ಸಂಕಷ್ಟದಲ್ಲಿ ಕಾರ್ಕಳ ಕೈಗಾರಿಕಾ ತರಬೇತಿ ಸಂಸ್ಥೆ


Team Udayavani, Oct 24, 2019, 5:38 AM IST

sankasta

ಕಾರ್ಕಳ: ಬೋಧಕರ ಕೊರತೆಯಿಂದ ಕಾರ್ಕಳದಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆ ಸಂಕಷ್ಟ ದಲ್ಲಿದ್ದು, ವಿದ್ಯಾರ್ಥಿಗಳನ್ನು, ಪೋಷಕ ರನ್ನು ಆತಂಕಕ್ಕೀಡು ಮಾಡಿದೆ. ನಗರದ ಹೃದಯ ಭಾಗ ಬೋರ್ಡ್‌ ಹೈಸ್ಕೂಲ್‌ನ ಪಕ್ಕದ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕಿನ ಏಕೈಕ ಸರಕಾರಿ ಐಟಿಐ ಒಂದೇ ಒಂದು ಖಾಯಂ ಬೋಧಕರಿಲ್ಲದೇ ಬಳಲುವಂತಾಗಿದೆ.

ಕೈಗಾರಿಕಾ ತರಬೇತಿ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ
ಕೊಡುವ ನಿಟ್ಟಿನಲ್ಲಿ ಸರಕಾರ 2018ರ ಆಗಸ್ಟ್‌ ನಲ್ಲಿ ನೂತನವಾಗಿ ಐಟಿಐಯೊಂದನ್ನು ಆರಂಭಿಸಿತ್ತು. ಈ ಹಿಂದೆ ಜೆಒಸಿ ತರಗತಿ ನಡೆಸ ಲಾಗುತ್ತಿದ್ದ ಕಟ್ಟಡವನ್ನು ಇದಕ್ಕಾಗಿ ನವೀಕರಣಗೊಳಿಸಲಾಗಿತ್ತು. ಬಡ ವಿದ್ಯಾರ್ಥಿಗಳಿಗೆ ಆಸರೆಯಾಗ ಬೇಕೆನ್ನುವ ನಿಟ್ಟಿನಲ್ಲಿ ಐಟಿಐ ತೆರೆದರೂ ಸರಕಾರ ಮೂಲ ಸೌಕರ್ಯಗಳನ್ನು ಒದಗಿಸಿದೇ ಕೇವಲ ಸಂಖ್ಯೆ ಭರ್ತಿಗಾಗಿ ಐಟಿಐ ಕಾಲೇಜನ್ನು ನೀಡಿದಂತಾಯಿತು.

ಯಾವೆಲ್ಲ ಕೋರ್ಸ್‌ಗಳಿವೆ ?
ಕಾರ್ಕಳ ಐಟಿಐನಲ್ಲಿ ಇಲೆಕ್ಟ್ರೀಷಿಯನ್‌, ಎಂಎಂವಿ (ಮೆಕ್ಯಾನಿಕ್‌ ಮೋಟಾರ್‌ ವೆಹಿಕಲ್‌), ಫಿಟ್ಟರ್‌, ಎಂಆರ್‌ಎಸಿ (ಮೆಕ್ಯಾನಿಕಲ್‌ ರೆಫ್ರಿಜರೇಶನ್‌ ಏರ್‌
ಕಂಡೀಷನಿಂಗ್‌) ಕೋರ್ಸ್‌ಗಳು ಲಭ್ಯ ವಿದೆ. ಈಗಾಗಲೇ ಇಎಂ (ಇಲೆಕ್ಟ್ರಾನಿಕ್‌ ಮೆಕ್ಯಾನಿಕಲ್‌) ಕೋರ್ಸ್‌ಗೆ ಅನುಮತಿ ದೊರೆತಿದ್ದು, ತರಗತಿ ಇನ್ನಷ್ಟೇ ಆರಂಭವಾಗಬೇಕಿದೆ.

ಪ್ರಸ್ತುತ ಇಲೆಕ್ಟ್ರೀಷಿಯನ್‌ನಲ್ಲಿ-37 ವಿದ್ಯಾರ್ಥಿಗಳು, ಎಂಎಂವಿ-41 ವಿದ್ಯಾರ್ಥಿಗಳು, ಫಿಟ್ಟರ್‌-16, ಎಂಆರ್‌ಎಸಿ-38 ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದಾರೆ.

ತುಕ್ಕು ಹಿಡಿದಿರುವ ಪರಿಕರಗಳು
2018ರಲ್ಲೇ ಕಾಲೇಜಿಗೆ ಕೋಟಿ ರೂ.ಗಳ ಪ್ರಯೋಗಾಲಯ ಪರಿಕರ ದೊರೆತಿದ್ದರೂ ಸುಸಜ್ಜಿತ ಕಟ್ಟಡವಿಲ್ಲದೆ, ಅದರ ಕುರಿತು ಜ್ಞಾನ ಹೊಂದಿರುವ ಬೋಧಕರಿಲ್ಲದೆ ಪರಿಕರಗಳು ತುಕ್ಕುಹಿಡಿಯುಂತಾಗಿದೆ.

ಪ್ರಾಂಶುಪಾಲರಿಗೆ ಹೆಚ್ಚುವರಿ ಹೊಣೆ
ಪ್ರಸ್ತುತ ಇಲ್ಲಿನ ಪ್ರಾಂಶುಪಾಲರು ಉಡುಪಿ ತಾಲೂಕಿನ ಪೆರ್ಡೂರು ಮತ್ತು
ಕೊಕ್ಕರ್ಣೆ ಐಟಿಐ ಕೇಂದ್ರಗಳಲ್ಲೂ ಪ್ರಾಂಶುಪಾಲ ರಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಹೀಗಾಗಿ ಪ್ರಾಂಶುಪಾಲರಾದ ಕೆ.ಎಲ್‌. ನಾಗರಾಜ್‌ ಅವರು ಒಟ್ಟು ಮೂರು ಸರಕಾರಿ ಐಟಿಐಗಳ ಜವಾಬ್ದಾರಿ ಹೊರುತ್ತಿದ್ದಾರೆ.

ಅತಿಥಿ ಬೋಧಕರಿಗೆ ಅತ್ಯಲ್ಪ ವೇತನ
ಐಟಿಐನಲ್ಲಿ ಅತಿಥಿ ಬೋಧಕರಾಗಿ ತರಗತಿ ನಡೆಸುತ್ತಿರುವ ಬೋಧಕರಿಗೆ
ಸರಕಾರ ಅತ್ಯಲ್ಪ ವೇತನ ಪಾವತಿಸುತ್ತಿದೆ. ದಿನಕೂಲಿ ನೌಕರರಾಗಿ ದುಡಿಯುತ್ತಿರುವ ಇವರು ದಿನವೊಂದಕ್ಕೆ ಕೇವಲ 400 ರೂ. ಸಂಬಳ ಪಡೆಯುತ್ತಿದ್ದಾರೆ. ಸರಕಾರಿ ರಜೆ, ವಾರದ ರಜೆ ಸೇರಿದಂತೆ ಇನ್ನಿತರ ರಜೆ ದಿವಸ ಇವರ ಸಂಬಳ್ಕಕೆ ಕತ್ತರಿ ಹಾಕುವ ಪರಿಣಾಮ ಓರ್ವ ಅತಿಥಿ ಬೋಧಕರಿಗೆ ತಿಂಗಳಿಗೆ ಸಿಗುವ ವೇತನ 7ರಿಂದ 8 ಸಾವಿರ ರೂ. ಮಾತ್ರ.

ಸಿಬಂದಿ ಕೊರತೆ: 18 ಹುದ್ದೆಗಳು ಖಾಲಿ
ಕಾರ್ಕಳ ಐಟಿಐನಲ್ಲಿ ಒಟ್ಟು 18 ಹುದ್ದೆಗಳಿವೆ. 4 ಟ್ರೇಡ್‌ಗಳಲ್ಲಿ 7 ಯುನಿಟ್‌ಗಳಿವೆ. ಆದರೆ, ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕೇವಲ 5 ಮಂದಿ ಅತಿಥಿ ಬೋಧಕರು. ಇದರೊಂದಿಗೆ ಪೆರ್ಡೂರು ಐಟಿಐನ ಇಬ್ಬರು ಬೋಧಕರು ವಾರದಲ್ಲಿ ಕೆಲವು ದಿನ ಬಂದು ತರಗತಿ ಮಾಡಿ ತೆರಳುತ್ತಾರೆ. ಬೋಧಕರ ಕೊರತೆಯಿಂದಾಗಿ ತರಗತಿ ಅವಧಿಯಲ್ಲಿ ವಿದ್ಯಾರ್ಥಿಗಳೂ ತಮ್ಮ ಪಾಡಿಗೆ ತಾವಿರುತ್ತಾರೆ. ರಾಜ್ಯದಲ್ಲಿ ಒಟ್ಟು 269 ಸರಕಾರಿ ಐಟಿಐಗಳಿದ್ದು, ಶೇ. 67ರ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯಿವೆ ಎನ್ನಲಾಗುತ್ತಿದೆ.

ನೇಮಕಾತಿ ನಡೆಯುತ್ತಿದೆ
ಕೆಪಿಎಸ್‌ಸಿಯಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕಚೇರಿ ಕಾರ್ಯಗಳ ನಿರ್ವಹಣೆಗಾಗಿ ಕಾರ್ಕಳ ಐಟಿಐಗೆ ವಾರದಲ್ಲಿ ಮೂರು ದಿನ ಪೆರ್ಡೂರು ಐಟಿಐ ಸಿಬಂದಿಯನ್ನು ನಿಯೋಜಿಸಲಾಗಿದೆ. ಸಿಬಂದಿ ಕೊರತೆಯಿದ್ದಾಗ್ಯೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
-ಕೆ.ಎಲ್‌. ನಾಗರಾಜ್‌, ಪ್ರಾಂಶುಪಾಲರು

2 ಕೋಟಿ ರೂ. ಬಿಡುಗಡೆ
ಗುಂಡ್ಯಡ್ಕ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಬಳಿ ಸುಮಾರು 1.5 ಎಕ್ರೆ ಸರಕಾರಿ ಜಾಗವನ್ನು ಐಟಿಐ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದಿಂದ ಕಾದಿರಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಕೈಗಾರಿಕಾ ಮತ್ತು ಉದ್ಯೋಗ ಇಲಾಖೆಗೆ ಪಿಡಬ್ಲ್ಯುಡಿಯು 3.5 ಕೋ. ರೂ. ಅಂದಾಜು ಪಟ್ಟಿಯ ಪ್ರಸ್ತಾವನೆ ಕಳುಹಿಸಿದ್ದು, 2 ಕೋ. ರೂ. ಅನುದಾನ ಬಿಡುಗಡೆ ಹಂತದಲ್ಲಿದ್ದು, ಆಡಳಿತಾತ್ಮಕ ಮಂಜೂರಾತಿ ಮಾತ್ರ ದೊರೆಯಬೇಕಿದೆ.

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.