ಸಮಾಜದ ಅಭಿವ್ಯಕ್ತಿ ಮಹಾಭಾರತ: ತೋಳ್ಪಾಡಿ
'ಮಹಾಭಾರತ ಮತ್ತು ಅದರ ತಣ್ತೀಶಾಸ್ತ್ರೀಯ ದೃಷ್ಟಿ'
Team Udayavani, Jul 23, 2019, 5:21 AM IST
ಉಡುಪಿ: ಪುರಾಣಗಳು, ಮಹಾಭಾರತ, ವೇದವಿಭಾಗವನ್ನು ಓರ್ವ ವೇದವ್ಯಾಸರು ಹೇಗೆ ಮಾಡಿರಲು ಸಾಧ್ಯ ಎಂಬ ಪ್ರಶ್ನೆ ಇದೆ. ಓರ್ವ ಕವಿಯ ಕವನವೂ ಸಮಾಜದ ಅನುಭವವಾಗಿರುತ್ತದೆ, ಅವರದಷ್ಟೇ ಆಗಿರುವುದಿಲ್ಲ. ವೇದವ್ಯಾಸರು ಸಮಾಜದ ಅಭಿವ್ಯಕ್ತಿಯನ್ನು ತೋರಿಸಿದರು ಎಂದು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.
ಮಣಿಪಾಲ ಮಾಹೆ ವಿ.ವಿ.ಯ ತಣ್ತೀಶಾಸ್ತ್ರ ವಿಭಾಗದಲ್ಲಿ ತಣ್ತೀಶಾಸ್ತ್ರ ವಿಭಾಗ ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋಧನ ಕೇಂದ್ರದಿಂದ ಸೋಮವಾರ ಆಯೋಜನೆಗೊಂಡ ‘ಮಹಾಭಾರತ ಮತ್ತು ಅದರ ತಣ್ತೀಶಾಸ್ತ್ರೀಯ ದೃಷ್ಟಿ’ ಕುರಿತು ಮಾತನಾಡಿದ ಅವರು, ಪ್ರಜ್ಞೆಗೆ ಚಲನೆ ಇಲ್ಲ. ಅದು ಅನೇಕರನ್ನು ನೋಡಿ ಅವರನ್ನು ಅನುಕರಿಸುವ ಮೂಲಕ ಬೆಳೆಯುತ್ತದೆ ಎಂದರು.
ಇತಿಹಾಸವೆಂದರೆ ಮರುಕಳಿಕೆ
ಲೋಕವನ್ನು ಹೇಗೆ ಇದೆಯೋ ಹಾಗೆ ನೋಡುವ ಮನೋಧರ್ಮವನ್ನು ಮಹಾಭಾರತದ ತಿಳಿವಳಿಕೆ ಬೆಳೆಸುತ್ತದೆ. ದರ್ಶನವೆಂದರೂ ಇದೇ ಅರ್ಥ. ಮಹಾಭಾರತದ ಆಶಯವೂ ಇದೇ ಆಗಿದೆ. ಆದರೆ ಅದು ನಮಗೆ ಒಪ್ಪಿತವಾಗದೆ ದುರಂತವಾಗಿ ಕಂಡುಬರುತ್ತದೆ. ಇತಿಹಾಸಕಾರನಿಗೆ ಹಾಗೆ ಕಾಣುವುದಿಲ್ಲ. ಇತಿಹಾಸವೆಂದರೆ ಮರುಕಳಿಸುವುದು. ನನ್ನಲ್ಲಿಗೆ ಬಾ ಎಂಬ ಕೃಷ್ಣನ ಸಂದೇಶ ಮರುಕಳಿಕೆ ಇಲ್ಲದ ಸ್ಥಳವನ್ನು ಸೂಚಿಸುತ್ತದೆ. ಸಂವೇದನಶೀಲನಾದವನು ಮಾತ್ರ ಸಮುದಾಯದ ಅನುಭವಗಳನ್ನು ಕಾಣುವ ಮೂಲಕ ನೋಡುತ್ತಾನೆ. ಇದು ಅದುವರೆಗಿನ ಅನುಭವಗಳಿಂದ ಪಾರಾಗುವ ಮಾರ್ಗವೂ ಹೌದು ಎಂದು ತಿಳಿಸಿದರು.
ಪೂರ್ವಿಕರು ಬಹಳ ಕಷ್ಟಪಟ್ಟು ರಚಿಸಿದ ಪ್ರಾಚೀನ ಗ್ರಂಥಗಳ ಸಂಶೋಧನೆ, ವಿಮರ್ಶೆ ನಡೆಯುವ ಮೂಲಕ ಆ ಜ್ಞಾನ ಪರಂಪರೆಯನ್ನು ಮುಂದುವರಿಸುವುದು ಬಹಳ ಅಗತ್ಯವಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ನಿರ್ದೇಶಕಿ ಡಾ| ನೀತಾ ಇನಾಂದಾರ್ ಶುಭ ಹಾರೈಸಿದರು. ತಣ್ತೀಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಶ್ರೀನಿವಾಸಕುಮಾರ್ ಆಚಾರ್ಯ ಸ್ವಾಗತಿಸಿ, ಡಾ| ಎಸ್.ಆರ್. ಅರ್ಜುನ ವಂದಿಸಿದರು. ಸಂಶೋಧಕ ಡಾ| ಆನಂದತೀರ್ಥ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ