ಬೆಳ್ವೆ : ಹೆಂಡತಿ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ
Team Udayavani, Nov 27, 2019, 11:06 PM IST
ಕುಂದಾಪುರ: ವ್ಯಕ್ತಿಯೋರ್ವ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆಗೈದು ಬಳಿಕ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ವೆ ಗ್ರಾಮದಲ್ಲಿ ನಡೆದಿದೆ.
ಬೆಳ್ವೆ ಗ್ರಾಮದ ಸೂರ್ಗೋಳಿ ಸಮೀಪದ ಸೆಟ್ಟೋಳಿಯ ನಿವಾಸಿ ಸೂರ್ಯನಾರಾಯಣ ಭಟ್ ಅಳೆÕ (50) ಆತ್ಮಹತ್ಯೆ ಮಾಡಿಕೊಂಡ ವರು. ಪತ್ನಿ ಮಾನಸ (45), ಮಕ್ಕಳಾದ ಸುಧೀಂದ್ರ (14) ಮತ್ತು ಸುದೇಶ್ (8) ಹತ್ಯೆಗೀಡಾದವರು.
ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಮತ್ತು ಮಕ್ಕಳಿಬ್ಬರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದರೆ, ಪತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸೂರ್ಯ ನಾರಾಯಣ ಅವರು ಪತ್ನಿಯನ್ನು ಮಾರಾಕಾಸ್ತ್ರಗಳಿಂದ ಇರಿದು, ಮಕ್ಕಳಿಬ್ಬರಿಗೆ ವಿಷವುಣಿಸಿ, ಬಳಿಕ ತಾನು ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿÇÉಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ… ಭೇಟಿ ನೀಡಿ¨ªಾರೆ.
ಕೃಷಿ ಜತೆಗೆ ಕ್ಯಾಟರಿಂಗ್
ಕೃಷಿಕರಾಗಿದ್ದ ಸೂರ್ಯನಾರಾಯಣ ಕ್ಯಾಟರಿಂಗ್ ಕೆಲಸ ಹಾಗೂ ಮಂದಾರ್ತಿ ದೇವಸ್ಥಾನಕ್ಕೂ ಅಡುಗೆ ಕೆಲಸಕ್ಕೂ ಹೋಗುತ್ತಿದ್ದರು. ಸ್ಥಳೀಯವಾಗಿಯೂ ಸಭೆ, ಸಮಾರಂಭದ ಅಡುಗೆ ಕೆಲಸಕ್ಕೆ ಹೋಗು ತ್ತಿದ್ದರು. ಪತ್ನಿ ಮೂಲತಃ ಮೈಸೂರಿನವಾಗಿದ್ದು ಗೃಹಿಣಿಯಾಗಿದ್ದರು. ಮಕ್ಕಳಾದ ಸುಧೀಂದ್ರ 5ನೇ ತರಗತಿ, ಸುಕೇಶ್ 3ನೇ ತರಗತಿಯನ್ನು ಹೆಬ್ರಿಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದರು.
ಸೂರ್ಯನಾರಾಯಣರ ಇನ್ನಿಬ್ಬರು ಅಣ್ಣಂದಿರು ಹಾಗೂ ಓರ್ವ ತಂಗಿ ಬೆಂಗಳೂರಿ ನಲ್ಲಿ¨ªಾರೆ. ಒಬ್ಬರು ಅಕ್ಕ ಕೋಟದಲ್ಲಿ, ಮತ್ತೂಬ್ಬರು ಅಕ್ಕ ಶಿವಮೊಗ್ಗದಲ್ಲಿ, ಇನ್ನೊಬ್ಬರು ಬ್ರಹ್ಮಾವರದ ಪೇತ್ರಿಯಲ್ಲಿ ವಾಸವಾಗಿ¨ªಾರೆ.
ಕಾರಣ ನಿಗೂಢ
ಸೂರ್ಯನಾರಾಯಣ ಅಡುಗೆ ಕೆಲಸ ಜತೆಗೆ ಕೃಷಿಕರಾಗಿದ್ದು, ಅನುಕೂಲಸ್ಥರಾಗಿದ್ಧರು ಎಂದು ಸ್ಥಳೀಯರು ಹೇಳುತ್ತಾರೆ. ಕೃತ್ಯಕ್ಕೆ ಕಾರಣ ಮಾತ್ರ ನಿಗೂಢವಾಗಿದೆ.
ಮಂಗಳವಾರ ರಾತ್ರಿಯ ಕೃತ್ಯ?
ಮೃತದೇಹಗಳನ್ನು ಪರಿಶೀಲಿಸಿರುವ ಪೊಲೀಸರು ಮಂಗಳವಾರ ರಾತ್ರಿ ಅಥವಾ ಹಗಲಿನಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?
ಸೂರ್ಯನಾರಾಯಣ ಅವರ ತಮ್ಮ ಪ್ರಕಾಶ್ ಅವರು ಅಲ್ಲೇ ಸಮೀಪದ ಮನೆಯಲ್ಲಿ ನೆಲೆಸಿದ್ದು, ರಾತ್ರಿಯಾದರೂ ಯಾಕೆ ಲೈಟ್ ಹಾಕಿಲ್ಲ ಎಂದು ಅನುಮಾನಗೊಂಡು ಸ್ಥಳೀಯರೊಬ್ಬರೊಟ್ಟಿಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತತ್ಕ್ಷಣ ಶಂಕರನಾರಾಯಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.
ಬಂಟ್ವಾಳದ ದುರ್ಘಟನೆ ನೆನಪು
2015ರ ಸೆ. 24ರಂದು ಬಂಟ್ವಾಳದಲ್ಲಿ ಇಂತಹದ್ದೇ ಪ್ರಕರಣ ಸಂಭವಿಸಿತ್ತು. ಗ್ರಾ.ಪಂ. ಸದಸ್ಯ ಪದ್ಮನಾಭ ನಾಯಕ್ ಅವರು ಪತ್ನಿ, ಮಕ್ಕಳಿಬ್ಬರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…