ಕಲ್ಲಟ್ಟೆ – ಬೇಂಗ್ರೆ ಮಧ್ವ ನಗರ ಸಂಪರ್ಕ ರಸ್ತೆ, ಸೇತುವೆ ಬೇಡಿಕೆ
Team Udayavani, May 22, 2019, 6:10 AM IST
ಪಡುಬಿದ್ರಿ: ಪಡುಬಿದ್ರಿ ಪೇಟೆಯಿಂದ ಕಲ್ಲಟ್ಟೆ ಮೂಲಕ ಕಡಲ ತೀರದ ಬೇಂಗ್ರೆ ಮಧ್ವ ನಗರಕ್ಕೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಪ್ರಯತ್ನಗಳು ಸಾಗಿವೆ.
ಈ ಪ್ರದೇಶದಲ್ಲಿ ಸುಮಾರು 50 ಮನೆಗಳಿದ್ದು, ಹಿಂದೆ ಇವರು ಕಾಮಿನಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಕಲ್ಲಿನ ಕಾಲುಸಂಕ ಮೂಲಕ ಹಾದು ಗದ್ದೆ ಬದುವಿನ ದಾರಿಯಲ್ಲಿ ಸಂಚರಿಸುವುದು ಅನಿವಾರ್ಯವಾಗಿತ್ತು. ಇದೀಗ 750 ಮೀ. ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಸ್ಥಳೀಯರು ತಮ್ಮದೇ ಖಾಸಗಿ ಜಾಗವನ್ನು ನೀಡಿದ್ದಾರೆ. ಜಿ. ಪಂ. ಹಾಗೂ ಗ್ರಾ. ಪಂ. ಅನುದಾನ ಬಳಸಿ ಮಣ್ಣು ತುಂಬಿಸಿ ಸೇತುವೆ ಇಕ್ಕೆಲಗಳಲ್ಲಿ ಈಗಾಗಲೇ ಕಚ್ಚಾ ರಸ್ತೆ ನಿರ್ಮಾಣ ಮಾಡಲಾಗಿದೆ.
ಉಪ್ಪು ನೀರಿನ ತಡೆ ಅಣೆಕಟ್ಟು
ಕೃಷಿಯೇ ಜೀವನಾಧಾರವಾಗಿದ್ದ ಈ ಪ್ರದೇಶದ ಜನರ ಅನುಕೂಲಕ್ಕಾಗಿ ಕಾಲು ಸಂಕದ ಬಳಿಕ 15 ವರ್ಷಗಳ ಹಿಂದೆ ಉಪ್ಪು ನೀರಿನ ತಡೆ ಅಣೆಕಟ್ಟು ನಿರ್ಮಾಣವಾಗಿತ್ತು. ಅದೂ ಶಿಥಿಲಗೊಂಡಿದ್ದು, ತಡೆ ಬೇಲಿ ಕಿತ್ತು ಹೋಗಿದೆ. ಕಚ್ಚಾ ರಸ್ತೆ ನಿರ್ಮಾಣವಾಗಿರುವುದರಿಂದ ಶಿಥಿಲಾವಸ್ಥೆಯಲ್ಲಿರುವ ಕಿಂಡಿ ಅಣೆಕಟ್ಟು ಮೇಲಿಂದ ದ್ವಿಚಕ್ರ ವಾಹನಗಳಲ್ಲಿ ಜನರು ಸಂಚರಿಸುತ್ತಿದ್ದಾರೆ. ಪ್ರವಾಸೋದ್ಯಮ, ಪರಿಸರದ ದೈವ-ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಲು ಅನುಕೂಲವಾಗಿರುವ ಈ ರಸ್ತೆ ಶೀಘ್ರ ನಿರ್ಮಾಣವಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
ಅಂದಾಜು ಪಟ್ಟಿ ತಯಾರಿಸಲಿದ್ದಾರೆ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶೀಘ್ರ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಅಂದಾಜು ಪಟ್ಟಿ ತಯಾರಿಸಲಿದ್ದಾರೆ. ಮಳೆ ನೀರಿನ ಸರಾಗ ಹರಿಯುವಿಕೆಗಾಗಿ ತೂಬು ನಿರ್ಮಾಣ ಹಾಗೂ ಕಡಲತೀರ ಸಂದಿಸುವ ಭಾಗದಲ್ಲಿ ಪಿಚ್ಚಿಂಗ್ ಮಾಡಲಾಗುವುದು.
-ಶಶಿಕಾಂತ್ ಜಿ. ಪಂ. ಸದಸ್ಯ ಪಡುಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ