ಸಂಪಾದನೆಯಿಲ್ಲದೆ ಜೀವನ ದುಸ್ತರ; ಅವಧಿ ವಿಸ್ತರಣೆಗೆ ಬೇಡಿಕೆ
Team Udayavani, May 7, 2021, 5:20 AM IST
ಮಲ್ಪೆ: ಪ್ರಾಕೃತಿಕ ವಿಕೋಪ, ಮೀನಿನ ಕ್ಷಾಮ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ನಲುಗಿದ ಮತ್ಸೋದ್ಯಮ ಕೊರೊನಾಘಾತದಿಂದ ತತ್ತರಿಸಿದೆ.
ಕಳೆದ ವರ್ಷ ಐದಾರು ತಿಂಗಳು ಕೋವಿಡ್ ಭಯದಿಂದ ಮೀನುಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಎರಡನೇ ಅಲೆಯಿಂದಾಗಿ ಮೀನುಗಾರರು ಸಂಕಷ್ಟ ಎದುರಿಸುವಂತಾಗಿದೆ.
ಮೀನು ಮಾರಾಟಕ್ಕೆ ಸಮಸ್ಯೆ :
ಕೋವಿಡ್ ನಿಯಂತ್ರಣಕ್ಕೆ ಸರಕಾರದ ಕರ್ಫ್ಯೂ ನಿಯಮದಿಂದಾಗಿ ಸಮುದ್ರ ದಲ್ಲಿ ಮೀನು ಹಿಡಿಯುವುದಕ್ಕೆ ಸಮಸ್ಯೆ ಆಗದಿದ್ದರೂ, ತಂದ ಮೀನನ್ನು ಖರೀದಿಸಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಆಹಾರ ಪದಾರ್ಥಗಳ ಮಾರಾಟಕ್ಕೆ ಸರಕಾರ ಆವಕಾಶ ಕಲ್ಪಿಸಿದೆ. ಆದರಂತೆ ಮೀನು ಮಾರಾಟಕ್ಕೂ ಅವಕಾಶ ನೀಡಿದೆ. ಆದರೆ ಈ ಅವಧಿ ಮಾರುಕಟ್ಟೆಗೆ ತಂದು ಮೀನು ಮಾರಾಟ ಮಾಡುವವರಿಗೆ ಸಾಕಾಗುತ್ತಿಲ್ಲ. ಮೀನು ಮಾರಾಟಗಾರರು ಬಂದರಿಗೆ ತೆರಳಿ ಹರಾಜಿನಲ್ಲಿ ಮೀನು ಖರೀದಿಸಿ ಅದನ್ನು ಮೀನು ಮಾರುಕಟ್ಟೆಗೆ ತರುವಷ್ಟರಲ್ಲಿ 10 ಗಂಟೆ ಕಳೆದಿರುತ್ತದೆ. ಇದರಿಂದ ನಷ್ಟವಾಗುತ್ತಿದೆ. ದಿನನಿತ್ಯ ಮೀನು ಮಾರಿ ಜೀವನ ಸಾಗಿಸುವ ಸಾವಿರಾರು ಮೀನುಗಾರರಿಗೆ ನಿತ್ಯ ಸಂಪಾದನೆಗೆ ದಾರಿ ಇಲ್ಲವಾಗಿದೆ.
ಮೀನಿನ ಪ್ರಮಾಣ ಕಡಿಮೆ :
ಕಡಲಿನಲ್ಲಿ ಮೀನಿನ ಪ್ರಮಾಣ ಕಡಿಮೆಯಾಗಿದ್ದು, ಮಲ್ಪೆ ಬಂದರಿನಲ್ಲಿ ಶೇ. 60ರಷ್ಟು ಬೋಟುಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಮೀನಿನ ಕ್ಷಾಮದಿಂದಾಗಿ ಶೇ.100ರಷ್ಟು ಪರ್ಸೀನ್ ಬೋಟುಗಳು ಫೆಬ್ರವರಿಯಲ್ಲಿಯೇ ಮೀನುಗಾರಿಕೆ ಯನ್ನು ಮೊಟಕುಗೊಳಿಸಿ ದಡ ಸೇರಿವೆ. ಶೇ. 70ರಷ್ಟು ತ್ರಿಸೆವೆಂಟಿ ಬೋಟುಗಳು, ಶೇ. 90 ಸಣ್ಣಟ್ರಾಲ್ ಬೋಟುಗಳು ನಿಂತಿವೆ. ಡೀಸೆಲ್ ದರ ಏರಿಕೆಯಿಂದಾಗಿ ನಷ್ಟವನ್ನು ಅನುಭವಿಸುತ್ತಿದ್ದ ಬಹುತೇಕ ಆಳ ಸಮುದ್ರ ಬೋಟುಗಳು ದಡ ಸೇರಿವೆ. ಇತ್ತ ಕಡಲ ತೀರದಲ್ಲಿ ನಡೆಸುವ ನಾಡದೋಣಿಗಳಿಗೂ ಮೀನು ಸಿಗುತ್ತಿಲ್ಲ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ಅವರು.
ಕರ್ಫ್ಯೂನಿಂದಾಗಿ ದಿನನಿತ್ಯ ಮೀನು ಮಾರಾಟ ಮಾಡಿ ಜೀವನ ಸಾಗಿಸುವ ಮಹಿಳೆಯರಿಗೆ ತೊಂದರೆಯಾಗಿದೆ. ಮಧ್ಯಾಹ್ನ 12ಗಂಟೆಯವರೆಗಾದರೂ ವ್ಯಾಪಾರ ನಡೆಸಲು ಅನುಮತಿ ನೀಡಿದರೆ ಉತ್ತಮ. -ಬೇಬಿ ಎಚ್. ಸಾಲ್ಯಾನ್,ಅಧ್ಯಕ್ಷರು, ಉಡುಪಿ ತಾ| ಮಹಿಳಾ ಹಸಿಮೀನು ಮಾರಾಟಗಾರರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…