ಸರಕಾರಿ ಕಚೇರಿಗಳಲ್ಲಿ ಯಾವಾಗ ಮಳೆನೀರು ಕೊಯ್ಲು ?
Team Udayavani, Aug 14, 2019, 6:05 AM IST
ಉಡುಪಿ: ಸಾರ್ವಜನಿಕರ ಮನೆಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿ ಆಳವಡಿಸುವಂತೆ ಸೂಚನೆ ನೀಡಿರುವ ಜಿಲ್ಲಾಡಳಿತ ತನ್ನ ಕಚೇರಿ ಕಟ್ಟಡ , ಇತರ ಸರಕಾರಿ ಕಚೇರಿಗಳಲ್ಲಿ ಮಳೆ ನೀರುಕೊಯ್ಲು ಆಳವಡಿಸದೆ ಇರುವುದು ಶೋಚನೀಯ.
ಜಿಲ್ಲೆಯ ಗ್ರಾ.ಪಂ., ತಾ.ಪಂ, ಜಿಲ್ಲಾಧಿಕಾರಿ ಕಚೇರಿ, ಸರಕಾರಿ ಆಸ್ಪತ್ರೆ, ವಿವಿಧ ಇಲಾಖೆಗಳ ಕಟ್ಟಡದಲ್ಲಿ ಇಂದಿಗೂ ಮಳೆನೀರು ಕೊಯ್ಲು ಅಳವಡಿಸಿಲ್ಲ. ಬಹುತೇಕ ಗ್ರಾ.ಪಂ. ಕಟ್ಟಡಗಳು ಹೊಸತೇ ಆದರೂ ಮಳೆನೀರು ಕೊಯ್ಲನ್ನು ಅಳವಡಿಸಿ ಕೊಂಡಿಲ್ಲ. ಈ ಬಾರಿಯ ಬೇಸಗೆಯಲ್ಲಿ ಜಿಲ್ಲೆಯ 5 ತಾಲೂಕುಗಳು ನೀರಿನ ಸಮಸ್ಯೆಗೆ ತತ್ತರಿಸಿ ಹೋಗಿವೆೆ. ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ‘ಉದಯವಾಣಿ’ ದಿನಪತ್ರಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಜಲಸಾಕ್ಷರ ಅಭಿಯಾನ ಆರಂಭಿಸಿ ಜನರಲ್ಲಿ ಮಳೆನೀರು ಕೊಯ್ಲು ಕುರಿತು ಅರಿವು ಮೂಡಿಸುತ್ತಿದೆ.
ಸಮಾಜಕ್ಕೆ ಮಾದರಿಯಾಗಲಿ
ಜಿಲ್ಲಾಧಿಕಾರಿ ಕಚೇರಿಗೆ ಪ್ರತಿನಿತ್ಯ ಒಂದಲ್ಲ ಒಂದು ಕೆಲಸಕ್ಕೆ ಸಾರ್ವಜನಿಕರು ಬರುತ್ತಾರೆ. ಇಲ್ಲಿರುವ ಕಟ್ಟಡಗಳಿಗೆ ಮಳೆನೀರು ಕೊಯ್ಲನ್ನು ಅಳವಡಿಸಿಕೊಂಡರೆ ಬಹುತೇಕ ರಿಗೆ ಅದೊಂದು ಪ್ರಾತ್ಯಕ್ಷಿಕೆಯೋಪಾದಿ ಕೆಲಸ ಮಾಡುತ್ತದೆ. ಅದನ್ನು ಮಾದರಿಯಾಗಿ ಸ್ವೀಕರಿಸಿ ಜನತೆ ತಮ್ಮ ಮನೆಗಳಲ್ಲಿಯೂ ಮಳೆನೀರು ಕೊಯ್ಲು ಅಳವಡಿಸುತ್ತಾರೆ.
ವರ್ಷಕ್ಕೆ 24.28 ಕೋ.ಲೀ. ನೀರು ವ್ಯರ್ಥ!
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆ ನೀರನ್ನು ಶೇಖರಿಸಿ, ಪುನರ್ಬಳಕೆ ಮಾಡಿಕೊಳ್ಳುವ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸದೇ ಇರುವುದು ವಿಪರ್ಯಾಸ. 9,940 ಚ.ಮೀ. ವಿಶಾಲವಾಗಿರುವ ಜಿಲಾಧಿಕಾರಿ ಕಚೇರಿಯು ವರ್ಷಕ್ಕೆ ಕಟ್ಟಡದ ಮೇಲ್ಛಾವಣಿಯ ಮೇಲೆ 3.97 ಕೋ.ಲೀ. ಮಳೆ ನೀರು ಬೀಳುತ್ತದೆ. ಇಷ್ಟು ನೀರಿನ ಮೂಲವಿರುವ ಇಲ್ಲಿ ಮಳೆನೀರು ಕೊಯ್ಲನ್ನು ಅಳವಡಿಸಿಕೊಳ್ಳದ ಕಾರಣ ಸುಮಾರು 15 ಎಕ್ರೆ ಭೂಮಿಯಲ್ಲಿ ಸುಮಾರು 24.28 ಕೋ.ಲೀ. ಮಳೆ ನೀರು ವ್ಯರ್ಥವಾಗುತ್ತಿದೆ.
ಸರಕಾರಿ ನಿಯಮವಿದ್ದರೂ ಯಾವುದೇ ಸರಕಾರಿ ಕಚೇರಿಗಳಾಗಲಿ, ನೂತನವಾಗಿ ನಿರ್ಮಾಣವಾಗುತ್ತಿರುವ ಖಾಸಗಿ ಕಟ್ಟಡ ಗಳಲ್ಲಾಗಲಿ ಮಳೆನೀರು ಕೊಯ್ಲು ಕಡ್ಡಾಯದ ಬಗ್ಗೆ ಗಮಹರಿಸುತ್ತಿಲ್ಲ. ನೀರಿನ ಕೊರತೆಯ ಕುರಿತು ಬೊಬ್ಬೆ ಹಾಕಿದರೆ ಸಾಲದು, ನಮಗೆ ಲಭ್ಯವಾಗುವ ನೀರನ್ನು ವ್ಯರ್ಥವಾಗದಂತೆ ಬಳಕೆ ಮಾಡಿಕೊಳ್ಳಬೇಕು ಎಂಬ ಅರಿವು ಜನರಲ್ಲಿ ಮೂಡಬೇಕಾದ ಅವಶ್ಯಕತೆಯಿದೆ.
ಪ್ರತಿ ಹನಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್