ಕೋಟೇಶ್ವರ: ಅಂಡರ್ಪಾಸ್ ಜಂಕ್ಷನ್ ಆ್ಯಕ್ಸಿಡೆಂಟ್ ಝೋನ್
Team Udayavani, Jul 26, 2018, 6:25 AM IST
ಕೋಟೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ಕೋಟೇಶ್ವರ ಬೆ„ಪಾಸ್ ಜಂಕ್ಷನ್ ಬಳಿ ನಿರ್ಮಿಸಲಾಗಿರುವ ಎಂಬೇಕ್ವೆುಂಟ್ನ “ಅಂಡರ್ಪಾಸ್’ನ ಸಂಪರ್ಕ ರಸ್ತೆಯು ಅಪಾಯಕಾರಿಯಾಗಿದ್ದು, ಟ್ರಾಫಿಕ್ ಪೊಲೀಸರು ಇದಕ್ಕೊಂದು ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇದೆ.
ಇಲ್ಲಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿನ ಸರ್ವಿಸ್ ರಸ್ತೆಯು ಬೆ„ಪಾಸ್ ಜಂಕ್ಷನ್ನಲ್ಲಿ ಸಂದಿಸುತ್ತದೆ. ಈ ಒಂದು ಜಂಕ್ಷನ್ ಸದಾ ವಾಹನಗಳ ಒತ್ತಡದಿಂದ ಕೂಡಿದ್ದು ಹಾಲಾಡಿ-ಕೋಟೇಶ್ವರ ಪೇಟೆ-ಕುಂಭಾಶಿ- ಕುಂದಾಪುರ ಸಹಿತ ಸಾಗುವ ಪ್ರಯಾಣಿಕರಿಗೆ ಸಂಪರ್ಕ ಕೊಂಡಿಯಾಗಿದೆ.
ಅಪಾಯ ಕಟ್ಟಿಟ್ಟ ಬುತ್ತಿ
ಇಲ್ಲಿ ಸಾಗುವ ವಾಹನಗಳಿಗೆ ಯಾವುದೇ ರೀತಿಯ ಟ್ರಾಫಿಕ್ ಕಾನೂನು ಅನ್ವಯವಾಗುವುದಿಲ್ಲವೇ ಅನ್ನುವಷ್ಟರ ಮಟ್ಟಿಗೆ ವಿವಿಧ ಕಡೆಗಳಿಂದ ಆಗಮಿಸುವ ಲಘು ಹಾಗೂ ಘನ ವಾಹನಗಳು ಅಮಿತ ವೇಗದಿಂದ ಮನಬಂದಂತೆ ಸಾಗುತ್ತಿರುವುದು ಭಯದ ವಾತಾ ವರಣವನ್ನು ಸೃಷ್ಟಿಸಿದೆ. ಸರಕಾರಿ ಪದವಿ ಕಾಲೇಜು ಸಹಿತ ಕಟ್ಕರೆಯಲ್ಲಿನ ಕೈಗಾರಿಕೋದ್ಯಮಕ್ಕೆ ಸಾಗುವ ಪಾದಚಾರಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ದ್ವಿಚಕ್ರ ವಾಹನಗಳು ಕರ್ಕಶ ಶಬ್ದದೊಡನೆ ಸಾಗುತ್ತಿರುವುದು ಇಲ್ಲಿನ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ.
ರಸ್ತೆ ಉಬ್ಬು ನಿರ್ಮಾಣ
ಬೈಪಾಸ್ ಜಂಕ್ಷನ್ನ ಅಂಡರ್ಪಾಸ್ನಲ್ಲಿ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಿರುವ ವಾಹನಗಳ ಒತ್ತಡದಿಂದಾಗಿ ಸಂಭವಿಸಬಹುದಾದ ದುರಂತವನ್ನು ತಪ್ಪಿಸಲು ಲೋಕೋಪಯೋಗಿ ಅಧಿಕಾರಿಗಳೊಡನೆ ಚರ್ಚಿಸಿ ಹಾಲಾಡಿ ರಸ್ತೆಯಲ್ಲಿ ಅಗತ್ಯ ಬಿದ್ದಲ್ಲಿ ರಸ್ತೆ ಉಬ್ಬು ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಆ ಭಾಗದಲ್ಲಿ ಅತೀ ವೇಗದಿಂದ ಸಾಗುವ ವಾಹನಗಳನ್ನು ಗುರುತಿಸಿ ದಂಡಿಸಲಾಗುವುದು.
– ಕುಂದಾಪುರ ಟ್ರಾಫಿಕ್ ಪೊಲೀಸ್
ಪಾರ್ಕಿಂಗ್ ಕಡಿವಾಣ ಅಗತ್ಯ
ಬೈಪಾಸ್ ಜಂಕ್ಷನ್ಬಳಿ ಮನ ಬಂದಲ್ಲಿ ವಾಹನ ನಿಲುಗಡೆಗೊಳಿಸುತ್ತಿರುವುದರೊಡನೆ ಸರ್ವಿಸ್ ರಸ್ತೆಗಳಲ್ಲಿ ವಾಹನ ನಿಲುಗಡೆಗೊಳಿ ಸುತ್ತಿರುವುದು ನಿತ್ಯ ಪ್ರಯಾಣಿಕರಿಗೆ ಸುಗಮ ವಾಹನ ಸಂಚಾರಕ್ಕೆ ತಡೆವೊಡ್ಡಿದಂತಾಗುತ್ತಿದೆ. ಒಟ್ಟಾರೆ ಕೋಟೇಶ್ವರ ಬೈಪಾಸ್ ಜಂಕ್ಷನ್ ವಾಹನಗಳ ಒತ್ತಡದಿಂದ ಆಕ್ಸಿಡೆಂಟ್ ಝೋನ್ ಆಗಿ ಕಂಡುಬಂದಿದ್ದು ಇಲಾಖೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯ ಇದೆ.
-ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್