ಕಾರ್ಕಳ: ಭಾರಿ ಗಾಳಿಗೆ 200ಮೀ. ಮೇಲಕ್ಕೆ ಚಿಮ್ಮಿದ ಗದ್ದೆ ನೀರು
ನೀರಿನೊಂದಿಗೆ ಹಾರಿದ ನವಿಲು !
Team Udayavani, Aug 1, 2019, 11:18 AM IST
ಕಾರ್ಕಳ: ಗುರುವಾರ ಬೆಳಿಗ್ಗೆ ಬೀಸಿದ ಭಾರಿ ಗಾಳಿಗೆ ಕಾರ್ಕಳ ಪುರಸಭಾ ವ್ಯಾಪ್ತಿಯ ಪೆರುವಾಜೆಯಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ . ಇಲ್ಲಿನ ಮೂರು ಮನೆಗಳು, ತೋಟ ಹಾನಿಗೀಡಾಗಿದ್ದು ಹತ್ತಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.
ಗಾಳಿಯ ವೇಗಕ್ಕೆ ಗದ್ದೆಯಲ್ಲಿ ತುಂಬಿದ್ದ ನೀರು ಸುಮಾರು 200 ಮೀ. ಎತ್ತರಕ್ಕೆ ಚಿಮ್ಮಿತ್ತು. ಗದ್ದೆಯಲ್ಲಿದ್ದ ನವಿಲು ಕೂಡ ನೀರಿನೊಂದಿಗೆ ಮೇಲಕ್ಕೆ ಚಿಮ್ಮಿ, ತೇಲಾಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ
ಪೆರುವಾಜೆಯ ಬ್ಲಾಂಚ್ ಸಿಕ್ವೇರಾ, ಉಪೇಂದ್ರ ನಾಯಕ್ ರ ಮನೆಗಳಿಗೆ ಹಾನಿಯಾಗಿದ್ದು, ಮನೆಯ ಹಂಚು, ಶೀಟ್ ಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ.
ಪೆರುವಾಜೆ ಹೊಸಮನೆ ಭುಜಂಗ ಶೆಟ್ಟಿ ಅವರ ತೋಟ ಭಾರಿ ಗಾಳಿಗೆ ಹಾನಿಗೀಡಾಗಿದೆ.ಕೆಲವು ತೆಂಗಿನ ಮರಗಳು, ಇತರ ಮರಗಳು ಬುಡ ಸಮೇತ ಬಿದ್ದರೆ, ಮತ್ತೆ ಕೆಲವು ಅರ್ಧದಲ್ಲಿ ತುಂಡಾಗಿ ಬಿದ್ದಿದ್ದೆ. ಇಲ್ಲಿನ ದೇವರ ಕಟ್ಟೆಯಲ್ಲಿನ ಮಾವಿನ ಹಾಗೂ ಆಲದ ಮರ ಮಗುಚಿ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ