ಕಾಪು: ನಿಲ್ಲಿಸಿದ್ದ ಜೀಪು ಚಲಿಸಿ ಬಾಲಕಿಗೆ ಢಿಕ್ಕಿ; ಸಾವು
Team Udayavani, Nov 11, 2018, 9:44 AM IST
ಕಾಪು: ಇಳಿಜಾರಿನಲ್ಲಿ ನಿಲ್ಲಿಸಿದ್ದ ಜೀಪು ಮಕ್ಕಳಾಟದ ಪರಿಣಾಮ ಅಕಸ್ಮಾತ್ ಚಲಿಸಿ ಬಾಲಕಿಗೆ ಢಿಕ್ಕಿ ಹೊಡೆದು ಆಕೆ ಸಾವಿಗೀಡಾದ ಘಟನೆ ಶನಿವಾರ ಮಧ್ಯಾಹ್ನ ಕಟಪಾಡಿ ಬಳಿಯ ಸರಕಾರಿ ಗುಡ್ಡೆ ಎಂಬಲ್ಲಿ ನಡೆದಿದೆ.
ಸುಭಾಸ್ನಗರ ಬಳಿಯ ಸರಕಾರಿ ಗುಡ್ಡೆಯ ಆಯಿಶಾ ಮಂಜಿಲ್ನ ಝರೀನಾ ಎಂಬಾಕೆಯ ಪುತ್ರಿ, ಶಂಕರಪುರ ಶಾಲೆಯ ಎಲ್ಕೆಜಿ ವಿದ್ಯಾರ್ಥಿನಿ ಆಫಿಯಾ ಬಾನು (6) ಮೃತ ಬಾಲಕಿ. ಶನಿವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಘಟನೆಯ ವಿವರ
ಬಾಲಕಿಯ ಅಜ್ಜ ರಮ್ಜಾನ್ ಬ್ಯಾರಿ ತನ್ನ ಮನೆಯ ಬಳಿಯ ರಸ್ತೆಯ ಇಳಿಜಾರಿನಲ್ಲಿ ಜೀಪನ್ನು ನಿಲ್ಲಿಸಿ ಹೋಗಿದ್ದರು. ಮೃತ ಆಫಿಯಾ ಬಾನು ಮತ್ತು ಸಂಬಂಧಿ ಬಾಲಕ ಆಫ್ರಿದ್ ಸನಿಹದಲ್ಲಿ ಆಟವಾಡುತ್ತಿದ್ದರು. ಈ ಸಂದರ್ಭ ಆಫ್ರಿದ್ ಜೀಪಿನ ಬಾಗಿಲು ತೆರೆದು ಒಳ ಸೇರಿಕೊಂಡು ಆಟವಾಡುತ್ತಾ, ನ್ಯೂಟ್ರಲ್ ಗೇರ್ ಚಲಾಯಿಸಿದ ಎನ್ನಲಾಗಿದೆ. ಆಗ ಇಳಿಜಾರಿನಲ್ಲಿ ಮುಂದಕ್ಕೆ ಚಲಿಸಿದ ಜೀಪ್ ಮುಂಭಾಗದಲ್ಲಿ ಆಟವಾಡುತ್ತಿದ್ದ ಆಫಿಯಾ ಬಾನುಗೆ ಢಿಕ್ಕಿ ಹೊಡೆದಿದ್ದು, ಆಕೆ ಬದಿಯ ಸಿಮೆಂಟ್ ನೆಲಕ್ಕೆ ಅಪ್ಪಳಿಸಿದಳು ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿದ್ದಳು. ಈ ಬಗ್ಗೆ ಬಾಲಕಿಯ ತಂದೆ ಇಮಿಯಾಜ್ ಅಹ್ಮದ್ ನೀಡಿದ ದೂರಿನ ಮೇರೆಗೆ ಜೀಪ್ ಮಾಲಕ ರಮ್ಜಾನ್ ಬ್ಯಾರಿಯ ನಿರ್ಲಕ್ಷ್ಯತನದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ