ಕಾರ್ಕಳ ತಾಲೂಕಿನ ಮಾಳ: ಅನೈತಿಕ ಸಂಬಂಧದ ಅನುಮಾನದಿಂದ ಜತೆಯಲ್ಲಿ ಮಲಗಿದ್ದವನ ಕೊಲೆ
Team Udayavani, May 24, 2021, 3:39 PM IST
ಕಾರ್ಕಳ: ಮಹಿಳೆಯೊಂದಿಗೆ ಅನೈತಿಕ ಸಂಬಂಧವಿರುವ ಬಗ್ಗೆ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆದು ಒಬ್ಬಾತನ ಕೊಲೆ ನಡೆಯುವ ಮೂಲಕ ಅಂತ್ಯವಾದ ಘಟನೆ ಕಾರ್ಕಳದ ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ಮೇ23ರಂದು ರಾತ್ರಿ ನಡೆದಿದೆ.
ಮಿಯ್ಯಾರಿನ ಬೋರ್ಕಟ್ಟೆ ನಿವಾಸಿ ಹರೀಶ್ ಪೂಜಾರಿ (42 ವ) ಕೊಲೆಯಾದ ವ್ಯಕ್ತಿ. ಕೂಲಿ ಕಾರ್ಮಿಕ ಗುರುವ ಮೇರ ಕೊಲೆಗೈದ ಆರೋಪಿಯಾಗಿದ್ದಾನೆ.
ಮಹಿಳೆ ರೀತಾ ಎಂಬವರಿಗೆ ವಿವಾಹವಾಗಿದ್ದು ಮುಕ್ಕಾಯಿ ಎಂಬಲ್ಲಿ ತಾಯಿಯ ಇನ್ನೊಂದು ಜಾಗದಲ್ಲಿ ಒಬ್ಬರೇ ವಾಸವಾಗಿದ್ದರು. ಮಹಿಳೆಯ ಇಬ್ಬರು ಮಕ್ಕಳು ಅಜ್ಜಿಯ ಇನ್ನೊಂದು ಮನೆಯಲ್ಲಿ ವಾಸವಿದ್ದರು. ಗಂಡ ಬೆಳುವಾಯಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಹಿಳೆಯ ಮನೆಗೆ ಕೂಲಿ ಕಾರ್ಮಿಕ ಗುರುವ ಮತ್ತು ಹರೀಶ್ ಆಗಾಗ್ಗೆ ಬಂದು ಹೋಗುತ್ತಿದ್ದರು. ಮೇ 23ರಂದು ಹರೀಶ್ ಪೂಜಾರಿ ಮಹಿಳೆ ಮನೆಯಲ್ಲೆ ಇದ್ದ. ಸಂಜೆ ಗುರುವ ಕೂಡ ಮನೆಗೆ ಬಂದಿದ್ದಾನೆ. ಇದೇ ವೇಳೆ ಮಹಿಳೆ ಜತೆಗಿನ ಅನೈತಿಕ ಸಂಬಂಧ ಬಗ್ಗೆ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಜಗಳ ಒಂದು ಹಂತದಲ್ಲಿ ಮುಕ್ತಾಯ ಕಂಡು ಇಬ್ಬರು ರಾತ್ರಿ 8 ಗಂಟೆಗೆ ಮಲಗಿದ್ದಾರೆ.
ಇದನ್ನೂ ಓದಿ:ಗೋಕಾಕ-ಶಿಂಗಳಾಪುರ ಬ್ರಿಡ್ಜ್ ನಲ್ಲಿ ಮುಳುಗಿ ಯುವಕ ಕಣ್ಮರೆ
ಆದರೆ ರಾತ್ರಿ ಮಲಗಿದ್ದ ಹರೀಶ್ ಪೂಜಾರಿಯ ತಲೆಗೆ ಆರೋಪಿ ಗುರುವ ಕಬ್ಬಿಣದ ಹಾರೆಯಿಂದ ಹೊಡೆದು ಕೊಲೆ ನಡೆಸಿ ಪರಾರಿಯಾಗಿದ್ದಾನೆ. ಅನೈತಿಕ ಸಂಬಂಧವಿರುವ ದ್ವೇಷದಿಂದಲೇ ಕೊಲೆ ನಡೆದಿದೆ ಎನ್ನಲಾಗಿದೆ.
ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಸ್ಥಳಕ್ಕೆ ಡಿವೈಎಸ್ಪಿ ಭರತ್ ರೆಡ್ಡಿ, ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಗ್ರಾಮಾಂತರ ಠಾಣೆ ಎಸ್ಐ ತೇಜಸ್ವಿ ಸ್ಥಳಕ್ಕೆ ಭೇಟಿ ತನಿಖೆ ನಡೆಸಿದರು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ