ಮಣಿಪುರ ಸೇತುವೆ ಬಳಿ ಹೊಳೆಗೆ ಹಾರಿ ವ್ಯಕ್ತಿ ನಾಪತ್ತೆ
Team Udayavani, Jul 3, 2017, 3:40 AM IST
ಕಾಪು: ಮಣಿಪುರ ಸೇತುವೆ ಬಳಿ ಕಾರೊಂದನ್ನು ನಿಲ್ಲಿಸಿ ಉಡುಪಿಯ ವಾದಿರಾಜ ರಸ್ತೆ ನಿವಾಸಿ ಪ್ರಕಾಶ್ ಪೈ (58) ಅವರು ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಕಾಶ್ ಪೈ ಅವರ ಮಾರುತಿ ಕಾರು, ಮೊಬೈಲ್, ವಾಚ್ ಹಾಗೂ ಡೆತ್ನೋಟ್ ಕಾರಿನ ಸೀಟಿನಲ್ಲಿ ಪತ್ತೆಯಾಗಿವೆ. ಶನಿವಾರದಿಂದ ಅವರು ವಿಪರೀತ ತಲೆನೋವು ಎಂದು ಹೇಳುತ್ತಿದ್ದು, ಡೆತ್ನೋಟ್ನಲ್ಲಿರುವ ಹಸ್ತಾಕ್ಷರ ಪ್ರಕಾಶ್ ಪೈ ಅವರದ್ದೇ ಎಂದು ಅವರ ಪತ್ನಿ ದೃಢೀಕರಿಸಿದ್ದಾರೆ.
ಉಡುಪಿಯಿಂದ ಅಗ್ನಿಶಾಮಕ ದಳ, ಸ್ಥಳೀಯ ಈಜುಗಾರರು ಆಗಮಿಸಿ ಹೊಳೆಯಲ್ಲಿ ದೇಹದ ಪತ್ತೆಗೆ ಶ್ರಮಿಸಿದ್ದು ರಾತ್ರಿಯವರೆಗೂ ಪ್ರಕಾಶ್ ಪೈ ಅವರ ಪತ್ತೆಯಾಗಿಲ್ಲ. ಮಣಿಪುರ ಮಾರ್ಗದಲ್ಲಿ ಸಂಚರಿಸುವ ಬಸ್ಗಳ ಚಾಲಕರು ಕಾರು ನಿಲ್ಲಿಸಿರುವುದನ್ನು ಗಮನಿಸಿದ್ದಾರೆ. ಮಧ್ಯಾಹ್ನದ ಬಳಿಕ ಹೊಳೆಗೆ ಹಾರಿರುವುದನ್ನು ಮೀನು ಹಿಡಿಯುವ ಮಂದಿ ನೋಡಿರುವುದಾಗಿ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಪ್ರಕಾಶ್ ಪೈ ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಎಂದು ತಿಳಿದುಬಂದಿದೆ. ವಿಪರೀತ ತಲೆನೋವಿನಿಂದ ಮನನೊಂದು ತಾನು ಆತ್ಮಹತ್ಯೆಯನ್ನು ಎಸಗುತ್ತಿರುವುದಾಗಿ ಡೆತ್ನೋಟ್ನಲ್ಲಿ ಬರೆಯಲಾಗಿದೆ. ಕಾಪು ಠಾಣಾಧಿಕಾರಿ ಜಗದೀಶ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ