ಬೋಳ ಪಾಲಿಂಗೇರಿ ವೆಂಟೆಡ್‌ ಡ್ಯಾಂ ಕಾಮಗಾರಿ ಶುರು


Team Udayavani, Mar 21, 2019, 1:00 AM IST

dam.jpg

ಬೆಳ್ಮಣ್‌: ಬೋಳ ಹಾಗೂ ಕಡಂದಲೆ ವ್ಯಾಪ್ತಿಯ ಸುಮಾರು ಸಾವಿರ ಎಕರೆ ಕೃಷಿ ಭೂಮಿಗೆ ಆಧಾರವಾಗಬಲ್ಲ 2.75 ಕೋಟಿ ರೂ. ಅಂದಾಜು ವೆಚ್ಚದ ಬೋಳ ಪಾಲಿಂಗೇರಿ ಶಾಂಭವಿ ನದಿ ವೆಂಟೆಡ್‌ ಡ್ಯಾಂನ ಕಾಮಗಾರಿ ಆರಂಭವಾಗಿದ್ದು ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಸೇತುವೆ ಸಹಿತ ಅಣೆಕಟ್ಟು
ಸಣ್ಣ ನೀರಾವಿ ಇಲಾಖೆಯ ಅನುದಾನದಿಂದ ನಡೆಯುವ ಈ ಅಣೆಕಟ್ಟುವಿನ ಜತೆ ಸೇತುವೆಯನ್ನೂ ನಿರ್ಮಿಸಲಾಗುತ್ತಿದೆ. ಈ ವರೆಗೆ ಬೋಳದ ಅಂಡಮಾನ್‌ ಎಂದು ಕರೆಯಲ್ಪಡುತ್ತಿದ್ದ ಅಂಬರಾಡಿಗೆ ಈ ಹಿಂದೆ ಬೋಳದಿಂದ ಸುಮಾರು 5-6 ಕಿ.ಮೀ ದೂರವಿತ್ತು. ಮುಂದಿನ ದಿನಗಳಲ್ಲಿ ಅಣೆಕಟ್ಟು ನಿರ್ಮಾಣದಿಂದ ಅಂಬರಾಡಿ-ಬಾನಂಗಡಿ ರಸ್ತೆಮೂಲಕ ಕೇವಲ 500 ಮೀ. ನಷ್ಟು ಕ್ರಮಿಸಿ ಅಂಬರಾಡಿ ತಲುಪಬಹುದಾಗಿದೆ. ಬೋಳ ಮುಗುಳಿ ಬ್ರಹ್ಮಲಿಂಗೇಶ್ವರ ದೇಗುಲಕ್ಕೂ ಇದು ಹತ್ತಿರದ ಮಾರ್ಗವಾಗಲಿದೆ.

ಕಡಂದಲೆ-ಬೋಳ ಇನ್ನು ಸದಾ ಹಸಿರು
ಶಾಂಭವಿ ನದಿಯ ಈ ಅಣೆಕಟ್ಟು ಈ ಮಳೆಗಾಲದ ಮೊದಲು ಪೂರ್ತಿಗೊಂಡು ಮುಂದಿನ ಬೇಸಗೆಯಲ್ಲಿ ನೀರು ಸಂಗ್ರಹಿಸಿ ಕಡಂದಲೆ ಹಾಗೂ ಬೋಳದ ಸಾವಿರಾರು ಎಕರೆ ಕೃಷಿ ಭೂಮಿಗೆ ಆಧಾರವಾಗಬಲ್ಲದು. ಈ ಮೂಲಕ ಈ ಭಾಗದ ಕೃಷಿ ಭೂಮಿ ಸದಾ ಹಸಿರಾಗುವುದರಲ್ಲಿ ಸಂಶಯವಿಲ್ಲ. ಈ ಭಾಗದ ಬಾವಿಗಳಲ್ಲಿಯೂ ನೀರಿನ ಒರತೆ ಹೆಚ್ಚಾಗಲಿದ್ದು ಕುಡಿಯುವ ನೀರಿನ ಸಮಸ್ಯೆಯೂ ದೂರವಾಗಲಿದೆ.

ನಿರ್ವಹಣೆಯೂ ಸರಳ
ಈ ಕಾಮಗಾರಿಯನ್ನು ಕುಂದಾಪುರ ಮೂಲದ ಜಿ.ಗೋಕುಲ ಹೆಗ್ಡೆಯವರು ವಹಿಸಿಕೊಂಡಿದ್ದು ಅಣೆಕಟ್ಟುವಿಗೆ ಕಬ್ಬಿಣದ ಹಲಗೆಗಳನ್ನು ಅಳವಡಿಸ ಲಾಗುವುದಲ್ಲದೆ ನಿರ್ವಹಣೆಯೂ ಸರಳವಾಗಿರುತ್ತದೆ ಎಂದಿದ್ದಾರೆ. ಮಳೆಗಾಲದ ಮೊದಲು ಕಾಮಗಾರಿ ಮುಗಿಯುವ ಸಾಧ್ಯತೆ ಇದ್ದು ಬಂಡೆಯ ಮೇಲೆಯೇ ಅಣೆಕಟ್ಟು ನಿರ್ಮಿಸಬೇಕಾಗಿರುವುದರಿಂದ ಕಾಮಗಾರಿ ತುಸು ನಿಧಾನಗೊಳ್ಳುವ ಸಾಧ್ಯತೆ ಇದೆ ಎಂದು  ಕಾಮಗಾರಿಯ ಮೇಲ್ವಿಚಾರಕ ಗುರುರಾಜ್‌ ತಿಳಿಸಿದ್ದಾರೆ. ಕಾಮಗಾರಿ ಮುಗಿದ ಕೂಡಲೇ ನೀರು ನಿಲ್ಲಿಸಿ ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಿದ ಬಳಿಕ ಉದ್ಘಾಟನೆ ನಡೆಯಲಿದೆ. ಈ ಮೂಲಕ ಬೋಳ ಗ್ರಾಮದ ನೀರಿನ ಬವಣೆಯನ್ನು ನಿವಾರಿಸಲಿದೆ.

ಕೃಷಿಭೂಮಿಗೆ ನೀರು
ಬೋಳ ಪಾಲಿಂಗೇರಿಯ 2.25 ಕೋಟಿ ರೂ. ವೆಚ್ಚದ ಅಣೆಕಟ್ಟು ಗ್ರಾಮದ ಕೃಷಿಭೂಮಿಗೆ ನೀರುಣಿಸಲಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಸಂಕಮಾರು ವಾರ್ಡ್‌ ಹೊರತು ಪಡಿಸಿ ಎಲ್ಲೂ ನೀರಿನ ಸಮಸ್ಯೆ ಇಲ್ಲ. ಈ ವಾರ್ಡ್‌ಗೆ ಶಾಂಭವೀ ನದಿಯಲ್ಲಿ ಬಾವಿ ತೋಡಿ ನೀರು ಪೂರೈಸುವ ಬಗ್ಗೆ ಯೋಜನೆ ಇದೆ. 
-ಬೋಳ ಸತೀಶ್‌ ಪೂಜಾರಿ,  ಬೋಳ ಗ್ರಾ.ಪಂ. ಅಧ್ಯಕ್ಷ

–  ಶರತ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.