ಮಳೆಯ ಮುನ್ನ ಮುನ್ನೆಚ್ಚರಿಕೆ ಕ್ರಮ ಅಗತ್ಯ
Team Udayavani, May 21, 2019, 6:14 AM IST
ಪಡುಬಿದ್ರಿ: ಚತುಃಷ್ಪಥ ಹೆದ್ದಾರಿ 66 ಸಾಗುತ್ತಿರುವ ಪಡುಬಿದ್ರಿಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಮಾತಿಗೂ ಬೆಲೆ ಇಲ್ಲದಂತಾಗಿ ಅರ್ಧಂಬರ್ಧ ಕಾಮಗಾರಿಗಳಾಗಿರುವ ಸರ್ವಿಸ್ ರಸ್ತೆಗಳು ಈ ಬಾರಿ ಮಳೆಗಾಲಕ್ಕೆ ಕಂಬಳದ ಗದ್ದೆಗಳಾಗಲಿವೆ.
ಜನಸಾಮಾನ್ಯರ ಬಗೆಗೆ ಕಾಳಜಿ ಅಗತ್ಯ
ಮುಖ್ಯಪೇಟೆಯ ಪಶ್ಚಿಮ ಬದಿಯ ಸರ್ವಿಸ್ ರಸ್ತೆಯಲ್ಲಿ ಜನರ ಓಡಾಟವು ಬಹಳಷ್ಟಿದೆ. ಮಕ್ಕಳೂ ಶಾಲೆಗೆ ತೆರಳುತ್ತಿರುತ್ತಾರೆ. ಪಡುಬಿದ್ರಿ ಪಂಚಾಯತ್, 5 -6 ಬ್ಯಾಂಕುಗಳೂ ಈ ಭಾಗದಲ್ಲಿವೆ. ಆದರೆ ಈ ಭಾಗದಲ್ಲಿ ಒಳಚರಂಡಿ ಕಾಮಗಾರಿಯನ್ನೂ ಅರೆಬರೆ ನಡೆಸಲಾಗಿದೆ. ಕಬ್ಬಿಣದ ರಾಡ್ಗಳನ್ನು ನೆಟ್ಟು ಬಿಟ್ಟಿರುವ ಆಳೆತ್ತರದ ಹೊಂಡಗಳಲ್ಲಿ ಯಾರಾದರೂ ಅನಿರೀಕ್ಷಿತವಾಗಿ ಬಿದ್ದಲ್ಲಿ ಎಲ್ಲಿಂದ ಹೊರಬರಲಿದೆ ಎನ್ನವುದೂ ತಿಳಿಯದು. ಕಬ್ಬಿಣದ ರಾಡ್ಗಳೂ ಮೈ, ಕೈ ಹೊಕ್ಕದಿರದು. ಅಂತಹಾ ಬೇಜವಾಬ್ದಾರಿಯುತ ಕಾಮಗಾರಿ ನಡೆಸಿರುವ ನವಯುಗ ನಿರ್ಮಾಣ ಕಂಪೆನಿ ಯೋಜನಾ ನಿರ್ದೇಶಕ ಕೈಗೆ ಸಿಗದೇ ನುಸುಳಿಕೊಳ್ಳುತ್ತಿದ್ದಾರೆ. ಅವರಿಗೆ ಜನಸಾಮಾನ್ಯರ ಬಗೆಗೆ ಕಾಳಜಿ ಅತ್ಯವಶ್ಯಕವಾಗಿದೆ.
ವೇಗ ನಿಯಂತ್ರಕ ಸೂಚನಾ ಫಲಕ ಅಳವಡಿಸಿ
ಮಳೆಗಾಲದ ಬಿರುಸಿನ ಮಳೆ ಸುರಿಯಿತೆಂದರೆ ಈ ರಸ್ತೆಯಲ್ಲಿ ಪಾದಚಾರಿಗಳು ಓಡಾಡಲಾಗದು. ಹೆದ್ದಾರಿಯನ್ನೇ ಬಳಸಿ ಪಾದಚಾರಿಗಳು ನಡೆಯಬೇಕಾಗುತ್ತದೆ. ಹಾಗಾಗಿ ಪಡುಬಿದ್ರಿಯನ್ನು ಹೆದ್ದಾರಿ ವಾಹನಗಳು ಪ್ರವೇಶಿಸುವ ಮುಂಚಿತವಾಗಿಯೇ ವೇಗ ನಿಯಂತ್ರಕ ಸೂಚನಾ ಫಲಕವನ್ನು ಅಳವಡಿಸಬೇಕಾದ ಅನಿವಾರ್ಯತೆಯಿದೆ.
ಮುಖ್ಯ ಪೇಟೆಯಲ್ಲಿ ರಾಜ್ಯ ರಾಷ್ಟ್ರ ಹೆದ್ದಾರಿಗಳ ಸಂಗಮ ಸ್ಥಳದಲ್ಲಿ ಇದುವರೆಗೂ ಹೆದ್ದಾರಿ ಮಧ್ಯೆ ಸಿಗ್ನಲ್ ಲೈಟ್ಗಳ ಅಳವಡಿಕೆಯಾಗಿಲ್ಲ.
ನಾಲ್ಕೂ ಕಡೆಗಳಿಂದಲೂ ಇಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಪ್ರವೇಶಿಸುತ್ತಿದ್ದು ಪಾದಚಾರಿಗಳು ಅದರಲ್ಲೂ ಶಾಲಾರಂಭದ ದಿನಗಳಲ್ಲಿ ಶಾಲಾ ಮಕ್ಕಳೂ ನಡೆದಾಡಲೂ ದುಸ್ತರವಾಗಲಿದೆ. ಹೆದ್ದಾರಿ ಮಧ್ಯೆ ಹಾಕಲಾದ ವಿದ್ಯುದ್ದೀಪಗಳು ಇನ್ನೂ ಉರಿಯಲಾರಂಭಿಸಿಲ್ಲ.
ಕುಂದುಕೊರತೆಗಳ ವರದಿ ಮಾಡಿಕೊಂಡಿದ್ದೇವೆ
ಇವೆಲ್ಲವುಗಳ ಕುರಿತು ಪಡುಬಿದ್ರಿ ಗ್ರಾ. ಪಂ. ಪಿಡಿಒ ಪಂಚಾಕ್ಷರಿ ಕೆರಿಮಠ ಅವರಲ್ಲಿ ಕೇಳಿದಾಗ ರಾಷ್ಟ್ರೀಯ ಹೆದ್ದಾರಿ ಕುಂದುಕೊರತೆಗಳ ಕುರಿತಾಗಿ ಈಗಾಗಲೇ ತಾವು ಪಂಚಾಯತ್ ವತಿಯಿಂದ ಕಾಪು ತಹಶೀಲ್ದಾರ್ರಿಗೆ ವರದಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ