ಬಸ್ರೂರು ಪರಿಸರದಲ್ಲಿ ಕಾತಿ ಬೆಳೆಗೆ ಬಿತ್ತನೆ ಆರಂಭ
Team Udayavani, Jun 16, 2019, 5:05 AM IST
ಬಸ್ರೂರು: ಬಸ್ರೂರು ಸೇರಿದಂತೆ ಕಂದಾವರ, ಬಳ್ಕೂರು, ಕಂಡ್ಲೂರು, ಆನಗಳ್ಳಿ , ಗುಲ್ವಾಡಿ, ಜಪ್ತಿ ಮುಂತಾದೆಡೆ ಮುಂಗಾರು ಮಳೆ ತಡವಾಗಿ ಆರಂಭವಾದರೂ ಕಾತಿ ಬೆಳೆಗೆ ಭತ್ತದ ಬೀಜ ಬಿತ್ತನೆ ಕಾರ್ಯ ಆರಂಭವಾಗಿದೆ.
ಸಾಮಾನ್ಯವಾಗಿ ಮುಂಗಾರು ಮಳೆ ಬಂದ ನಂತರ ಗದ್ದೆ ಹದ ಮಾಡಿ ಅಗೆಡಿಗೆ (ಭತ್ತದ ಸಸಿ ಬೆಳೆಯುವ ಗದ್ದೆ) ಬೀಜ ಬಿತ್ತುವ ಕಾರ್ಯ ನಡೆಯುವ ರೂಢಿಯಿತ್ತು. ಆದರೆ ಈ ಬಾರಿ ಮಾತ್ರ ಜೂನ್ ತಿಂಗಳ ಆರಂಭದಲ್ಲಿ ಮಳೆಯ ಸದ್ದಿಲ್ಲದ ಕಾರಣ ರೈತ ಕೃತಕ ನೀರಾವರಿಯ ಮೊರೆ ಹೋಗಿದ್ದಾನೆ!
ಈ ಪರಿಸರದಲ್ಲಿ ಸಾಮಾನ್ಯವಾಗಿ ಎಂ.ಒ. 4 ಭತ್ತದ ತಳಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆೆ. ಕಳೆದ ವರ್ಷವೂ ಇದೇ ಮಾದರಿಯ ಬೀಜವನ್ನು ರೈತರು ಆಯ್ಕೆ ಮಾಡಿಕೊಂಡಿದ್ದರು ಎಂಬುದು ಗಮನಾರ್ಹ.
ಈ ಬಾರಿ ಮಳೆ ವಿಳಂಬವಾದರೂ ತನ್ನ ಬೇಸಾಯದ ಕಾರ್ಯವನ್ನು ರೈತ ನಿಲ್ಲಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ