ಮರಳಿನ ಕೊರತೆ: ಅರೆಹೊಟ್ಟೆಯಲ್ಲೇ ವರ್ಷಾಚರಣೆ!
ಉಡುಪಿ ಜಿಲ್ಲೆ: ಇನ್ನು 15 ದಿನಗಳಲ್ಲಿ ಈ ವರ್ಷದ ಮರಳುಗಾರಿಕೆಗೆ ವಿದಾಯ
Team Udayavani, May 18, 2019, 6:00 AM IST
ಉಡುಪಿ: ಸಾಮಾನ್ಯವಾಗಿ ಹಲವು ಸಂತಸ ಸಂಗತಿಗಳಿಗೆ ವರ್ಷಾಚರಣೆ ಮಾಡುವ ಸಂಪ್ರದಾಯವಿದೆ. ಆದರೆ, ಉಡುಪಿ ಮರಳು ರಹಿತ ಜಿಲ್ಲೆಯಾಗಿ ವರ್ಷಾಚರಣೆಗೆ ಸಜ್ಜಾಗುತ್ತಿದೆ. ಈ ವರ್ಷದ ಮರಳು ಗಾರಿಕೆ 15 ದಿನಗಳಲ್ಲಿ ಮುಗಿಯಲಿದ್ದು, ಇನ್ನೇನಿದ್ದರೂ ಮುಂದಿನ ವರ್ಷ ಮರಳಿನ ಕನಸು ಕಾಣಬೇಕಿದೆ.
ಜೂ. 1ರಿಂದ ಜು. 31ರ ವರೆಗೆ ಮೀನುಗಾರಿಕೆ ನಿಷೇಧದ ಅವಧಿ. ಈ ಅವಧಿಯಲ್ಲಿ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವಂತಿಲ್ಲ. ಹಾಗಾಗಿ ಮರಳು ತೆಗೆಯುವುದೇನಿದ್ದರೂ ಮೇ 31 ರವರೆಗೆ ಮಾತ್ರ. ಆದರೆ ಆ ಅವಕಾಶ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಮೇ 15 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏಳು ಸದಸ್ಯರ ಮರಳು ಸಮಿತಿ ಸಭೆ ನಡೆದು ಮರಳು ತೆಗೆಯುವ ಕುರಿತು ಇರುವ ಮಾರ್ಗದರ್ಶಿ ಸೂತ್ರಗಳ ಚರ್ಚೆ ನಡೆಯಿತು. ಯಾರೆಲ್ಲ ಅರ್ಜಿ ಸಲ್ಲಿಸಿದ್ದಾರೆ ಇತ್ಯಾದಿ ಮಾಹಿತಿಗಳನ್ನು ಮುಂದಿನ ಸಭೆಗೆ ಮಂಡಿಸಲು ಜಿಲ್ಲಾಧಿಕಾರಿಯವರು ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಮೇ 23ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಇರುವುದರಿಂದ ಸದ್ಯಕ್ಕೆ ಸಭೆ ನಡೆಯುವ ಸಾಧ್ಯತೆ ಇಲ್ಲವಾಗಿದೆ.
ಬಳಿಕ ಸಭೆ ನಡೆದರೂ ಮೇ 31 ರೊಳಗೆ ಅವಕಾಶ ಸಿಗುವುದು ತೀರಾ ಕಷ್ಟ ಎಂಬಂತಾಗಿದ್ದು, ಒಂದು ವರ್ಷವಿಡೀ ಕೋರ್ಟು, ಪೀಠ, ಅಪೀಲು, ಆದೇಶ, ತೀರ್ಪು, ಪ್ರತಿಭಟನೆ, ಮೀಟಿಂಗ್, ರೈಡು, ತನಿಖೆ, ಪರಿಶೀಲನೆ, ತಪಾಸನೆ, ಪತ್ರ ರವಾನೆ, ನಿಯಮಾವಳಿ, ಮಂತ್ರಿಗಳು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ದಿಲ್ಲಿಗೆ-ಬೆಂಗಳೂರಿಗೆ ಎಂದೇ ಮುಗಿದು ಹೋಗಿದೆ ಎಂಬುದು ಜನಸಾಮಾನ್ಯರ ಅಳಲು.
ವರ್ಷದ ಪ್ರಯತ್ನವೆಲ್ಲ ವ್ಯರ್ಥ!
ಮರಳುಗಾರಿಕೆಗೆ ಪ್ರತಿ ವರ್ಷ ಗುತ್ತಿಗೆಯನ್ನು ಹೊಸದಾಗಿ ವಹಿಸಿಕೊಡಬೇಕು. ಆದ್ದರಿಂದ ಈ ವರ್ಷ ಇದುವರೆಗೆ ನಡೆಸಿದ ಪ್ರಯತ್ನಗಳು ಮುಂದಿನ ವರ್ಷಕ್ಕೆ ಪ್ರಯೋಜನಕ್ಕೆ ಬರುವುದಿಲ್ಲ. ಮುಂದಿನ ವರ್ಷ ಎಲ್ಲಿ? ಯಾರು ಮರಳುಗಾರಿಕೆ ನಡೆಸಬಹುದೆಂದು ಗುರುತು ಹಾಕಿಕೊಡಬೇಕು. ಮುಂದೆ ಆಗಸ್ಟ್ 1ರ ಅನಂತರ ಮರಳುಗಾರಿಕೆ ನಡೆಸಬಹುದು. ಅದಕ್ಕೂ ಈಗಲೇ ಕೆಲಸ ಆರಂಭವಾಗಬೇಕು. ಇಲ್ಲವಾದರೆ ಮುಂದಿನ ವರ್ಷವೂ ಕಷ್ಟ ಎನ್ನುತ್ತಾರೆ ಹಲವರು.
– ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿಗಳು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ