ವಾಹನ ಸಂಚಾರ ನಿಷೇಧಿಸಿ ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಪಂಚಾಯತ್
ಕುರ್ಕಾಲು-ಮಣಿಪುರ: ಸಂಪರ್ಕ ರಸ್ತೆ ಕುಸಿತ
Team Udayavani, Sep 7, 2019, 5:44 AM IST
ಕಟಪಾಡಿ: ಕುರ್ಕಾಲು-ಮಣಿಪುರ ಸಂಪರ್ಕದ ಬಹುಮುಖ್ಯ ರಸ್ತೆಯೊಂದು ನಡುವೆ ಕುಸಿದಿದ್ದು, ಭಾರೀ ಗಾತ್ರದ ಕಂದಕ ಸೃಷ್ಟಿಯಾಗಿದ್ದು, ವಾಹನ ಸಂಚಾರ ನಿಷೇಧಿಸಲಾಗಿರುತ್ತದೆ.
ಬೆಳ್ಮಣ್, ಶಿರ್ವ, ಶಂಕರಪುರ ಭಾಗದಿಂದ ಮಣಿಪುರ-ದೆಂದೂರುಕಟ್ಟೆ-ಅಲೆವೂರು ಮಣಿಪಾಲಕ್ಕೆ ಸಂಪರ್ಕವನ್ನು ಕಲ್ಪಿಸುವ ಹೆಚ್ಚು ಬಳಕೆಯಲ್ಲಿರುವ ಅತೀ ಶಾರ್ಟ್ ಕಟ್ ಆಗಿರುವ ಈ ರಸ್ತೆಯು ತೀವ್ರಗೊಂಡ ಮಳೆಯ ಪರಿಣಾಮ ಕುಸಿತಕ್ಕೊಳಗಾಗಿದೆ.
ಜಿಲ್ಲಾ ಪಂಚಾಯತ್ ರಸ್ತೆ ಇದಾಗಿದ್ದು, ಹೆಚ್ಚು ವಾಹನ ದಟ್ಟಣೆಯಿಂದ ಕೂಡಿದೆ. ಮಣಿಪುರ-ದೆಂದೂರು ಕಟ್ಟೆ-ಅಲೆವೂರು-ಉಡುಪಿಗೂ ಸಂಪರ್ಕವನ್ನು ಕಲ್ಪಿಸುವ ಹತ್ತಿರದ ರಸ್ತೆಯಾಗಿದ್ದು ರಾತ್ರಿ ಹಗಲೆನ್ನದೆ ಹೆಚ್ಚು ವಾಹನಗಳು ಸಂಚರಿಸುತ್ತಿರುತ್ತವೆ.
ಮಳೆಯ ತೀವ್ರತೆಗೆ ಹೆಚ್ಚಳಗೊಂಡಿರುವ ನೀರಿನ ಮಟ್ಟದಿಂದಾಗಿ ರಸ್ತೆ ನಿರ್ಮಾಣಕ್ಕೆ ಹಾಕಲಾಗಿದ್ದ ಅಡಿಪಾಯ ಕುಸಿದಿದೆ. ಹಾಗಾಗಿ ಮೆನ್ನಲ ನಾಗೇಶ್ ಜತ್ತನ್ನ ಮನೆಯ ಬಳಿಯಲ್ಲಿ ಮೇಲ್ಭಾಗದಲ್ಲಿನ ರಸ್ತೆಯ ಕಾಂಕ್ರೀಟ್ ಕುಸಿತಕ್ಕೊಳಗಾಗಿದೆ.
ಕುಸಿತದಿಂದ ದೊಡ್ಡ ಗಾತ್ರದಲ್ಲಿ ಕಂದಕ ನಿರ್ಮಾಣಗೊಂಡಿರುವ ಕಾರಣದಿಂದ ವಾಹನಗಳ ಸಂಚಾರ ಅಪಾಯಕಾರಿಯಾಗಿದೆ. ಎಚ್ಚೆತ್ತ ಕುರ್ಕಾಲು ಗ್ರಾಮ ಪಂಚಾಯತ್ ವಾಹನ ಸಂಚಾರವನ್ನು ನಿಷೇಧಿಸಿ ಬ್ಯಾನರ್ ಅಳವಡಿಸಿದ್ದು, ಬ್ಯಾರಿಕೇಡ್ ಇರಿಸಿ ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.
ಈ ಸ್ಥಳದಲ್ಲಿ ಮೊದಲು ಆಲದ ಮರವೊಂದು ಇದ್ದು, ರಸ್ತೆ ನಿರ್ಮಾಣದ ಸಂದರ್ಭ ತೆರವುಗೊಳಿಸಲಾಗಿದೆ. ಅದರ ಬುಡಭಾಗವನ್ನು ಸಮರ್ಪಕವಾಗಿ ನಿರ್ವಹಿಸದೆ ಇದೀಗ ಮಣ್ಣು ಕುಸಿದಿರಬಹುದೆಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಮಣ್ಣು ತುಂಬಿಸುವ ಪ್ರಕ್ರಿಯೆ ನಡೆಯುತ್ತಿದ್ದು ಮಣಿಪುರ ಭಾಗದಲ್ಲಿ ಮತ್ತು ಕುರ್ಕಾಲು ಭಾಗದಲ್ಲಿಯೂ ಬ್ಯಾನರ್, ಬ್ಯಾರಿಕೇಡ್ ಅಳವಡಿಸಿ ವಾಹನ ಸವಾರರನ್ನು ಎಚ್ಚರಿಸುವ ಸೂಚನೆಯನ್ನು ಅಳವಡಿಸಲಾಗಿದೆ.
ಮಳೆ ನಿಂತ ಬಳಿಕ ಶಾಶ್ವತ ಪರಿಹಾರ
ಇದು ಜಿ.ಪಂ. ರಸ್ತೆಯಾಗಿದೆ. ಎಂಜಿನಿಯರಿಂಗ್ ವಿಭಾಗಕ್ಕೆ ರಸ್ತೆ ಕುಸಿತದ ಬಗ್ಗೆ ಮಾಹಿತಿ ನೀಡಲಾಗಿದೆ. ಅಪಾಯ ಸಂಭವಿಸಬಾರದೆಂಬ ದೃಷ್ಟಿಯಿಂದ ವಾಹನ ಸಂಚಾರ ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ. ಮಳೆ ಬಿರುಸಿನಿಂದ ಕೂಡಿದ್ದು ತುರ್ತಾಗಿ ತಾತ್ಕಾಲಿಕ ಕೆಲಸ ಮಾತ್ರ ಸಾಧ್ಯ. ಶಾಶ್ವತ ಪರಿಹಾರ ಮಳೆ ನಿಂತ ಬಳಿಕ ನಡೆಯುವ ಭರವಸೆ ಇದೆ.
-ಶೋಭಾ, ಅಧ್ಯಕ್ಷೆ, ಕುರ್ಕಾಲು ಗ್ರಾ.ಪಂ.
ತಾತ್ಕಾಲಿಕ ಕಾಮಗಾರಿ ಸ್ಥಳವನ್ನು ಪರಿಶೀಲನೆ ನಡೆಸಲಾಗಿದೆ. ರಸ್ತೆ ನಿರ್ಮಾಣದ ಸಂದರ್ಭ ಅಳವಡಿಸಲಾದ ತಳ ಭಾಗದ ಮಣ್ಣು ಮಳೆಯ ನೀರಿನ ಮಟ್ಟ ಹೆಚ್ಚಳದಿಂದ ಕುಸಿದಿದೆ. ಆದುದರಿಂದ ಕಾಂಕ್ರೀಟ್ ರಸ್ತೆಯು ಕುಸಿತಕ್ಕೊಳಗಾಗಿದೆ. ಸದ್ಯ ಮಣ್ಣು ತುಂಬಿಸಿ ಭದ್ರಪಡಿಸಲಾಗುತ್ತದೆ. ಮಳೆ ಮುಗಿದ ಬಳಿಕ ಕಾಂಕ್ರೀಟ್ ಹಾಕಲಾಗುತ್ತದೆ. ಎರಡು ದಿನಗಳೊಳಗಾಗಿ ತಾತ್ಕಾಲಿಕ ಕಾಮಗಾರಿ ನಡೆಯಲಿದೆ.
– ಸುನಿಲ್ ಕುಮಾರ್, ಜಿ.ಪಂ. ಎಂಜಿನಿಯರಿಂಗ್ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ