ಕಾಂತಾವರ ಕಾಡಿನಲ್ಲಿ ಚಿರತೆ : ಆತಂಕದಲ್ಲಿ ಜನತೆ
Team Udayavani, Feb 23, 2019, 1:00 AM IST
ಕಾರ್ಕಳ: ಕಾಂತಾವರ ಗ್ರಾ. ಪಂ. ವ್ಯಾಪ್ತಿಯ ಬಾರಾಡಿ, ಬೇಲಾಡಿ, ಕಾಂತಾವರ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ಕಾಣಸಿಗುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಫೆ. 15ರಂದು ಬರಂಗ ಎಂಬಲ್ಲಿ ಮುತ್ತಿ ಪೂಜಾರಿ ಎಂಬವರ ಮೇಲೆ ಚಿರತೆ ದಾಳಿ ನಡೆಸಿತ್ತು. ಮತ್ತೋರ್ವರಿಗೂ ತರಚಿದ ಗಾಯವಾಗಿತ್ತು. ಅನಂತರ ಒಂದು ಚಿರತೆಯನ್ನು ಸೆರೆಹಿಡಿಯಲಾಗಿತ್ತು.
ಫೆ.17ರಿಂದ ಅಂಬಲಪದವು ಪರಿಸರದ ಶಾಂತಾ ಮತ್ತು ಶೀನ ಮೂಲ್ಯ ಅವರ ದನ ಮೇಯಲು ಬಿಟ್ಟಲ್ಲಿಂದ ನಾಪತ್ತೆಯಾಗಿದ್ದು, ಶೀನ ಮೂಲ್ಯ ಅವರ ದನದ ಕಳೇಬರ ಫೆ.21ರಂದು ಪಕ್ಕದ ಗುಡ್ಡದಲ್ಲಿ ಅರ್ಧ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಶಾಂತಾ ಅವರ ಮನೆಯ ದನ ಇನ್ನೂ ಪತ್ತೆಯಾಗಿಲ್ಲ.
ಕಾಂತಾವರ ದಟ್ಟ ಅರಣ್ಯದಲ್ಲಿ ಅನೇಕ ಚಿರತೆಗಳಿವೆ ಎನ್ನಲಾಗಿದೆ. ಇತ್ತೀಚೆಗೆ ಮುಖ್ಯರಸ್ತೆಗಳತ್ತ ಚಿರತೆಗಳು ಬರುತ್ತಿರುವುದು ಈ ಭಾಗದ ಜನರ ನಿದ್ದೆಗೆಡಿಸಿದೆ.
ಚಿರತೆ ಗೂಡಿನ ಬೇಡಿಕೆ
ಚಿರತೆ ಸೆರೆಹಿಡಿಯಲು ಗೂಡನ್ನು ಅಳವಡಿಸಬೇಕೆನ್ನುವ ಬೇಡಿಕೆ ಇಲ್ಲಿನವರದ್ದು. ಗೂಡು ಅಳವಡಿಸಲು ಅರಣ್ಯ ಇಲಾಖೆ ಮುಂದಾಗಬೇಕೆಂಬ ಆಗ್ರಹ ವ್ಯಕ್ತಪಡಿಸುತ್ತಾರೆ ಶಿವಾನಂದರು.
ಕಾರ್ಕಳದಲ್ಲಿ ಸಕಲ ವ್ಯವಸ್ಥೆಯಿರಲಿ
ಚಿರತೆ ಕಂಡೊಡನೆ ದೂರದ ಪಿಲಿಕುಳ ನಿಸರ್ಗಧಾಮಕ್ಕೆ ಮಾಹಿತಿ ನೀಡಿ ಅಲ್ಲಿನ ತಜ್ಞರು ಆಗಮಿಸುವಾಗ ಸಾಕಷ್ಟು ತಡವಾಗುತ್ತಿದೆ. ಹೀಗಾಗಿ ಕಾರ್ಕಳದಲ್ಲೇ ತಜ್ಞರು, ಅರಿವಳಿಕೆ ಗನ್ನು, ಮದ್ದು ಲಭ್ಯವಿದ್ದಲ್ಲಿ ಬಹಳ ಪ್ರಯೋಜನಕಾರಿಯಾಗಲಿದೆ. ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪ್ರಸ್ತಾವ ಮಾಡಲಾಗಿದೆ. ಜಿಲ್ಲಾಧಿಕಾರಿ, ಶಾಸಕರು, ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ. ಎಂದು ಕಾಂತಾವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕೋಟ್ಯಾನ್ ಹೇಳಿದರು.
ಚಿರತೆ ಜನರಿಗೆ ಹೆದರುತ್ತೆ. ಅರಣ್ಯದಲ್ಲಿ ಆಹಾರ ಸಿಗದಿದ್ದಾಗ ಅವು ನಾಡಿನತ್ತ ಧಾವಿಸುತ್ತೆ. ಕಾರ್ಕಳ ಪರಿಸರದ ಕೆಲವೆಡೆ ಚಿರತೆ ಗೂಡು ಅಳವಡಿಸಲಾಗಿದೆ ಎಂದು ಮೂಡಬಿದಿರೆ ವಲಯ ಅರಣ್ಯಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ