ಹೇರೂರು ಸೇತುವೆಯಲ್ಲಿ ಕತ್ತಲ ಭಾಗ್ಯ! 


Team Udayavani, Feb 2, 2019, 12:30 AM IST

kathalabhagya.jpg

ವಿಶೇಷ ವರದಿ- ಉಡುಪಿ: ಮುಂಬಯಿ, ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುವವರು ನಿತ್ಯ ಇದೇ ಎರಡು ಸೇತುವೆಗಳನ್ನು ಹಾದು ಹೋಗಬೇಕು. ಆದರೆ ಈ ಸೇತುವೆಗಳು ಸಂಜೆಯಾದರೆ ಸಾಕು ಕತ್ತಲ ಕೂಪಕ್ಕೆ ಜಾರುತ್ತಿವೆ. ಇದು ಕಳೆದ ಒಂದೂವರೆ ತಿಂಗಳಿನಿಂದ ಹೆರೂರು ಸೇತುವೆ ಕಥೆ-ವ್ಯಥೆ. 

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಹೇರೂರು ಸೇತುವೆ ಕಾಮಗಾರಿ ಸಂದರ್ಭ ಹೊಸದಾಗಿ ಆಳವಡಿಸಿರುವ ಬೀದಿ ದೀಪಗಳು ನಿರ್ವಹಣೆಯಿಲ್ಲದೆ ಉರಿಯುತ್ತಿಲ್ಲ. ಅಪಘಾತ ವಲಯವೆಂಬ ಅಪಕೀರ್ತಿಗೆ ಒಳಗಾಗಿರುವ ಈ ಪ್ರದೇಶದಲ್ಲಿ ಕತ್ತಲು ಕವಿದ ಮೇಲೆ ಪಾದಚಾರಿಗಳೂ ಹೋಗಲು ಭಯಪಡುತ್ತಾರೆ. ಇಷ್ಟಾದರೂ ಗುತ್ತಿಗೆದಾರ ನವಯುಗ ಸಂಸ್ಥೆ ಮೌನಕ್ಕೆ ಶರಣಾಗಿದೆ.

2 ವರ್ಷಗಳ ಹಿಂದೆ ಸೇತುವೆ ನಿರ್ಮಾಣ ವೇಳೆ ಆರು ವಿದ್ಯುತ್‌ ಕಂಬಗಳನ್ನು, ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಈಗ ಎಲ್ಲ ದೀಪಗಳೂ ಕೆಟ್ಟು ಹೋಗಿವೆ. 

4,000 ವಾಹನಗಳ ಸಂಚಾರ
ಸೇತುವೆಯಲ್ಲಿ ನಿತ್ಯ 4 ಸಾವಿರಕ್ಕೂ  ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ರಾತ್ರಿ ವೇಳೆ ಸರಕು ಹಾಗೂ ಮೀನು ಸಾಗಾಟ ಲಾರಿಗಳ ಓಡಾಟ ಹೆಚ್ಚು. ಈ ವೇಳೆ ಚಾಲಕರು ನಿರ್ಲಕ್ಷ್ಯವಹಿಸಿದರೆ, ಅಪಾಯ ಕಟ್ಟಿಟ್ಟದ್ದು.  ರಾತ್ರಿ ವಾಹನಗಳ ಹೈಬೀಮ್‌ನಿಂದಾಗಿ ತಿರುವು ಮತ್ತು ಸೇತುವೆ ಬದಿ ಕಾಣಿಸುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತದೆ. ಇದು ಕೇವಲ ಹೇರೂರು ಸೇತುವೆಯ ಸಮಸ್ಯೆ ಮಾತ್ರವಲ್ಲ, ಉಡುಪಿ- ಕುಂದಾಪುರ ಹೆದ್ದಾರಿಯಲ್ಲಿ ಶೇ. 40ರಷ್ಟು  ಬೀದಿ ದೀಪಗಳು ಹಾಳಾಗಿವೆ. ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿರುವ ನವಯುಗ ಸಂಸ್ಥೆ ಈ ಬಗ್ಗೆ ಗಮನ ಗಮನ ಹರಿಸಿಲ್ಲ. ಆದ್ದರಿಂದ ಸುರಕ್ಷತೆ ಹಿನ್ನೆಲೆಯಲ್ಲಿ ಕೂಡಲೇ ಗುತ್ತಿಗೆದಾರ ಕಂಪೆನಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನಹರಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹ.  

ವರ್ಷದಲ್ಲಿ  6 ಅವಘಡ
ಈ ಸ್ಥಳ ಅಪಘಾತಕ್ಕೂ ಪ್ರಸಿದ್ಧ. 2017-18ನೇ ಸಾಲಿನಲ್ಲಿ ಒಟ್ಟು ಆರು ಆಪಘಾತಗಳು ಸಂಭವಿಸಿದ್ದು, 10ಕ್ಕಿಂತ ಅಧಿಕ ಜನರು ಗಾಯಾಳುಗಳಾಗಿದ್ದಾರೆ ಎಂದು ಪೊಲೀಸ್‌ ಇಲಾಖೆಯ ಮಾಹಿತಿ ನೀಡಿದೆ.

ಜವಾಬ್ದಾರಿ ಕಂಪೆನಿಯದ್ದು 
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆಯನ್ನು ನವಯುಗ ಸಂಸ್ಥೆ ನೀಡಲಾಗಿದೆ. ಹಾಗೂ ಅವರೇ ಅಳವಡಿಸಿದ ಬೀದಿ ದೀಪಗಳ ನಿರ್ವಹಣೆ ಜವಾಬ್ದಾರಿಯೂ ಅವರ ಮೇಲಿದೆ.  
– ವಿಜಯ ಕುಮಾರ್‌
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ 

ದುರಸ್ತಿಗೆ ಮುಂದಾಗಿಲ್ಲ 
ಪಂಚಾಯಿತಿ ಸುಪರ್ದಿಯಲ್ಲಿರುವ, ಹೆದ್ದಾರಿ ಸಮೀಪ ಅಳವಡಿಸಲಾದ ಸೋಲಾರ್‌ ಬೀದಿದೀಪಗಳು ಕೆಟ್ಟರೆ ಒಂದೆರಡು ದಿನಗಳಲ್ಲಿ ದುರಸ್ತಿ ಮಾಡಲಾಗುತ್ತದೆ. ಆದರೆ ತಿಂಗಳು ಕಳೆದರೂ ಇಲ್ಲಿ ಗುತ್ತಿಗೆದಾರ ನವಯುಗ ಕಂಪೆನಿ ದುರಸ್ತಿಗೆ ಮುಂದಾಗಿಲ್ಲ. ಇಲ್ಲಿ ಪಾದಚಾರಿಗಳು ಸಂಚರಿಸಲೂ ಭಯ ಪಡುತ್ತಿದ್ದಾರೆ.
– ಸೂರಪ್ಪ ,
ಹೇರೂರು ರಿಕ್ಷಾ ಚಾಲಕ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.