46 ದಿನಗಳ ಬಳಿಕ ಮೊಬೈಲ್ ರಿಂಗಣಿಸಿತೆ?
Team Udayavani, Feb 1, 2019, 1:00 AM IST
ಮಲ್ಪೆ: ನಾಪತ್ತೆಯಾಗಿರುವ ಮೀನುಗಾರ ಪೈಕಿ ಕುಮಟಾದ ಹೊಲನಗದ್ದೆಯ ಲಕ್ಷ್ಮಣ ಹರಿಕಂತ್ರ ಅವರ ಮೊಬೈಲ್ ಬುಧವಾರ ರಾತ್ರಿ ಹಾಗೂ ಹೊನ್ನಾವರ ಮಂಕಿಯ ರವಿ ಅವರ ಮೊಬೈಲ್ ಗುರುವಾರ ಬೆಳಗ್ಗೆ ರಿಂಗಣಿಸಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಲಕ್ಷ್ಮಣ ಅವರ ಮನೆಯವರು ಬಡಾನಿಡಿಯೂರು ಚಂದ್ರಶೇಖರ್ ಅವರ ಮನೆಯವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿ ದ್ದಾರೆ. ನಾಪತ್ತೆಯಾದ ದಿನದಿಂದಲೂ ಲಕ್ಷ್ಮಣ ಹರಿಕಂತ್ರ ಮನೆಯವರು ಪ್ರತಿ ನಿತ್ಯ ಮೊಬೈಲ್ ಕರೆಗೆ ಪ್ರಯತ್ನಿಸುತ್ತಲೇ ಇದ್ದಾರೆ. ಲಕ್ಷ್ಮಣರ ಮಗಳು ಬುಧವಾರ ರಾತ್ರಿ 7.24 ಮತ್ತು 7.47ಕ್ಕೆ ಎರಡು ಸಲ ಪ್ರಯತ್ನಿಸಿದಾಗಲೂ ಮೊಬೈಲ್ ರಿಂಗ್ ಆಯಿತು, ತತ್ಕ್ಷಣ ಸ್ವಿಚ್xಆಫ್ ಸಂದೇಶ ಬಂತು. ರವಿ ಅವರ ಮೊಬೈಲ್ಗೂ ಗುರುವಾರ ಬೆಳಗ್ಗೆ ಕರೆ ಹೋಗಿದ್ದು, ಅನಂತರ ಸ್ವಿಚ್xಆಫ್ಆಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮನೆಯವರು ಪೊಲೀಸ್ ವರಿಷ್ಠರಿಗೆ ತಿಳಿಸಿದ್ದಾರೆ. ಮಾಹಿತಿ ಕಲೆ ಹಾಕಿದ ಪೊಲೀಸರು ಆ ಎರಡೂ ನಂಬರುಗಳಿಗೆ ಕರೆ ಹೋಗಿರುವುದು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕುಟುಂಬದವರ ಆಕ್ರೋಶ
ಎರಡು ಮೂರು ವಾರದಿಂದ ಸಮುದ್ರದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳುತ್ತಾ ಇದ್ದೀರಿ, ಆದರೆ ಇನ್ನೂ ಯಾವುದೇ ಮಾಹಿತಿಯನ್ನು ಸ್ಪಷ್ಟ ಪಡಿಸುತ್ತಿಲ್ಲವೇಕೆ, ಸಮುದ್ರದಡಿಯಲ್ಲಿರುವ ವಸ್ತು ಏನೆಂದು ತಿಳಿಯಲು ಇಷ್ಟು ದಿನ ಬೇಕೆ ಎಂದು ಬುಧವಾರ ಮಲ್ಪೆ ಬಂದಿದ್ದ ಪೊಲೀಸ್ ವರಿಷ್ಠರ ಎದುರು ಮೀನುಗಾರ ಮನೆಯವರು ಆಕೋÅಶ ವ್ಯಕ್ತಪಡಿಸಿದರು.