ಮಳೆಗಾಲ ಆರಂಭದಲ್ಲೇ ಮೆಸ್ಕಾಂಗೆ 32.10 ಲ.ರೂ.ನಷ್ಟ
Team Udayavani, Jun 17, 2019, 5:34 AM IST
ಉಡುಪಿ: ಈ ಬಾರಿಯ ಮಳೆಗಾಲದ ಆರಂಭದಲ್ಲೇ ಮೆಸ್ಕಾಂ ಇಲಾಖೆಗೆ 32.10 ಲ.ರೂ. ನಷ್ಟ ಉಂಟಾಗಿದೆ.
ವಿದ್ಯುತ್ ಕಂಬಗಳ ಮುರಿತ, ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿರುವುದು ಮೊದಲಾದವುಗಳಿಗೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಜೂ.1ರಿಂದ 12ರ ವರೆಗೆ ಗಾಳಿ, ಮಳೆ, ಸಿಡಿಲು, ಮರ ಬಿದ್ದು ಮೆಸ್ಕಾಂನ 276ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದಿವೆ. ಸುಮಾರು 35ರಷ್ಟು ಟ್ರಾನ್ಸ್ಫಾರ್ಮರ್ಗಳು ಹಾಳಾಗಿವೆ. ಸುಮಾರು 8.42ಕಿ.ಮೀ.ನಷ್ಟು ವಿದ್ಯುತ್ ತಂತಿಗಳು ಹಾನಿಗೊಂಡಿವೆ.
ಎಲ್ಲೆಲ್ಲಿ ನಷ್ಟ?
ಮೆಸ್ಕಾಂನ ಉಡುಪಿ ಸಬ್ ಡಿವಿಜನ್ನಲ್ಲಿ ಭಾರಿ ಗಾಳಿ ಮಳೆಗೆ ಸುಮಾರು 6 ವಿದ್ಯುತ್ ಕಂಬಗಳು ಮುರಿದಿವೆ. 3 ಟ್ರಾನ್ಸ್ಫಾರ್ಮರ್ಗಳು ಹಾಳಾಗಿವೆ.
ಮಣಿಪಾಲ ಸಬ್ ಡಿವಿಜನ್ಗೆ ಸಂಬಂಧಿಸಿದಂತೆ ಮಣಿಪಾಲ, ಪ್ರಗತಿ ನಗರ, ಹಿರಿಯಡಕ, ಪರ್ಕಳ, ಅಲೆವೂರು ಹಾಗೂ ಮೂಡುಬೆಳ್ಳೆ ಸೆಕ್ಷನ್ಗಳಲ್ಲಿ ಸುಮಾರು 50 ಕಂಬಗಳು ಮುರಿದಿದ್ದು, 7 ಟ್ರಾನ್ಸ್ಫಾರ್ಮರ್ಗಳು ಸುಟ್ಟಿವೆ. ಬ್ರಹ್ಮಾವರ ಸಬ್ ಡಿವಿಜನ್ ಪೇತ್ರಿಯಲ್ಲಿ ಒಂದು ವಿದ್ಯುತ್ ಕಂಬಕ್ಕೆ
ಹಾನಿಯಾಗಿದ್ದು, 3 ವಿದ್ಯುತ್ ಪರಿವರ್ತಕಗಳು ಸುಟ್ಟಿವೆ. ಕಾರ್ಕಳ ಸಬ್ ಡಿವಿಜನ್ನಲ್ಲಿ ಒಟ್ಟು 1 ವಿದ್ಯುತ್ ಪರಿವರ್ತಕಗಳು ಹಾಗೂ ಸುಮಾರು 36ಕ್ಕೂ ಅಧಿಕ ವಿದ್ಯುತ್ ಕಂಬಗಳು ಗಾಳಿ, ಮಳೆ, ಸಿಡಿಲು, ಮರ ಬಿದ್ದು ಹಾನಿಗೊಂಡಿವೆ.
ಮುಂಗಾರು ಮಳೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದ್ದ ಮೆಸ್ಕಾಂ ಈಗಾಗಲೇ ತುಂಡಾದ ವಿದ್ಯುತ್ ಕಂಬಗಳು, ಹಾಳಾದ ವಯರ್ ಹಾಗೂ ವಿದ್ಯುತ್ ಪರಿವರ್ತಕಗಗಳನ್ನು ಬದಲಾಯಿಸಲಾಗಿದೆ ಎಂದು ಮೆಸ್ಕಾಂನ ಜಿಲ್ಲಾ ಅಧೀಕ್ಷಕ ಅಭಿಯಂತರ ನರಸಿಂಹ ಪಂಡಿತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು