ಅನಗತ್ಯ ಪೇಟೆಗೆ ಬಂದರೆ ಪೊಲೀಸ್ ವಶಕ್ಕೆ !
Team Udayavani, May 4, 2021, 5:10 AM IST
ಉಡುಪಿ/ ಕುಂದಾಪುರ: ದಿನಸಿ ಅಂಗಡಿಗಳು ತೆರೆದಿಡುವ ಸಮಯವನ್ನು 10 ಗಂಟೆಯ ಬದಲಿಗೆ 12ರ ವರೆಗೆ ವಿಸ್ತರಿಸಿದ್ದು ಕೆಲವರಿಗೆ ಅನುಕೂಲವಾಗಿದೆ. ಅನಗತ್ಯ ಪೇಟೆಗೆ ಬಂದವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿದ್ದು ವಾಹನಗಳನ್ನೂ ವಶಪಡಿಸಿಕೊಳ್ಳುತ್ತಿದ್ದಾರೆ.
ದಿನಸಿ ಕೊಳ್ಳುವಾಗ ನೂಕು ನುಗ್ಗಲಾಗುತ್ತದೆ, ಜನದಟ್ಟಣೆ ಹೆಚ್ಚಾಗುತ್ತದೆ, ಸಾಮಾಜಿಕವಾಗಿ ದೈಹಿಕ ಅಂತರ ಮರೆಯಾಗುತ್ತದೆ ಎಂಬ ಕಾರಣದಿಂದ ಸರಕಾರ ನಿಯಮಾವಳಿಯನ್ನು ಕೊಂಚ ಸಡಿಲಿಸಿತ್ತು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು 12 ಗಂಟೆಯವರೆಗೆ ಬೀದಿ ತಿರುಗಲು ಸಿಕ್ಕ ಅವಕಾಶ ಎಂದು ಬಳಸಿ ಕೊಳ್ಳತೊಡಗಿದ್ದಾರೆ.
ಉಡುಪಿಯ ಸಂತೆಕಟ್ಟೆ ಹಾಗೂ ಕುಂದಾಪುರ ಫಿಶ್ ಮಾರ್ಕೆಟ್ ರಸ್ತೆಯಲ್ಲಿ ರವಿವಾರ ವಾಹನ ದಟ್ಟಣೆ ಉಂಟಾದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಸೋಮವಾರ ಕಠಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯ ಚೆಕ್ಪೋಸ್ಟ್ ಗಳಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸಿ ಅಗತ್ಯ ಇರುವವರನ್ನು, ಸಕಾರಣವಾಗಿ ಬಂದವರನ್ನು ಮಾತ್ರ ಬಿಟ್ಟಿದ್ದಾರೆ. ಉಳಿದಂತೆ 12ರವರೆಗೆ ಪೇಟೆಗೆ ಬರಲು ಅವಕಾಶ ಇದೆ ಎಂದು “ಕಾನೂನು’ ಮಾತಾಡಿದವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಮುಂದುವರಿದ ತಪಾಸಣೆ :
ಅನಗತ್ಯ ಸಂಚರಿಸುವವರ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಸೋಮವಾರವೂ ಪೊಲೀಸರ ಈ ಕಾರ್ಯಾಚರಣೆ ಮುಂದುವರಿಯಿತು. ಉಡುಪಿ ಟ್ರಾಫಿಕ್ ಪೊಲೀಸ್ ಠಾಣೆಯ ನಿರೀಕ್ಷಕ ಅಬ್ದುಲ್ ಖಾದರ್ ಅವರು ನಗರದ ಸಂತೆಕಟ್ಟೆ, ಸರ್ವೀಸ್ ಬಸ್ತಂಗುದಾಣ, ಕಲ್ಸಂಕ ವೃತ್ತಗಳಲ್ಲಿ ವಾಹನಗಳನ್ನು ತಡೆದು ದಾಖಲೆಪತ್ರಗಳನ್ನು ಪರಿಶೀಲಿಸಿದರು. ಸೂಕ್ತ ದಾಖಲೆಪತ್ರ ಹಾಗೂ ವಿನಾಕಾರಣ ಸುತ್ತಾಡುತ್ತಿದ್ದವರಿಗೆ ದಂಡ ವಿಧಿಸಲಾಯಿತು.
ಗೊಂದಲ :
ದಿನಸಿ ಅಂಗಡಿಗಳನ್ನು 12ರ ವರೆಗೆ ತೆರೆದಿಡಬಹುದು, ತಳ್ಳುಗಾಡಿ ತರಕಾರಿ ಸಂಜೆವರೆಗೆ ಮಾರಾಟ ಮಾಡಬಹುದು ಎಂದು ಸುತ್ತೋಲೆಯಲ್ಲಿ ಹೇಳಿದೆ. ಅದನ್ನು ನಂಬಿ ತರಕಾರಿ ಅಂಗಡಿ 10 ಗಂಟೆಯ ಬಳಿಕ ತೆರೆದಿಟ್ಟವರನ್ನು ಸ್ಥಳೀಯಾಡಳಿತದವರು ಮುಚ್ಚಿಸಿದ್ದಾರೆ. ಗ್ರಾಮಾಂತರದಲ್ಲಿ ಪೊಲೀಸರು ದಿನಸಿ ಅಂಗಡಿಗಳನ್ನು ಕೂಡ ಮುಚ್ಚಿಸಿದ್ದಾರೆ. ತಮಗೆ ಯಾವುದೇ ಬಗೆಯ ಆದೇಶ ಬಂದಿಲ್ಲ ಎಂದು ಹೇಳಿ 10 ಗಂಟೆಯ ಅನಂತರ ದಿನಸಿ ಅಂಗಡಿಗಳು ಕೂಡ ತೆರೆದಿಡಬಾರದು ಎಂದು ಮುಚ್ಚಿಸುತ್ತಿದ್ದಾರೆ. ಈ ಕುರಿತು ಜಿಲ್ಲೆಯ ವಿವಿಧೆಡೆಯಿಂದ ದೂರುಗಳು ಕೇಳಿ ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು