ಕುಂದಾಪುರ: ತಾಲೂಕಿನ ವಿವಿಧೆಡೆ ಬತ್ತಿದ ನದಿಗಳು


Team Udayavani, May 21, 2019, 6:15 AM IST

battida-kere

ಕುಂದಾಪುರ: ಪಂಚ ನದಿಗಳ ನಾಡು ಎಂದು ಕುಂದಾಪುರ ಪ್ರಸಿದ್ಧ. ಇದಕ್ಕಾಗಿಯೇ ಇದನ್ನು ಪಂಚಗಂಗಾವಳಿ ಎನ್ನಲಾಗುತ್ತದೆ. ಸಮುದ್ರದ ತಟದಲ್ಲೇ ಕುಂದಾಪುರ ನಗರ ಇದೆ. ತಾಲೂಕಿನಾದ್ಯಂತ 8ಕ್ಕಿಂತ ಹೆಚ್ಚು ನದಿ, ಹೊಳೆಗಳು ಹರಿಯುತ್ತವೆ. ಆದರೆ ನೀರಿಲ್ಲದೇ ಸಮಸ್ಯೆ ಬಿಗಡಾಯಿಸಿದೆ. ಇದ್ದರೂ ಉಪ್ಪುನೀರು. ಬಳಕೆಗೆ ಅಯೋಗ್ಯ. ಪುಣ್ಯಕ್ಷೇತ್ರಗಳಲ್ಲೂ ನೀರಿನ ಸಮಸ್ಯೆ ಉಂಟಾಗಿದೆ. ಹರಿವ ಹೊಳೆ ಸ್ತಬ್ಧವಾಗುತ್ತಿದೆ. ಸದಾ ನೀರಿನ ಜುಳು ಜುಳು ಕೇಳುವ ಹೊಳೆಯಲ್ಲಿ ಕರಿಕಲ್ಲಿನ ದರ್ಶನ. ಕಾಲಿಟ್ಟರೆ ಬಿಸಿ ಮರಳು.

ನದಿಗಳು
ವಾರಾಹಿ, ಸೌಪರ್ಣಿಕಾ, ಕುಬಾj, ಚಕ್ರಾ, ಜಂಬೂ, ಹಾಲಾಡಿ ಹೊಳೆ, ವಿಮಲಾ ನದಿ, ಸೀತಾ, ಸುಮನಾವತಿ ನದಿ ಹೀಗೆ ಬೇರೆ ಬೇರೆ ನದಿ ಹೊಳೆಗಳು ತಾಲೂಕಿನ ವಿವಿಧೆಡೆ ಹರಿಯುತ್ತವೆ. ಆದರೆ ಸಮುದ್ರದ ಸಮೀಪದ ಕೆಲವು ಕಿಮೀ. ನಷ್ಟು ದೂರದವರೆಗೆ ಉಪ್ಪುನೀರು (ಹಿನ್ನೀರು) ತುಂಬಿರುತ್ತದೆ. ಆದ್ದರಿಂದ ಈ ನೀರು ಕುಡಿಯಲು ಹಾಗೂ ಕೃಷಿ ಬಳಕೆಗೆ ಅಸಾಧ್ಯ. ಸಿಗಡಿ ಮೀನು ಸಾಕಾಣಿಕೆಗೆ ಕೂಡಾ ಇದರಿಂದ ಅನನುಕೂಲವೇ.

ನೀರಿಲ್ಲ
ಪುರಸಭೆ ಸಹಿತ ಸುತ್ತಲಿನ ಐದು ಪಂಚಾಯತ್‌ಗಳಿಗೆ ನೀರು ಕೊಡುವ ಜಂಬೂ ನದಿಯಲ್ಲಿ ಸಮೃದ್ಧ ನೀರಿದೆ. ವಾರಾಹಿಯಲ್ಲಿ ಬೇಕಾದಷ್ಟು ನೀರಿದೆ. ಆದರೆ ಕುಡಿಯಲು ಬೇಕಾದ ಪ್ರಮಾಣದಲ್ಲಿ ಸದ್ಬಳಕೆಯಾಗುತ್ತಿಲ್ಲ. ವಾರಾಹಿ ನದಿಗೆ ಸಪರ್ಮಕವಾದ ಯೋಜನೆ ರೂಪಿಸಿದರೆ ಇಡೀ ಉಡುಪಿ ಜಿಲ್ಲೆಗೆ ಸಾಕಾಗುವಷ್ಟು ಪ್ರಮಾಣದ ನೀರಿದೆ. ಇತರ ಹೊಳೆ, ನದಿಗಳೆಲ್ಲ ಬತ್ತಿವೆ. ಹಳ್ಳಕೊಳ್ಳಗಳ ಜತೆಗೆ ಮದಗಗಳೂ ನೀರಿಂಗಿಸಿಕೊಂಡು ಬರಿದಾಗಿವೆ. ಬಾವಿಗಳಲ್ಲಿ ಎಂದೋ ನೀರಿಲ್ಲ. ಮನೆ ಮನೆಗಳಲ್ಲಿ ನೀರಿನ ಹಾಹಾಕಾರ.

ತೀರ್ಥಕ್ಷೇತ್ರಗಳಲ್ಲಿ
ಕಮಲಶಿಲೆಯಲ್ಲಿ ಕುಬಾj ನದಿ, ಮಾರಣಕಟ್ಟೆಯಲ್ಲಿ ಚಕ್ರ, ಕೊಲ್ಲೂರಿನಲ್ಲಿ ಸೌಪರ್ಣಿಕಾ ನದಿ ಹರಿಯುತ್ತದೆ. ಇಲ್ಲೆಲ್ಲ ನೀರಿನ ಕೊರತೆಯಾಗಿದೆ. ಚಕ್ರಾನದಿಯಲ್ಲಿ ನೀರಿನ ಕೊರತೆಯಾಗಿ ಮೀನುಗಳು, ಜಲಚರಗಳು ಕೂಡಾ ಸಾಯುತ್ತಿವೆ. ಸೌಪರ್ಣಿಕಾ ನದಿಯಲ್ಲಿ ನೀರಿನ ಕೊರತೆಯಾಗಿದ್ದು ಕೊಲ್ಲೂರಿನಲ್ಲಿ ಸಮಸ್ಯೆ ಉಂಟಾಗಿದೆ.

ಯೋಜನೆ ಮಂಜೂರಿಲ್ಲ
ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾತಿಗೆ ಪ್ರಸ್ತಾವನೆ ಹೋಗಿತ್ತು. ಆದರೆ ಸರಕಾರ ಈ ಯೋಜನೆಯನ್ನೇ ರದ್ದು ಮಾಡಿ ಹೊಸ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿತು. ಈಗ ಹಳೆಯದೂ ಇಲ್ಲ, ಹೊಸದೂ ಇಲ್ಲ ಎಂದಾಗಿದೆ. ನಾಡಾ ಪಂಚಾಯತ್‌ ವ್ಯಾಪ್ತಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವ ಬ್ಯಾಂಕ್‌ ಕುಡಿಯುವ ನೀರಿನ ಯೋಜನೆಯೇ ಸದ್ಯದಲ್ಲಿ ಇದ್ದುದರಲ್ಲಿ ದೊಡ್ಡ ಯೋಜನೆ.

  • ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.