ಕೈಯಾಡಿಸಿದ ಕ್ಷೇತ್ರಗಳಲ್ಲಿ ಕೃತಿರೂಪದ ಉಡುಪ


Team Udayavani, Jul 29, 2019, 12:03 PM IST

k-m-udupa

ಉಡುಪಿ: ಕಾರ್ಕಡ ಮಂಜುನಾಥ ಉಡುಪ ಎಂದು ಪೂರ್ಣ ಹೆಸರಿನಿಂದ ಹೇಳಿದರೆ ಫ‌ಕ್ಕನೆ ಯಾರಿಗೂ ತಿಳಿಯಲಾರದು. ಶನಿವಾರ ಅಗಲಿದ ಉಡುಪರನ್ನು ಕೆ.ಎಂ. ಉಡುಪ ಎಂದರೆ ಮಾತ್ರ ಜನಸಾಮಾನ್ಯರಿಗೆ ತಿಳಿದೀತು.
ದೇಶವ್ಯಾಪ್ತಿಯ ಚಿಂತನೆ

ಶಾರೀರಿಕವಾಗಿ ಸ್ವಲ್ಪ ಗಿಡ್ಡವೇ ಎನ್ನಬಹುದಾದ ಉಡುಪರ ಚಿಂತನೆ ಆಜಾನುಬಾಹು ಗಾತ್ರದ್ದು, ದೇಶ ವ್ಯಾಪ್ತಿಯದ್ದು. ಅವರು ವಿಶೇಷವಾಗಿ ಕೃಷಿ ಮತ್ತು ಅದಕ್ಕೆ ಪೂರಕವಾಗುವ ಹೈನುಗಾರಿಕೆ, ಗುಡಿ ಕೈಗಾರಿಕೆ, ಸ್ವ ಉದ್ಯೋಗ, ಪರಿಸರಸ್ನೇಹಿ ಸೌರ ವಿದ್ಯುತ್‌ ಇತ್ಯಾದಿ ಕ್ಷೇತ್ರಗಳಲ್ಲಿ ಸದಾ ಹೊಸ ಹೊಸ ಚಿಂತನೆಗಳನ್ನು ಹೊಂದಿದ್ದರು.

ಬ್ಯಾಂಕರ್‌ ಆದ ಕೃಷಿ ವಿಜ್ಞಾನಿ
ಮೂಲತಃ ಉಡುಪರು ಕೃಷಿ ವಿಜ್ಞಾನಿ. ಭತ್ತ ತಳಿಗಳ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ ಅದಕ್ಕೆ ತಕ್ಕುದಾದ ಕೃಷಿ ಇಲಾಖೆ ಯಲ್ಲಿ ಆರು ವರ್ಷ ಸಂಶೋಧನಾಧಿಕಾರಿ ಯಾಗಿ ಕೆಲಸ ಮಾಡಿದವರು. ಬಳಿಕ ಹಣಕಾಸು ಸಂಸ್ಥೆಗೆ ಸೇರಿದರೂ ತನ್ನ ಮೂಲ ಕ್ಷೇತ್ರವಾದ ಕೃಷಿ ವಿಕಾಸವನ್ನು ಮರೆಯಲಿಲ್ಲ.

ತರಕಾರಿ ಬೀಜ ವಿತರಣೆಯ ಹಿಂದೆ
ಉಡುಪರ ಈ ಚಿಂತನೆಗೆ ಇಂತಹ ಕ್ಷೇತ್ರಗಳಲ್ಲಿ ದೇಶ ಮಟ್ಟದಲ್ಲಿ ಕೈಯಾಡಿಸಿದ “ಮಣಿಪಾಲದ ಛಾಪು’ ಟಿ.ಎ. ಪೈಗಳು ಕಾರಣವೆಂದರೆ ಅತಿಶಯವಲ್ಲ. ಮನೆ ಮನೆಗಳಿಗೆ ತರಕಾರಿ ಬೀಜ ವಿತರಿಸಿದರೆ ಅಷ್ಟು ಜನರು ಸ್ವಾವಲಂಬಿಯಾಗುವುದಲ್ಲದೆ ಅವರೂ ಇತರರಿಗೆ ಒಂದಿಷ್ಟು ತರಕಾರಿ ಕೊಡುವಂತಾದರೆ ಎಷ್ಟು ಸಂಪತ್ತು ಸಂಗ್ರಹವಾದಂತಾಗುವುದಿಲ್ಲ ಎಂಬ ಟಿ.ಎ. ಪೈಯವರ ದೂರಗಾಮಿ ಚಿಂತನೆಯನ್ನು ಕೆ.ಎಂ. ಉಡುಪರು ಪ್ರತಿವರ್ಷ ಎಂಜಿಎಂ ಕಾಲೇಜಿನಲ್ಲಿ ಮೇ 29ರಂದು ನಡೆಯುವ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈಯವರ ಸ್ಮತಿ ದಿನದಂದು ತಪ್ಪದೆ ಹೇಳುತ್ತಿದ್ದರು. ತರಕಾರಿ ಬೀಜಗಳ ವಿತರಣೆಯ ಪ್ರಾಯೋಜಕತ್ವವನ್ನು ಸಿಂಡಿಕೇಟ್‌ ಬ್ಯಾಂಕ್‌ ಮುಂದುವರಿಸಿಕೊಂಡು ಬರುತ್ತಿದೆ. ಇತ್ತೀಚೆಗಷ್ಟೇ ನಡೆದ ಸ್ಮತಿದಿನ ದಂದು ಉಡುಪರು ಅನಾರೋಗ್ಯದ ಕಾರಣದಿಂದ ಹಾಜರಿರಲಿಲ್ಲ.

ಸ್ವಾವಲಂಬೀ ಚಿಂತನೆ
ತರಕಾರಿ ಬೀಜಗಳ ವಿತರಣೆಯ ಪರಿಕಲ್ಪನೆ ಅತ್ಯಂತ ಸರಳವಾದರೂ ಸಮಾಜ ವ್ಯಾಪಿಯಾದಾಗ ಅದರ ಪರಿಣಾಮ ಬಲು ದೊಡ್ಡದು ಎಂಬ ಟಿ.ಎ. ಪೈಯವರ ಚಿಂತನೆ ಯನ್ನು ಉಡುಪರು ಕೇವಲ ಪ್ರಚಾರಕಾರರಾಗದೆ ಸ್ವಂತ ಜೀವನದಲ್ಲಿಯೂ ಅಳವಡಿಸಿ ಕೊಂಡರು. ಟಿ.ಎ. ಪೈಯವರು ಸ್ಥಾಪಿಸಿದ ಭಾರತೀಯ ವಿಕಾಸ ಟ್ರಸ್ಟ್‌ನ ಟ್ರಸ್ಟಿಯಾಗಿ, ಜು. 27ರಂದು ಅಸುನೀಗುವವರೆಗೂ ನಿರ್ವಾಹಕ ವಿಶ್ವಸ್ತರಾಗಿ ಹೈನುಗಾರಿಕೆ, ಟೈಲರಿಂಗ್‌ನಂತಹ ಸಾಮಾನ್ಯ ಜನರು ಅವಲಂಬಿಸುವ ವಿಷಯಗಳ ಕುರಿತು ತರಬೇತಿ ಕೊಟ್ಟು ಅವರನ್ನು ಸ್ವಾವಲಂಬಿಗಳನ್ನಾಗಿಸಲು ಯತ್ನಿಸುವ ಮೂಲಕ ಸಮಾಜ ವಿಕಾಸದ ಪ್ರಾಕ್ಟಿಕಲ್‌ ವ್ಯಕ್ತಿಯಾದರು, ಮಕ್ಕಳಿಗೂ ನೌಕರಿಯ ದಾರಿ ತೋರಿಸದೆ ಸ್ವ ಉದ್ಯೋಗದ ದಾರಿ ತೋರಿದರು.  ನಿವೃತ್ತಿಯಾದ ಬಳಿಕ ತಾನೆಂದಿಗೂ ವೇತನ ಪಡೆಯುವ ಹುದ್ದೆಗೆ ಹೋಗು ವುದಿಲ್ಲ ಎಂದು ಪಣ ತೊಟ್ಟದ್ದಲ್ಲದೆ ಐಶಾರಾಮಿಯಾಗಿರುವುದು ಸಾಧ್ಯ ವಿದ್ದರೂ ಆ ಇಚ್ಛೆಯನ್ನೂ ಪಡಲಿಲ್ಲ.

ಪ್ರ್ಯಾಕ್ಟಿಕಲ್‌ ಗ್ರಾಮೀಣ- ಪರಿಸರವಾದಿ
ಬಹುತೇಕ ಜನರಿಗೆ ಇಂದು ಗ್ರಾಮೀಣ ಬದುಕು, ಪರಿಸರ ಕಾಳಜಿ ಕ್ಷೇತ್ರಗಳು ಶೋಕಿ, ಬ್ರಾಂಡ್‌ ಆಗಿ ಕಾಣುತ್ತಿದ್ದರೆ ಉಡುಪರು ಅದರಲ್ಲೂ ಪ್ರಾಕ್ಟಿಕಲ್‌ ಆಗಿದ್ದವರು. ಮಣಿಪಾಲ, ಉಡುಪಿಯಲ್ಲಿ ತಾರಾಸದೃಶ ಬದುಕನ್ನು ಸವೆಸಬಹುದಾಗಿದ್ದರೂ ಹುಟ್ಟಿ ಬೆಳೆದ ಮಂದಾರ್ತಿಯನ್ನು ಪ್ರೀತಿಸಿ ಅಲ್ಲೇ ವಾಸಿಸಿದರು. ನಿತ್ಯ ಮಂದಾರ್ತಿಯಿಂದ ಮಣಿಪಾಲ, ಉಡುಪಿಗೆ ಬಂದು ಹೋಗುತ್ತಿದ್ದರು. ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ ಮೊದಲಾದ ದೇಶಗಳಿಗೆ ಪ್ರವಾಸ ನಡೆಸಿದ್ದರೂ ಅವರ ಆತ್ಮ ಕನ್ನಡ, ಗ್ರಾಮೀಣ ಪರ ಇದ್ದವೆಂಬುದಕ್ಕೆ ತನ್ನ ತಂದೆ ಮರಿ ಉಡುಪರಿಂದ ಸ್ಥಾಪನೆಗೊಂಡ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಹಿ.ಪ್ರಾ. ಶಾಲೆಯ ಸಂಚಾಲಕರಾಗಿ, ವ್ಯವಸ್ಥಾಪಕ ರಾಗಿ ಅದನ್ನು ಮೇಲ್ದರ್ಜೆಗೇರಿಸಲು ಪಡುತ್ತಿದ್ದ ಪ್ರಯತ್ನ, ಆಧುನಿಕ ಬ್ಯಾಂಕ್‌ಗಳನ್ನೂ ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಬಗ್ಗಿಸಿದ ಪ್ರಯತ್ನಗಳೇ ಸಾಕ್ಷಿ.

ಹಳ್ಳಿಗರಿಗೂ ಉದೊಧಕ ಕಿವಿಮಾತು
ಮಂದಾರ್ತಿ ದೇವಸ್ಥಾನದ ಪ್ರೌಢ ಶಾಲೆ ಸ್ಥಾಪನೆಯಲ್ಲೂ ಉಡುಪರ ಕೊಡುಗೆ ಇದೆ. ಅನೇಕ ಸಂಘ ಸಂಸ್ಥೆಗಳು ಅವರನ್ನು ಕರೆದು ಅವರ ವರ್ಚಸ್ಸನ್ನು ಬಳಸಿಕೊಂಡಿದ್ದವು. ಒಂದೆಡೆ ಅಂತಾರಾಷ್ಟ್ರೀಯ ಸ್ತರದ ವಿಚಾರ ಸಂಕಿರಣಗಳಲ್ಲಿ ಉನ್ನತ ದರ್ಜೆಯ ವಿಚಾರ ಮಂಡನೆ ಮಾಡಿ ದರೂ ಇನ್ನೊಂದೆಡೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಂತಹ ಸಭೆಗಳಿಗೆ ಬರುವ ಓದುಬರೆಹ ಅಷ್ಟಕ್ಕಷ್ಟೇ ಇರುವ ವರಿಗೂ ಉದೊಧಕ ಸಲಹೆಗಳನ್ನು ನೀಡುತ್ತಿದ್ದವರು ಉಡುಪರು.

ಕಲಾಪ್ರೇಮಿ
ನಶಿಸುತ್ತಿರುವ ಹೂವಿನಕೋಲಿ ನಂತಹ ಕಲಾಪ್ರಕಾರಗಳಿಗೂ ಉತ್ತೇಜನ ನೀಡುತ್ತಿದ್ದ ಉಡುಪರು ಕಲಾಪ್ರೇಮಿಯೂ ಆಗಿದ್ದರು.

ಸೌರ ವಿದ್ಯುತ್‌ ಪ್ರಚಾರಕ
ಸೌರ ವಿದ್ಯುತ್‌ ಘಟಕಗಳಿಗೆ ಬ್ಯಾಂಕಿಂಗ್‌ ಸಾಲ ಒದಗಿಸುವುದರಲ್ಲಿ ಪ್ರವರ್ತಕರೆನಿಸಿದ ಉಡುಪರು ಸೆಲ್ಕೋ ಸಂಸ್ಥೆಯ ನಿರ್ದೇಶಕರಾಗಿ ಸೌರ ವಿದ್ಯುತ್‌ ತಂತ್ರಜ್ಞಾನದ ಪ್ರಸರಣದಲ್ಲಿ ಬಹು ಮುಖ್ಯ ಪಾತ್ರ ವಹಿಸಿದರು. ಜಾಗತಿಕ ಸ್ತರದ ವಿಚಾರ ಸಂಕಿರಣಗಳಲ್ಲಿ ಸೌರ ವಿದ್ಯುತ್‌ ಘಟಕಗಳಿಗೆ ಬ್ಯಾಂಕಿಂಗ್‌ ಸಾಲ ನೀಡುವ ಕುರಿತು ಪ್ರಬಂಧವನ್ನು ಮಂಡಿಸಿ ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನದ ಬಗೆಗೆ ಜಾಗತಿಕ ಕಾಳಜಿ ಮೂಡಿಸುವುದರಲ್ಲಿ ತನ್ನ ಕೊಡುಗೆ ಸಲ್ಲಿಸಿದ್ದರು. ಗೋಬರ್‌ ಗ್ಯಾಸ್‌, ಗೋಸಾಕಣೆ, ರೈತರಿಗೆ ಸರಳ ಸಾಲ ಯೋಜನೆಗಳನ್ನು ಸಿಂಡಿಕೇಟ್‌ ಬ್ಯಾಂಕ್‌ ಮೂಲಕ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಡುಪರು ತಾನು ಕೈಯಾಡಿಸಿದ ಎಲ್ಲ ಕ್ಷೇತ್ರಗಳಲ್ಲೂ ಕೃತಿರೂಪಿಯಾದರು.

ಕೃತಜ್ಞತಾಭಾವಕ್ಕೆ ಪರ್ಯಾಯ ಹೆಸರು
ಉಡುಪರು ಯಾವುದೇ ಸಭೆ ಸಮಾರಂಭಗಳಲ್ಲಿಯೂ ತನಗೆ ಮಾಡೆಲ್‌ ಆಗಿದ್ದ ಟಿ.ಎ. ಪೈ ಅವರನ್ನು ನೆನಪಿಸದೆ ಇರುತ್ತಿ ರಲಿಲ್ಲ. ಟಿ.ಎ. ಪೈಯವರ ಕಾಲ ಘಟ್ಟದ ಬಳಿಕ ಕೆ.ಕೆ. ಪೈಯವರ ಒಡನಾಟವನ್ನೂ ಬೆಟ್ಟು ಮಾಡು ತ್ತಿದ್ದರು. ಸರಕಾರಿ ಸೇವೆಯಲ್ಲಿದ್ದ ಉಡುಪರನ್ನು ಸಿಂಡಿಕೇಟ್‌ ಬ್ಯಾಂಕ್‌ಗೆ ಕರೆ ತಂದವರು ಟಿ.ಎ. ಪೈ. ಹೀಗೆ ಟಿ.ಎ. ಪೈ, ಕೆ.ಕೆ. ಪೈ ಯಂತಹ ಅನೇಕ ದಿಗ್ಗಜರು ಹಲವು ಜನರ ಬದುಕನ್ನು ಮೇಲ್ದರ್ಜೆಗೇರಿ ಸಿದ್ದರೂ ಉಡುಪರಲ್ಲಿದ್ದಂತಹ ಕೃತಜ್ಞತಾಭಾವ ಬೇರೆಯವರಲ್ಲಿ ಕಾಣುವುದು ವಿರಳವೆಂದು ಹೇಳಬ ಹುದು. “ಕೃತಜ್ಞತೆ ಅನ್ನುವುದು ಬಲುಮುಖ್ಯ. ಇದುವೇ ಮನುಷ್ಯನೆನಿಸಿದವನಿಗೆ ಬೇಸ್‌’ ಎನ್ನುವ ಚಿಂತಕ ಡಾ| ಬಿ.ಎಂ. ಹೆಗ್ಡೆಯವರ ಅಭಿಪ್ರಾಯವಿಲ್ಲಿ ಉಲ್ಲೇಖನೀಯ.

ಟಾಪ್ ನ್ಯೂಸ್

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

1-24-thursday

Daily Horoscope: ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಅನವಶ್ಯ ವೈಮನಸ್ಯಕ್ಕೆ ಅವಕಾಶ ಬೇಡ

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

kar49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Manipal ಗಾಂಜಾ ಸೇವನೆ: ಇಬ್ಬರು ಪೊಲೀಸ್ ವಶಕ್ಕೆ

Manipal ಗಾಂಜಾ ಸೇವನೆ: ಇಬ್ಬರು ಪೊಲೀಸ್ ವಶಕ್ಕೆ

Missing Case ಶಿರ್ವ: ನಾಲ್ವರು ಮದ್ರಸಾ ವಿದ್ಯಾರ್ಥಿಗಳು ನಾಪತ್ತೆ

Missing Case ಶಿರ್ವ: ನಾಲ್ವರು ಮದ್ರಸಾ ವಿದ್ಯಾರ್ಥಿಗಳು ನಾಪತ್ತೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

1-24-thursday

Daily Horoscope: ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಅನವಶ್ಯ ವೈಮನಸ್ಯಕ್ಕೆ ಅವಕಾಶ ಬೇಡ

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

kar49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.