SLRM ಘಟಕಕ್ಕೂ ಮೀರಿ ಶೇಖರಣೆಯಾಗುತ್ತಿರುವ ತ್ಯಾಜ್ಯಗಳಿಗೇನು ಪರಿಹಾರ ?


Team Udayavani, Mar 7, 2019, 1:00 AM IST

slrm.jpg

ಪಡುಬಿದ್ರಿ:ಪಡುಬಿದ್ರಿ ಪಟ್ಟಣವಾಗಿ ಬೆಳೆಯುತ್ತಿರುವ ಕಾಪು ತಾಲೂಕಿನ ಎರಡನೇ ಬಲು ದೊಡ್ಡ ಪಂಚಾಯತ್‌ ಆಗಿದೆ. ತ್ಯಾಜ್ಯ ವಿಲೇವಾರಿಗೆ ಹರ ಸಾಹಸ ಪಡುತ್ತಿದ್ದ ಗ್ರಾ. ಪಂ. ತನ್ನ ಇಚ್ಛಾ ಶಕ್ತಿಯ ಕೊರತೆಯಿಂದಾಗಿ ಬೇರೆಲ್ಲೂ ಮಾಡಲಾಗದೆ ನಿರ್ಮಾಣ ಹಂತದ ತನ್ನ ನೂತನ ಗ್ರಾ. ಪಂ. ಕಟ್ಟಡದ ಎದುರೇ ಎಸ್‌ಎಲ್‌ಆರ್‌ಎಂ ಘಟಕವನ್ನು ಆರಂಭಿಸಿದೆ. ಅಮೂಲ್ಯ ಬೆಲೆಬಾಳುವ ಪಟ್ಟಣದ ಮಧ್ಯಭಾಗದ ಈ ಪ್ರದೇಶವನ್ನು ಕಸ ವಿಲೇವಾರಿಗಾಗಿ ಬಳಸಿಕೊಳ್ಳಲಾಗಿದೆ. ಆದರೆ ಇನ್ನೂ ಪಡುಬಿದ್ರಿಗೆ ಕಸವೇ ಶಾಪವಾಗಿ ಪರಿಣಮಿಸಿದೆ. ಕಸ ವಿಲೇವಾರಿ ಘಟಕಕ್ಕೂ ಅತೀತವಾಗಿ, ಶೀಘ್ರ ವಿಲೇ ಮಾಡಬೇಕಾದ ತ್ಯಾಜ್ಯದ ರಾಶಿಯು ಎಸ್‌ಆರ್‌ಎಂ ಘಟಕದ ಹೊರ ಬದಿಯಲ್ಲಿ ಶೇಖರಿಸಿ ಇಡಲಾಗಿದೆ. ಇದು ಮತ್ತೆ ಪರಿಸರದಲ್ಲಿ ದುರ್ನಾತವನ್ನೂ ಬೀರತೊಡಗಿದೆ.

ಪಡುಬಿದ್ರಿ ತನ್ನ ಹೃದಯಭಾಗದಲ್ಲೇ ತ್ಯಾಜ್ಯವನ್ನು ಹೊತ್ತು ನಿಂತಿರುವ ಬೃಹತ್‌ ಪಂಚಾಯತ್‌ ಆಗಿ ಬಿಂಬಿತವಾಗಿದೆ. ಇಂತಹಾ ತ್ಯಾಜ್ಯಗಳನ್ನು ಗುಂಡಿ ತೋಡಿ ಹೂತು ಬಿಡುವ ಪರಮ ಪಾಪಿ ಕಾರ್ಯಕ್ಕೂ ಪಂಚಾಯತ್‌ ಈಗಾಗಲೇ ಅನುವು ಮಾಡಿಕೊಟ್ಟಿದೆ. ಈಗಾಗಲೇ ಎರಡು ಮೂರು ಬಾರಿ ಎಸ್‌ಎಲ್‌ಆರ್‌ಎಂ ಘಟಕದ ಪಕ್ಕದ ಭೂಮಿಯಲ್ಲೇ ಕೊಳೆತು ನಾರುವ ತ್ಯಾಜ್ಯಗಳನ್ನು ಜೆಸಿಬಿ ಸಹಾಯದಿಂದ ಗುಂಡಿ ತೋಡಿ ಹೂಳಲಾಗಿದೆ. ಫಲವತ್ತಾದ ಭೂಮಿಯನ್ನು ಶಾಶ್ವತವಾಗಿ ಮರಣ ಕೂಪವನ್ನಾಗಿಸಲಾಗಿದೆ. ಹಸಿ ಕಸ, ಒಣ ಕಸಗಳ ಜತೆಗೇ ಮೀನು, ಕೋಳಿ ಸಾಂಬಾರ್‌ಗಳ ತಾಜ್ಯವನ್ನೂ ಎಸ್‌ಎಲ್‌ಆರ್‌ಎಂ ಘಟಕಕ್ಕೆ ನೀಡಲಾಗುತ್ತಿದ್ದು ಇವುಗಳ ವಿಲೇವಾರಿಗೆ ಮತ್ತೆ ಘಟಕದ ಗುತ್ತಿಗೆದಾರರು ಈಗಿನ ಪರಿಸ್ಥಿತಿಯಲ್ಲಿ ಕಾದಿರುವಂತಿದೆ. 

ಪಡುಬಿದ್ರಿಯಲ್ಲಿ 3 – 4ಟನ್‌ ತ್ಯಾಜ್ಯವನ್ನು ದಿನಂಪ್ರತಿ ಸಂಗ್ರಹಿಸಲಾಗುತ್ತಿದೆ. ಹಸಿ ಕಸ 1ಟನ್‌ ಇರುತ್ತದೆ. 2.5ಟನ್‌ ತ್ಯಾಜ್ಯವನ್ನು ಘಟಕದಲ್ಲಿ ವಿಂಗಡಿಸಲಾಗುತ್ತಿದೆ. ಕೊನೆಯಲ್ಲಿ 20 – 30 ಕೆಜಿಗಳಷ್ಟು ವಿಲೇವಾರಿ ಮಾಡಲಾಗದ ಸುಮಾರು 1ಗೋಣಿಗಳಷ್ಟು ಕಸವಿರುತ್ತದೆ. ನಾವೂ ಇದನ್ನು ನಿಯಮಿತವಾಗಿ ಹೂಳಬೇಕಾಗುತ್ತದೆ. ಇಲ್ಲಿ ನಾವು ಅದನ್ನೇ ಮಾಡುತ್ತಿದ್ದೇವೆ. ಮತ್ತೆ 3 – 4 ತಿಂಗಳುಗಳಲ್ಲಿ ಗೊಬ್ಬರವಾದ ಬಳಿಕ ತೆಗೆಯುವಂತಾದ್ದು ಪರಿಪೂರ್ಣ ಕ್ರಮವಾಗಿದೆ. ಹಾಗಾಗಿ ಕೊನೆ ಕ್ಷಣದ ಕಸ ಮತ್ತು ಒದ್ದೆ ಕಸಗಳನ್ನು ಇಲ್ಲವಾಗಿಸಲು ಸುಮಾರು 40ಲಕ್ಷ ರೂ. ಗಳ ಹೂಡಿಕೆಯೊಂದಿಗೆ ಇನ್ಸಿನ್‌ರೇಟರ್‌ ಹಾಗೂ ಇನ್ನೊಂದು ಮೆಷಿನ್‌ಗಳನ್ನು ಸ್ಥಾಪಿಸಬೇಕಿದೆ. ಪಂಚಾಯತ್‌ ನಿರ್ಮಾಣ ಹಂತದ ಕಟ್ಟಡದ ಎದುರು ಪ್ಲಾಸ್ಟಿಕ್‌ ಕಸಗಳನ್ನು ತೂಕ ಮಾಡಿ ಇಟ್ಟಿರುವುದಾಗಿದೆ. ಅದು ಒಂದೆರಡು ದಿನಗಳಲ್ಲಿ ಇಲ್ಲವಾಗುತ್ತದೆ .
– ರಮೀಝ್ ಹುಸೈನ್‌,  ಎಸ್‌ಎಲ್‌ ಆರ್‌ಎಂ ಘಟಕದ ಗುತ್ತಿಗೆದಾರ

 “ಉದಯವಾಣಿ’ ಮಾತನಾಡಿಸಿದಾಗ ನಮಗೆ ಜಾಗದ ಕೊರತೆ ಇದೆ. ಈ ಘಟಕಕ್ಕೆ ಈಗಾಗಲೇ 1, 29ಮನೆಗಳು) ಮತ್ತು 8ನೇ ವಾರ್ಡ್‌(ಪೇಟೆ, ಸಂತೆಕಟ್ಟೆ, ಅಂಗಡಿ, ಮನೆಗಳು)ನ ತ್ಯಾಜ್ಯಗಳನ್ನು ತರಲಾಗುತ್ತಿದೆ. ವಿಲೇವಾರಿ ಮಾಡಲಾಗದ ತ್ಯಾಜ್ಯಗಳನ್ನು ಗ್ರಾಮಸ್ಥರು ನೀಡುತ್ತಿರುವುದೂ ಪರಿಹರಿಸಲಾರದ ತ್ಯಾಜ್ಯ ಸಮಸ್ಯೆಗೆ ಮುಖ್ಯ ಕಾರಣವೆನಿಸಿದೆ. ಹಿಂದಿನ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಈ ಘಟಕವನ್ನು ಸ್ಥಾಪಿಸಲಾಗಿದ್ದು ಇಡಿಯ ಗ್ರಾಮದ ತ್ಯಾಜ್ಯ ವಿಲೇವಾರಿಗೆ ಮತ್ತಷ್ಟು ಎಸ್‌ಎಲ್‌ಆರ್‌ಎಂ ಘಟಕಗಳ ಅವಶ್ಯಕತೆ ಪಡುಬಿದ್ರಿಗಿದೆ. ನೂತನ ಜಿಲ್ಲಾಧಿಕಾರಿ ಅವರನ್ನು ಈ ಕೂಡಲೇ ಕ್ಷೇತ್ರ ಶಾಸಕರ ಮತ್ತು ಪಿಡಿಒ ಜತೆ ಹೋಗಿ ಕಾಣುತ್ತೇವೆ. ಸಮಸ್ಯೆಯ ಪರಿಹಾರಕ್ಕೆ ಚಿಂತಿಸಲಾಗುತ್ತದೆ .
– ದಮಯಂತಿ ವಿ. ಅಮೀನ್‌ , ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ 

ಟಾಪ್ ನ್ಯೂಸ್

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.