ಎಂ.ಕಾಂ. ಪದವಿ ಪಡೆದು ಕೃಷಿಯನ್ನೇ ಆರಿಸಿಕೊಂಡ ಸಾಧಕ

ಸತತ ಐದು ಬಾರಿ ಕೃಷಿ ಪ್ರಶಸ್ತಿ ಪಡೆದ ಪಗತಿಪರ ರೈತ

Team Udayavani, Jan 5, 2020, 5:20 AM IST

0401KOTA6E

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕೋಟ: ಸಾಲಿಗ್ರಾಮ ಸಮೀಪ ಪಾರಂಪಳ್ಳಿಯ ರಮೇಶ್‌ ಹೇಳೆìಯವರು ಪ್ರಗತಿಪರ ಕೃಷಿಕರಾಗಿ, ಕೃಷಿ ಸಂಶೋಧಕನಾಗಿ, ನೂರಾರು ಮಂದಿಗೆ ಮಾಹಿತಿ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ತಂದೆ ರಾಮಚಂದ್ರ ಹೇಳೆìಯವರು ಬ್ರಹ್ಮಾವರ ಎಸ್‌.ಎಂ.ಎಸ್‌. ಕಾಲೇಜಿನ ಪ್ರಾಂಶುಪಾಲರಾಗಿದ್ದರು ಹಾಗೂ ಕೃಷಿಯಲ್ಲಿ ವಿಶೇಷವಾದ ಆಸಕ್ತಿ ಹೊಂದಿದ್ದರು. ಹೀಗಾಗಿ ಮಗನನ್ನು ಕೃಷಿ ಕ್ಷೇತ್ರ ಕೈ ಬೀಸಿ ಕರೆದಿತ್ತು. 1983ರಲ್ಲಿ ಎಂ.ಕಾಂ. ಪದವಿ ಮುಗಿಸಿದ ಇವರಿಗೆ ನೂರಾರು ವೈಟ್‌ಕಾಲರ್‌ ಜಾಬ್‌ಗಳು ಪ್ರಾಪ್ತವಾಗುತ್ತಿದ್ದವು. ಆದರೆ ಅವೆಲ್ಲವನ್ನೂ ದೂರ ಮಾಡಿ ಕೃಷಿಯ ಕಡೆಗೆ ಮುಖ ಮಾಡಿದರು. ತನ್ನ 6 ಎಕ್ರೆ ಜಮೀನಿನಲ್ಲಿ ಭತ್ತ, ತೆಂಗು, ಅಡಿಕೆ, ಉದ್ದು ಮುಂತಾದ ಧಾನ್ಯ, ವಿವಿಧ ತರಕಾರಿಗಳು, ಹಣ್ಣುಗಳನ್ನು ಬೇಸಾಯ ಮಾಡಿದರು. ಸ್ಥಳೀಯ ರೈತರನ್ನು ಸೇರಿಸಿಕೊಂಡು ಆಕಾಶವಾಣಿಯಲ್ಲಿ ಕೃಷಿಗೆ ಸಂಬಂಧಿಸಿದ ಸರಣಿ ಕಾರ್ಯಕ್ರಮ, ಸಂದರ್ಶನಗಳನ್ನು ಇವರು ನೀಡಿದ್ದಾರೆ.

ಸಮಗ್ರ ಕೃಷಿ ಪದ್ಧತಿ
ಕೇವಲ ಸಾಂಪ್ರದಾಯಿಕ ಅಥವಾ ಕೇವಲ ಯಾಂತ್ರಿಕ ವಿಧಾನಕ್ಕೆ ಸೀಮಿತವಾಗದೆ ಉತ್ತಮ ಫಸಲು ಪಡೆಯಬೇಕಾದರೆ ಯಾವ ವಿಧಾನ ಉತ್ತಮ ಅದನ್ನೇ ಇವರು ಅನುಸರಿಸುತ್ತಾರೆ.

ಭತ್ತದ ಜತೆಗೆ ತರಕಾರಿ, ತೆಂಗು, ಅಡಿಕೆ, ಧಾನ್ಯಗಳು, ಹೈನುಗಾರಿಕೆ ಹೀಗೆ ಸಮಗ್ರ ವಿಧಾನವನ್ನು ಅನುಸರಿಸುತ್ತಿದ್ದಾರೆ.

ಐದು ಬಾರಿ ಕೃಷಿ ಪ್ರಶಸ್ತಿ
ಉತ್ತಮ ಇಳುವರಿಗಾಗಿ ಕೃಷಿ ಇಲಾಖೆಯಿಂದ ಎರಡು ಬಾರಿ ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗೂ ಸತತ ಮೂರು ಬಾರಿ ತಾಲೂಕು ಮಟ್ಟದ ಪ್ರಶಸ್ತಿ ಇವರಿಗೆ ಸಂದಿದೆ.

ಕೋಟ ಸಿ.ಎ.ಬ್ಯಾಂಕ್‌ನಿಂದ ಉತ್ತಮ ಕೃಷಿಕ ಸಮ್ಮಾನ, ಕಾರ್ಕಡ ಗೆಳೆಯರ ಬಳಗದ ಸಮ್ಮಾನ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

ಸಂಶೋಧನಾ ಪ್ರವೃತ್ತಿ
ಕೃಷಿಯಲ್ಲಿ ಸದಾ ಸಂಶೋಧನೆಯಲ್ಲಿ ತೊಡಗುವ ಇವರು ತನ್ನ ಭೂಮಿಗೆ ಯಾವ ಬೆಳೆ, ಯಾವ ತಳಿ ಉತ್ತಮ ಎನ್ನುವ ಹುಡುಕಾಟದಲ್ಲಿರುತ್ತಾರೆ ಹಾಗೂ ಹೊಸ-ಹೊಸ ಭತ್ತದ ತಳಿಗಳನ್ನು ಅಳವಡಿಸಿ ಫಲಿತಾಂಶವನ್ನು ಗುರುತಿಸುತ್ತಾರೆ. ಬೆಳೆಗಳಿಗೆ ತಗಲುವ ರೋಗದ ನಿವಾರಣೆಗೂ ತನ್ನದೇ ಆದ ಪ್ರಯೋಗಗಳ ಮೂಲಕ ಪರಿಹಾರವನ್ನೂಕಂಡುಕೊಳ್ಳುತ್ತಾರೆ. ಬೆಳೆ, ತಳಿ, ರೋಗ ಬಾಧೆ ನಿವಾರಣೆ,ಉತ್ತಮ ಇಳುವರಿ ಮುಂತಾದ ವಿಚಾರಗಳ ಕುರಿತು ಉಡುಪಿ ಜಿಲ್ಲೆಯ ನೂರಾರು ರೈತರು ಇವರ ಬಳಿ ಮಾಹಿತಿ ಮಾರ್ಗದರ್ಶನ ಪಡೆಯುತ್ತಾರೆ.

ಕೃಷಿ ಯಶಸ್ಸಿನ ಗುಟ್ಟು
ಜಿಲ್ಲೆಯಲ್ಲಿ ಅಪರೂಪವೆಂಬಂತೆ ಐದು ಬಾರಿ ಕೃಷಿ ಇಲಾಖೆಯ ಪ್ರಶಸ್ತಿ ಪಡೆದ ಇವರಲ್ಲಿ ತಮ್ಮ ಯಶಸ್ವಿನ ಕುರಿತು ಪ್ರಶ್ನಿಸಿದರೆ, ನಾನು ಮುಂಗಾರು ನಾಟಿಗೆ ಎಪ್ರಿಲ್‌ ತಿಂಗಳಲ್ಲೇ ಗದ್ದೆಯನ್ನು ಉಳುಮೆ ಮಾಡುತ್ತೇನೆ. ಈ ರೀತಿ ಉಳುಮೆ ಮಾಡುವುದರಿಂದ ಬಿಸಿಲಿನ ತೀವ್ರತೆಗೆ ಮಣ್ಣು ಉತ್ತಮವಾಗಿ ಹದಗೊಳ್ಳುತ್ತದೆ. ಅನಂತರ ಹಸಿರೆಲೆ ಗಿಡವನ್ನು ಬೆಳೆದು ಎರಡನೇ ಬಾರಿ ಉಳುಮೆ ಮಾಡುವಾಗ ಹಸಿರೆಲೆಗಳನ್ನು ಮಣ್ಣಿಗೆ ಸೇರಿಸಬೇಕು.ಅಗತ್ಯ ಪ್ರಮಾಣದಲ್ಲಿ ಸುಣ್ಣವನ್ನು ಮಣ್ಣಿಗೆ ನೀಡಬೇಕು ಮತ್ತು ಹಟ್ಟಿಗೊಬ್ಬರ ಅಗತ್ಯವಾಗಿ ಬೇಕು. ರಾಸಾಯನಿಕ ಗೊಬ್ಬರ ಅನಿವಾರ್ಯವಾದರೆ ಬಳಕೆ ಮಾಡಬಹುದು. ಈ ವಿಧಾನ ಅನುಸರಿಸುವುದರಿಂದ ಉತ್ತಮ ಫಸಲು ಸಾಧ್ಯ ಎನ್ನುತ್ತಾರೆ.

ನಿಮ್ಮ ಭೂಮಿಗೆ ನೀವೇ ಕೃಷಿ ವಿಜ್ಞಾನಿ
ಕೃಷಿಯಲ್ಲಿ ಎಲ್ಲವನ್ನೂ ವಿಜ್ಞಾನಿಗಳಿಂದ, ಅಧಿಕಾರಿಗಳಿಂದ ಕೇಳಿ ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಭೂಮಿಗೆ ಯಾವ ಬೆಳೆ ಸೂಕ್ತ, ಯಾವ ಬೆಳೆಗೆ ಯಾವ ರೀತಿ ಪೋಷಕಾಂಶ ನೀಡಬೇಕು. ಯಾವುದನ್ನು ನೀಡಬಾರದು ಎನ್ನುವ ಕುರಿತು ನಾವೇ ಸ್ವತಃ ಅನ್ವೇಷಣೆಗಳನ್ನು ಮಾಡಿ ಫಲಿತಾಂಶ ಪಡೆಯಬೇಕು. ರೇಡಿಯೊ, ಪತ್ರಿಕೆಗಳಲ್ಲಿ ಕೃಷಿಗೆ ಸಂಬಂಧಿಸಿದ ಹಲವಾರು ವಿಚಾರಗಳು ಬರುತ್ತದೆ. ಅವುಗಳನ್ನು ಓದಿ ಅಧ್ಯಯನ ಮಾಡಬೇಕು. ಶೂನ್ಯ ಬಂಡವಾಳದ ಹಲವಾರು ಬೆಳೆಗಳಿಗೆ ಅವುಗಳ ಕುರಿತು ತಿಳಿದುಕೊಳ್ಳಬೇಕು ಮತ್ತು ಬೇಸಾಯ ಮಾಡುವವನಿಗೆ ಹೈನುಗಾರಿಕೆ ಅಗತ್ಯವಾಗಿ ಬೇಕು.ಯಾಕೆಂದರೆ ಹಟ್ಟಿಗೊಬ್ಬರದಷ್ಟು ಉತ್ತಮ ಸಾರ ಬೇರೆ ಇಲ್ಲ. ಕೃಷಿ ಇಂದು ಅತ್ಯಂತ ಲಾಭದಾಯಕವಾಗಿದೆ. ಮುಂದೆ ಇದಕ್ಕೆ ಉತ್ತಮ ಭವಿಷ್ಯವಿದೆ.
-ರಮೇಶ ಹೇಳೆì, ಪಾರಂಪಳ್ಳಿ

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.