ಮಾಳ ಅಪಘಾತ ಗಾಯಾಳುಗಳು ಮೈಸೂರಿಗೆ
Team Udayavani, Feb 17, 2020, 6:20 AM IST
ಕಾರ್ಕಳ: ಮಾಳದ ಬಳಿ ಶನಿವಾರ ನಡೆದ ಬಸ್ ಅಪಘಾತದಲ್ಲಿ ಗಾಯಗೊಂಡು ಕಾರ್ಕಳದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಫೆ. 16ರಂದು ಮೈಸೂರು ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಮೈಸೂರಿನ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪೆನಿಯ 35 ಮಂದಿ ಸಿಬಂದಿ ಮೈಸೂರಿನಿಂದ ಕುದುರೆಮುಖವಾಗಿ ಮಂಗಳೂರಿಗೆ ಸಾಗುತ್ತಿದ್ದ ವೇಳೆ ಈ ಅವಘಡ ನಡೆದಿದ್ದು, ಬಸ್ನಲ್ಲಿದ್ದ ಮೂವರು ಚಾಲಕರು, ಇಬ್ಬರು ಅಡುಗೆ ಸಿಬಂದಿ ಸೇರಿದಂತೆ ಕಂಪೆನಿಯ ನಾಲ್ವರು ಸಾವಿಗೀಡಾಗಿದ್ದರು.
ಮೃತಪಟ್ಟಿರುವ ಮೈಸೂರಿನ ಯೋಗೀಂದ್ರ ಆರ್. (24), ರಕ್ಷಿತಾ (27), ಅನುಜ್ಞಾ (26), ಶ್ರೀರಂಗಪಟ್ಟಣದ ವಿನುತಾ ವಿ. (28), ನಂಜನಗೂಡಿನ ಬಸವರಾಜ್ (24), ಮಹೇಶ್ ಹಾಗೂ ಮೈಸೂರಿನ ಪ್ರೀತಂ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಬಿಟ್ಟುಕೊಡಲಾಯಿತು. ರಾಧಾರವಿ ಮತ್ತು ಮಾರುತಿ ಮೃತದೇಹದ ಮರಣೋತ್ತರ ಪರೀಕ್ಷೆ ಆಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳು ಚೇತರಿಕೆ
ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಕೆಲವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಇನ್ನು ಕೆಲವರು ಮೈಸೂರಿನ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ.
ಸರಕಾರ ಪರಿಹಾರ ನೀಡಲಿ
ಇಂತಹ ಭೀಕರ ಅಪಘಾತದ ಸಂದರ್ಭ ಸರಕಾರ ಪರಿಹಾರ ಮೊತ್ತ ಘೋಷಣೆ ಮಾಡಬೇಕಿತ್ತು ಎಂದು ಗಾಯಾಳುಗಳನ್ನು ನೋಡಲು ಆಗಮಿಸಿದ್ದ ಮೈಸೂರು ಮೂಲದ ವಕೀಲರೋರ್ವರು ಅಭಿಪ್ರಾಯಪಟ್ಟರು.
ಕೃತಜ್ಞತೆ ಅರ್ಪಿಸಿದ ಗಾಯಾಳು
ಕಾರ್ಕಳದಲ್ಲಿ ವೈದ್ಯರು, ಆಸ್ಪತ್ರೆ ಸಿಬಂದಿ, ಪೊಲೀಸ್, ಕಂದಾಯ ಸಹಿತ ಎಲ್ಲ ಇಲಾಖೆಯವರು ಸಹಕರಿಸಿದ್ದಾರೆ. ಮಾತ್ರವಲ್ಲದೆ ಈ ಊರಿನ ಜನತೆ ಬಂಧುಗಳೆಂಬಂತೆ ನಮ್ಮನ್ನು ಕಂಡು ಉಪಚರಿಸಿದ್ದಾರೆ. ಕಷ್ಟ ಕಾಲದಲ್ಲಿ ನೀಡಿದ ನೆರವನ್ನು ಮರೆಯಲಾರೆವು ಎಂದು ಗಾಯಾಳು ನಂಜುಂಡಸ್ವಾಮಿ ಹೇಳಿದರು.
ನಿಧಾನವಾಗಿ ಹೋಗಲು ಹೇಳಿದ್ದೆವು
ಉಡುಪಿ -ಮಂಗಳೂರಿಗೆ ಪ್ರವಾಸ ಹೋಗುವವರಿದ್ದೆವು. ಮೈಸೂರಿನಿಂದ ಹೊರನಾಡು ತಲುಪಿ ಅಲ್ಲಿಂದ ಶನಿವಾರ ಬೆಳಗ್ಗೆ 11.30ರ ವೇಳೆ
ಹೊರಟಿದ್ದೆವು. ಬಸ್ ವೇಗವಾಗಿ ಸಾಗುತ್ತಿರುವುದನ್ನು ಕಂಡು ಚಾಲಕರಲ್ಲಿ ನಿಧಾನವಾಗಿ ಚಲಾಯಿಸುವಂತೆ ಕೆಲವರು ಸೂಚಿಸಿದ್ದರು. ಈ ದಾರಿಯಲ್ಲಿ ಹಲವಾರು ತಿರುವುಗಳೂ ಇದ್ದವು. ಬಸ್ ವೇಗಕ್ಕೆ ಸೀಟ್ನಲ್ಲಿದ್ದ ಆಹಾರ ಪೊಟ್ಟಣ ಕೆಳಗಡೆ ಬಿದ್ದಿರುವುದು ನನಗೆ ಗೊತ್ತಿದೆ. ಬೇರೇನೂ ನನಗೆ ನೆನಪಾಗುತ್ತಿಲ್ಲ. ಈಗ ನನ್ನ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ ಎಂದು ಗದ್ಗದಿತರಾದರು ಗಾಯಾಳು ಮೈಸೂರಿನ ವಿದ್ಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್