಿ ಅಂತ್ಯೋದಯ 11,149, ಬಿಪಿಎಲ್ 64,448, ಎಪಿಎಲ್ 66,451, ಕಾರ್ಕಳದಲ್ಲಿ ಅಂತ್ಯೋದಯ 4,164, ಬಿಪಿಎಲ್ 33,064, ಎಪಿಎಲ್ 19,559,ಕುಂದಾಪುರದಲ್ಲಿ ಅಂತ್ಯೋ ದಯ 13,596, ಬಿಪಿಎಲ್ 59,945, ಎಪಿಎಲ್ 23,575 ಕಾರ್ಡ್ಗಳಿವೆ.
ಎಪಿಎಲ್ 15,000 ನೊಂದಣಿ
ಜಿಲ್ಲೆಯಲ್ಲಿ ಒಟ್ಟು 72,050 ಎಪಿಎಲ್ ಕಾರ್ಡ್ಗಳಿವೆ. ಕೇವಲ 15,309 ಕಾರ್ಡ್ದಾರರು ಮಾತ್ರ ಪಡಿತರ ಸಾಮಗ್ರಿ ಪಡೆಯಲು ನೊಂದಾಯಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್