Brahmavar ಬಾರಕೂರು ಕಾಲೇಜಿನಲ್ಲಿ ಕಳವಿಗೆ ಯತ್ನ
Team Udayavani, Sep 13, 2023, 1:03 AM IST
ಬ್ರಹ್ಮಾವರ: ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಪ್ರ.ದ. ಕಾಲೇಜಿನಲ್ಲಿ ಸೆ. 9ರಿಂದ 11ರ ನಡುವೆ ಕಳವಿಗೆ ಯತ್ನ ನಡೆದಿದೆ.
ಕಾಲೇಜಿಗೆ ಬೀಗ ಹಾಕಿದ್ದ ಸಮಯ ಪ್ರಾಂಶುಪಾಲರ ಕೊಠಡಿ ಬೀಗ ಒಡೆದು ಅಲ್ಲಿನ 3 ಮತ್ತು ರೆಕಾರ್ಡ್ ರೂಂನ 12 ಕಪಾಟು ಬಾಗಿಲು ತೆರೆದು, ಮೇಜು ಡ್ರಾವರ್ಗಳ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.