ಉಡುಪಿ: ಹಣ ಪಡೆದು ವಾಪಾಸು ನೀಡದೆ ವಂಚನೆ: ಆರೋಪಿಗೆ ಶಿಕ್ಷೆ
Team Udayavani, Aug 3, 2022, 7:26 PM IST
ಉಡುಪಿ: ಹಣ ಪಡೆದು ವಾಪಾಸು ನೀಡದೆ ವಂಚನೆ ಮಾಡಿದ ಆರೋಪಿಗೆ ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಉಡುಪಿಯ ಮೀನು ಮಾರುಕಟ್ಟೆ ಬಳಿಯ ನಿವಾಸಿ ಬಿ.ಅಬ್ದುಲ್ ಹಮೀದ್ ಸಾಹೇಬ್ ಎಂಬವರು ಈ ಹಿಂದೆ ತೆಂಕ ಎರ್ಮಾಳು ನಿವಾಸಿ ಅಬ್ದುಲ್ ಸಮದ್ ಖಾನ್ ಎಂಬಾತನಿಗೆ ಆತ ಕೇಳಿದಂತೆ 3 ಲ.ರೂ. ನೀಡಿದ್ದರು. ಬಳಿಕ ಈ ಹಣವನ್ನು ಅಬ್ದುಲ್ ಸಮದ್ ಖಾನ್ ಚೆಕ್ ರೂಪದಲ್ಲಿ ಬಿ.ಅಬ್ದುಲ್ ಹಮೀದ್ ಸಾಹೇಬ್ಗ ನೀಡಿದ್ದರು.
ಇದನ್ನೂ ಓದಿ: ಡೀಸೆಲ್ ಅನಿರೀಕ್ಷಿತ ಲಾಭ ತೆರಿಗೆ ಇಳಿಕೆ: ಕಚ್ಚಾ ತೈಲ ಶುಲ್ಕ ಹೆಚ್ಚಳ
ಆದರೆ ಚೆಕ್ ಬೌನ್ಸ್ ಆಗಿದೆ ಎಂದು ಬಿ.ಅಬ್ದುಲ್ ಹಮೀದ್ ಸಾಹೇಬ್ ಅವರು ನ್ಯಾಯಾಲಯದಲ್ಲಿ ಜು.19ರಂದು ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 3 ತಿಂಗಳ ಸಾದಾ ಸಜೆ ಹಾಗೂ 10 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ. ಫಿರ್ಯಾದುದಾರರ ಪರವಾಗಿ ನ್ಯಾಯವಾದಿ ಮಹಮ್ಮದ್ ಇಕ್ಬಾಲ್ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ