ಮರವಂತೆ-ತ್ರಾಸಿ ಕಡಲ್ಕೊರೆತ ತಡೆಗೆ ಪೈಲೆಟ್ ಯೋಜನೆ
Team Udayavani, Oct 24, 2019, 5:21 AM IST
ಉಪ್ಪುಂದ: ವಿಶ್ವವಿಖ್ಯಾತ ತಾಣವಾಗಿ ರುವ ಮರವಂತೆ ಬೀಚ್ನ ಮರಳಿನ ಹಾಗೂ ಕಡಲ್ಕೊರೆತ ತಡೆಯುವ ನಿಟ್ಟಿನಲ್ಲಿ ಆರಂಭಿಸಿದ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆಗೆ ಈಗ ಅಂತಿಮ ಸ್ಪರ್ಷ ನೀಡಲಾಗುತ್ತಿದೆ.
ಮರವಂತೆ-ತ್ರಾಸಿ ಗ್ರಾಮಗಳಿಗೆ ಸೇರಿದ ಸಮುದ್ರ-ನದಿ ನಡುವಿನ ಇಕ್ಕಟ್ಟಾದ ದಂಡೆಯ ಮೇಲೆ ಸಾಗುವ 3 ಕಿಲೋಮೀಟರು ಉದ್ದದ ರಾಷ್ಟ್ರೀಯ ಹೆದ್ದಾರಿ ಭಾಗಕ್ಕೆ ಸದಾ ಕಡಲ್ಕೊರೆತದ ಭೀತಿ. ರಾಷ್ಟ್ರೀಯ ಮಹತ್ವದ ಈ ಸಂಪರ್ಕಸೇತುವಿನ ಸುರಕ್ಷತೆಗಾಗಿ ಎರಡು ವರ್ಷಗಳ ಹಿಂದೆ ಕೈಗೆತ್ತಿಕೊಂಡ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಈಗ ಮುಕ್ತಾಯದ ಹಂತಕ್ಕೆ ಬಂದಿದೆ.
ಗ್ರಾಯಿನ್ ಕಲ್ಲು: ಮರಳಿನ ರಕ್ಷಣೆ
ಕಡಲ್ಕೊರೆತ ತಡೆಗೆ ದಶಕಗಳಿಂದ ಚಾಲ್ತಿಯಲ್ಲಿ ರುವ ಕಲ್ಲುಗಳನ್ನು ಪೇರಿಸುವ ಕೆಲಸ ನಿರೀಕ್ಷಿತ ಯಶಸ್ಸು ನೀಡುತ್ತಿಲ್ಲ. ಅದಕ್ಕಾಗಿ ಹಲವೆಡೆ ಫಲ ನೀಡಿದೆ ಎನ್ನಲಾಗುವ ಈ ಯೋಜನೆಯನ್ನು ಇಲ್ಲಿ ಅನುಷ್ಠಾನಿಸಲಾಗಿದೆ. ಇದರಲ್ಲಿ ಸಮುದ್ರದ ದಂಡೆಯುದ್ದಕ್ಕೆ ಕಲ್ಲುಗಳನ್ನು ಜೋಡಿಸುವ ಬದಲಿಗೆ ದಂಡೆಗೆ ಲಂಬವಾಗಿ ಸಮುದ್ರದತ್ತ ಹೊರಚಾಚಿರುವ ಗ್ರಾಯಿನ್ ಅಥವಾ ಕರೆಗೋಡೆ ಎಂದು ಕರೆಯಲಾಗುವ ಕಲ್ಲಿನ ನಿರ್ಮಾಣಗಳನ್ನು ರಚಿಸಲಾಗಿದೆ. ಇವು ತೀರ ಪ್ರದೇಶದ ಸವಕಳಿಯನ್ನು ತಡೆಯುತ್ತವೆ. ಅದರ ಜತೆಗೆ ಎರಡು ಗ್ರಾಯಿನ್ಗಳ ನಡುವೆ ಅಲೆಗಳ ಸಹಜ ಪ್ರಕ್ರಿಯೆಯ ಪರಿಣಾಮ ವಾಗಿ ಮರಳು ಶೇಖರಣೆಯಾಗಿ ಸಮುದ್ರದಂಡೆ ವಿಸ್ತರಿಸುತ್ತದೆ.
ಕರೆಗೋಡೆಗಳ ನಿರ್ಮಾಣ
ಈ ಪ್ರದೇಶದಲ್ಲಿ ಪ್ರತಿ 120 ಮೀಟರ್ ಅಂತರದಲ್ಲಿ 24 ಕರೆಗೋಡೆಗಳನ್ನು ನಿರ್ಮಿಸಲಾಗಿದೆ. ಸಮುದ್ರವು ಹೆದ್ದಾರಿಗೆ ತೀರ ನಿಕಟವಾಗಿರುವಲ್ಲಿ 9 “ಟಿ’ ಮಾದರಿಯ ಮತ್ತು ಉಳಿದೆಡೆ 15 “ಐ’ ಮಾದರಿಯ ಕರೆಗೋಡೆಗಳನ್ನು ರಚಿಸಲಾಗಿದೆ.
“ಐ’ ಕರೆಗೋಡೆಗಳು 100 ಮೀಟರ್ ಉದ್ದ, ತಳದಲ್ಲಿ 30 ಮೀಟರ್ ಮತ್ತು ಶಿರದಲ್ಲಿ 4 ಮೀಟರ್ ಅಗಲವಾಗಿರುತ್ತವೆ.
“ಟಿ’ ಮಾದರಿಯವು 76 ಮೀಟರ್ ಉದ್ದ, ತಳದಲ್ಲಿ 36 ಮೀಟರ್ ಮತ್ತು ಶಿರದಲ್ಲಿ 5 ಮೀಟರ್ ಅಗಲವಾಗಿರುತ್ತವೆ. ಈ 9 ಕರೆಗೋಡೆಗಳ ಹೊರಮೈಯಲ್ಲಿ ಕಾಂಕ್ರೀಟಿನ ಟೆಟ್ರಾಪಾಡ್ಗಳ ರಕ್ಷಣೆ ಒದಗಿಸಲಾಗಿದೆ.
ಜಿಯೋಫ್ಯಾಬ್ರಿಕ್ ಶೀಟ್
ಕರೆಗೋಡೆಗಳ ತಳದ 1.5 ಮೀಟರ್ ಆಳದ ಮರಳನ್ನು ತೆಗೆದು ಅಲ್ಲಿ ಜಿಯೋಫ್ಯಾಬ್ರಿಕ್ ಶೀಟ್ ಹರಡಿ ಅದರ ಮೇಲೆ ಕಲ್ಲುಗಳನ್ನು ಅಳವಡಿಸಲಾಗಿರುವುದರಿಂದ ಕರೆಗೋಡೆಗಳು ದೀರ್ಘಕಾಲ ಕುಸಿಯದೆ ಉಳಿಯುತ್ತವೆ.
ಕಾಮಗಾರಿ ಹೆಚ್ಚಾಕಡಿಮೆ ಮುಗಿದಿದ್ದು, ಕೆಲವು ಕರೆಗೋಡೆಗಳಿಗೆ ಟೆಟ್ರಾಪಾಡ್ ಅಳವಡಿಸುವ ಕೆಲಸ ಮಾತ್ರ ಉಳಿದಿದೆ.
ಪುಣೆಯ ಕೇಂದ್ರೀಯ ಜಲಶಕ್ತಿ ಸಂಶೋಧನಾ ಕೇಂದ್ರ ಅನುಮೋದಿಸಿದ 88 ಕೋಟಿ ರೂ. ವೆಚ್ಚದ ಈ ಯೋಜನೆಗೆ ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್ನ ಮುಂಗಡ ನೆರವು ದೊರಕಿದೆ. ಬಂದರು ಇಲಾಖೆಯ ಉಸ್ತುವಾರಿಯಲ್ಲಿ ಕಾಮಗಾರಿ ನಡೆದಿದೆ.
ಸೆಲ್ಫಿ ಮುದ
ಈ ತೀರದಲ್ಲಿ ಸಮುದ್ರ ಆಳವಾಗಿರುವುದರಿಂದ ಸೀಮಿತ ಭಾಗದಲ್ಲಿ ಮಾತ್ರ ಪ್ರವಾಸಿಗಳು ವಿಹರಿಸಬಹುದಿತ್ತು. ಈಗ ಅವರು ಉದ್ದಕ್ಕೂ ರಚನೆಯಾಗಿರುವ ಗ್ರಾಯಿನ್ಗಳ ಮೇಲೆ ನಡೆದಾಡುತ್ತ, ತೆರೆ ಚಿಮ್ಮಿಸುವ ನೊರೆಯನ್ನು ನೋಡುತ್ತ, ಸಮುದ್ರದ ನಡುವೆ ಇದ್ದಂತೆ ಭಾಸವಾಗುವಂತೆ ಸೆಲ್ಫಿ ತೆಗೆದುಕೊಳ್ಳುತ್ತ ಮೊದಲಿಗಿಂತ ಹೆಚ್ಚು ಮುದಗೊಳ್ಳುತ್ತಿದ್ದಾರೆ.
– ಕೃಷ್ಣ ಬಿಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್