ಜಯ ಕರ್ನಾಟಕ ಉಡುಪಿ ಜಿಲ್ಲಾ ಕೇಂದ್ರ ಕಚೇರಿ ನಾಳೆ ಉದ್ಘಾಟನೆ
Team Udayavani, Mar 10, 2018, 6:45 AM IST
ಉಡುಪಿ: ಜಯಕರ್ನಾಟಕ ಸಂಘಟನೆಯ ನೂತನ ವಿಶಾಲವಾದ ಜಿಲ್ಲಾ ಕೇಂದ್ರ ಕಚೇರಿಯನ್ನು ಉಡುಪಿ ಸಿಟಿಬಸ್ ನಿಲ್ದಾಣ ಸಮೀಪದ ಶಿರಿಬೀಡು ಗೌರಿ ಆರ್ಕೇಡ್ನ ಪ್ರಥಮ ಮಹಡಿಯಲ್ಲಿ ಮಾ. 11ರ ಬೆಳಗ್ಗೆ 10 ಗಂಟೆಗೆ ಜಯಕರ್ನಾಟಕದ ರಾಜ್ಯ ಅಧ್ಯಕ್ಷ ಎಚ್.ಎನ್. ದೀಪಕ್ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಡಾ| ಸುದೀಪ್ ಎನ್. ಹಾಗೂ ಮುಖಂಡರಾದ ಪ್ರವೀಣ್ಚಂದ್ರ ಶೆಟ್ಟಿ, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಮತ್ತು ಯುವ ಘಟಕದ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಅನಂತರ ಬೈಂದೂರು ಸಮೀಪ ನಾವುಂದದಲ್ಲಿ ನೂತನ ಜಯಕರ್ನಾಟಕ ಯುವಘಟಕದ ಉದ್ಘಾಟನೆ ಜರಗಲಿದೆ ಎಂದು ಜಿಲ್ಲಾಧ್ಯಕ್ಷ ಕೆ. ರಮೇಶ್ ಶೆಟ್ಟಿ ತಿಳಿಸಿದ್ದಾರೆ.