ಆಶಾ: ಕತ್ತಲೆಯಲ್ಲಿ ಭರವಸೆಯ ಬೆಳಕು
Team Udayavani, Apr 22, 2020, 5:19 PM IST
ಉಡುಪಿ ಜಿಲ್ಲೆಯಲ್ಲಿ ತರಬೇತಿ ಪಡೆದ 1,000ಕ್ಕೂ ಹೆಚ್ಚು ಮಂದಿ ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತದ ಕೊಂಡಿಗಳಾಗಿ ಕೆಲಸ ಮಾಡುತ್ತಾ ಕೋವಿಡ್ ವೈರಸ್ ಹರಡದಂತೆ ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತ ಜನರ ಸಮಸ್ಯೆಗಳಿಗೆ ಸ್ಪಂದಿಸಿ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ. ಆರೋಗ್ಯ ಯೋಧರಾಗಿರುವ ಇವರ ಶ್ರಮ ನಿಜಕ್ಕೂ ಶ್ಲಾಘನೀಯ.
ಉಡುಪಿ: ಕೋವಿಡ್ ಸೋಂಕು ತಡೆಯುವಲ್ಲಿ ಜಿÇÉಾಡಳಿತದ ವಿವಿಧ ತಂಡಗಳಿಗೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಾಥ್ ನೀಡುತ್ತಿ¨ªಾರೆ. ಗ್ರಾಮೀಣ ಭಾಗಗಳಲ್ಲಿ ತಳಮಟ್ಟದ ಆರೋಗ್ಯ ಸೇನಾನಿಗಳಾಗಿ ಮುಂಚೂಣಿಯಲ್ಲಿ ಆಶಾ ಕಾರ್ಯಕರ್ತೆಯರು ವಿರಾಮವಿಲ್ಲದೆ ದುಡಿಯುತ್ತಿ¨ªಾರೆ. ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಒಮ್ಮೆ ಮನೆ ಮನೆ ಭೇಟಿಯನ್ನು ಪೂರ್ತಿಗೊಳಿಸುರುವ ಈ “ಆರೋಗ್ಯ ಯೋಧ’ರು ಈಗ ಎರಡನೇ ಸುತ್ತಿನ ಭೇಟಿಯಲ್ಲಿದ್ದಾರೆ.
ಜಿಲ್ಲಾಡಳಿತದ ಮಾರ್ಗದರ್ಶಿ ಸೂತ್ರಗಳ ನ್ನಾಧರಿಸಿ ಕಾರ್ಯ ಕ್ಷೇತ್ರಕ್ಕಿಳಿದಿರುವ ಆಶಾ ಕಾರ್ಯಕರ್ತೆ ಯರು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿÇÉಾ ಮಟ್ಟದ ಅಧಿಕಾರಿಗಳಿಗೆ ಸ್ಥಳೀಯ ಸಂಪರ್ಕ ಕೊಂಡಿಗಳಾಗಿ ಕೆಲಸ ಮಾಡುತ್ತಿ¨ªಾರೆ. ಆರಂಭದಲ್ಲಿ ಕರಪತ್ರ ವಿತರಣೆ, ಮನೆ ಮನೆಗಳಲ್ಲಿ ಜಾಗೃತಿ ಕೆಲಸ ಮಾಡಿರುವ ಇವರು ಪ್ರಸ್ತುತ ಹೋಂ ಕ್ವಾರಂಟೈನ್ನಲ್ಲಿರುವವರ ವಿಶೇಷ ನಿಗಾ ಕಾರ್ಯದಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳಿಗೆ ನೆರವಾಗುತ್ತಿ¨ªಾರೆ.
ಕೆಲವೆಡೆ ಹೋಂ ಕ್ವಾರಂಟೈನ್ನಲ್ಲಿರುವವರ ಆಹಾರ ಆವಶ್ಯಕತೆಗಳನ್ನು ಇತರ ಸಂಘ- ಸಂಸ್ಥೆಗಳ ನೆರವಿನೊಂದಿಗೆ ಪೂರೈಸುವ ಕೆಲಸವನ್ನು ಕೂಡ ಅವರು ಮಾಡುತ್ತಿ¨ªಾರೆ.
ಮನೆಮನೆಗಳಿಗೆ ತೆರಳಿ ಜಾಗೃತಿ
ಉಡುಪಿ ಜಿÇÉೆಯಲ್ಲಿ ಸುಮಾರು 1,000 ಮಂದಿ ಆಶಾ ಕಾರ್ಯಕರ್ತೆಯರು ಮನೆಮನೆಗಳಿಗೆ ತೆರಳಿ ಜಾಗೃತಿ ಮೂಡಿಸುದರೊಂದಿಗೆ ಕೋವಿಡ್ ವೈರಸ್ ತಡೆ ಕಾರ್ಯದಲ್ಲಿ ತೊಡಗಿಸಿಕೊಂಡಿ¨ªಾರೆ. ತಾಲೂಕು, ಜಿÇÉಾ ಮಟ್ಟದಲ್ಲಿ ತಲಾ 5 ಮಂದಿ ಮೆಂಟರ್ ಆಶಾ ಸುಪರ್ವೈಸರ್ಗಳಿ¨ªಾರೆ. ಪ್ರತಿದಿನದ ಮಾಹಿತಿಯನ್ನು ಆಯಾ ದಿನ ಸಂಜೆ ಮೇಲಧಿಕಾರಿಗಳಿಗೆ ನೀಡುವರು. ಯಾವುದೇ ವ್ಯಕ್ತಿಗಳ ಬಗ್ಗೆ ಸಂಶಯಗಳಿದ್ದರೆ ಅದನ್ನು ಕೂಡ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಸಲಹೆ ಸೂಚನೆಯಂತೆ ಮುಂದುವರಿಯುವರು.
ಮುಂಚೂಣಿ ಪಾತ್ರ
ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ಸೇವೆ ನೀಡುವುದರ ಜತೆಗೆ ರಕ್ತದಾನ ಇನ್ನಿತರ ಆರೋಗ್ಯಕ್ಕೆ ಸಂಬಂಧಿಸಿ ಕೆಲಸ ಕಾರ್ಯ ನಡೆಸುತ್ತಿದ್ದರು. ಈಗ ಅವರು ಕೋವಿಡ್ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವರು. ಇತರ ಆರೋಗ್ಯ ಸಿಬಂದಿಯಂತೆ ಅವರ ಸೇವೆಯೂ ಕೂಡ ಮಹತ್ವದ್ದಾಗಿದೆ.
ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬಂದಿ ಜತೆ ಆಶಾ ಕಾರ್ಯಕರ್ತೆಯರು ಕೂಡ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಲ್ಲರೂ ಸಹಕರಿಸಿ ಸ್ಪಂದನೆ ನೀಡುತ್ತಿದ್ದಾರೆ. ಕೋವಿಡ್ ವೈರಸ್ ಹಿಮ್ಮೆಟ್ಟಿಸಲು ಎಲ್ಲರ ಸಹಕಾರ ಕೂಡ ಅಗತ್ಯವಾಗಿದೆ. ಅದು ಸಿಗುತ್ತಿದೆ.
– ಸುಧೀರ್ಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿಗಳು, ಉಡುಪಿ
ಎಲ್ಲರಿಂದಲೂ ಉತ್ತಮ ಸಹಕಾರ
ಮಾಹಿತಿ ಸಂಗ್ರಹಕ್ಕೆಂದು ಮನೆಗಳಿಗೆ ಭೇಟಿ ನೀಡಿದ ಸಂದರ್ಭ ಜನರು ಸಹಕಾರ ನೀಡುತ್ತಿದ್ದಾರೆ. ನಾವು ಕೇಳಿದ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡುತ್ತಿದ್ದಾರೆ. ಇಲ್ಲಿನ ಜನರಿಗೆ ನಮ್ಮ ಬಗ್ಗೆ ಉತ್ತಮ ಗೌರವ ಇದೆ.
– ಚಂದ್ರಾವತಿ, ಆಶಾ ಕಾರ್ಯಕರ್ತೆ
ನಾವು ಮಾಡಬೇಕಿರುವುದು
- ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ನಮ್ಮ ಮನೆಗೆ ಬಂದಾಗ ಅವರು ಕೇಳಿದ ಮಾಹಿತಿಯನ್ನು ಸರಿಯಾಗಿ ನೀಡಿ. ನೀವು ಹೊರಗಿನ ಪ್ರದೇಶಗಳಿಗೆ ಹೋಗಿದ್ದರೆ, ನಿಮ್ಮ ಮನೆಗೆ ಹೊರಗಿನವರು ಬಂದಿದ್ದರೆ ಮಾಹಿತಿಯನ್ನು ನೀಡಲು ಹಿಂಜರಿಯದಿರಿ.
- ನಮ್ಮ ಆರೋಗ್ಯ ಕಾಳಜಿಗಾಗಿ ನಮ್ಮಲ್ಲಿರುವ ಆರೋಗ್ಯ ಸಂಬಂಧಿತ ವಿವಿಧ ಪ್ರಶ್ನೆಗಳನ್ನು ಕೇಳಿದಾಗ ಅದಕ್ಕೆ ಬೇಕಾದ ಮಾಹಿತಿಯನ್ನೂ ನೀಡಿ. ನಾವು ಅದಕ್ಕೆ ಔಷಧ ಪಡೆಯುತ್ತಿದ್ದೇವಲ್ಲ ಎಂದು ಮಾಹಿತಿ ನೀಡದಿರಿ.
- ಹಿರಿಯರು ಮತ್ತು ಸಣ್ಣ ಮಕ್ಕಳು ಇರುವಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿರುವುದು ಸಾಮಾನ್ಯ. ಆದರೆ ಈ ಮಾಹಿತಿಯೂ ಈಗಿನ ಸಮಯದಲ್ಲಿ ಇವರಿಗೆ ತುಂಬಾ ಮಹತ್ವದ್ದಾಗಿದೆ. ಕೋವಿಡ್ ವೈರಸ್ ಹೆಚ್ಚು ಕಾಡುವುದು ಇವರನ್ನೇ ಆಗಿರುವುದರಿಂದ ಈ ಮಾಹಿತಿಯನ್ನು ಮುಚ್ಚಿಡಬೇಡಿ.
- ಸಾಧ್ಯವಾದರೆ ನಿಮ್ಮ ಪರಿಸರದಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅಥವಾ ಹೊರಗಿನಿಂದ ಬಂದ ಮಾಹಿತಿ ಇದ್ದರೂ ಅದನ್ನು ಆರೋಗ್ಯ ಕಾರ್ಯಕರ್ತೆಯರೊಂದಿಗೆ ಹಂಚಿಕೊಳ್ಳಿ.
- ನಮ್ಮ ಆರೋಗ್ಯ ವಿಚಾರಿಸಲು ಬರುವ ಇವರನ್ನು ನಮ್ಮ ಮನೆಗೆ ಬರುವ ಅತಿಥಿಗಳಿಗಿಂತಲೂ ಹೆಚ್ಚು ಗೌರವದಿಂದ ಸ್ವಾಗತಿಸುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ