ಉಡುಪಿ: ಸಾವಯವ ಸಂತೆಗೆ ಮತ್ತೆ ಚಾಲನೆ
Team Udayavani, Dec 17, 2018, 10:11 AM IST
ಉಡುಪಿ: ಮಳೆಗಾಲದ ಸಮಸ್ಯೆಯಿಂದ ನಿಲುಗಡೆಗೊಂಡಿದ್ದ ರವಿವಾರದ ಸಾವಯವ ಸಂತೆ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆ ಆವರಣದಲ್ಲಿ ಡಿ. 16ರಂದು ಮತ್ತೆ ಆರಂಭಗೊಂಡಿತು.
ಬೆಳಗ್ಗೆ 6.30ರಿಂದಲೇ ಗ್ರಾಹಕರು ಆಗಮಿಸಿ ಸಾವಯವ ಉತ್ಪನ್ನಗಳ ಬೇಡಿಕೆಯನ್ನು ಸಾಬೀತುಪಡಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಸಹಾಯಕ ನಿರ್ದೇಶಕ ಚಂದ್ರಶೇಖರ್ ಮತ್ತಿತರ ಗಣ್ಯರೂ ಆಗಮಿಸಿ ಸಾವಯವ ಉತ್ಪನ್ನಗಳನ್ನು ಖರೀದಿಸಿದರು.
ಜಿಲ್ಲೆಯ ಐದು ಸಾವಯವ ಗ್ರಾಮಗಳಿಂದ ಸುಮಾರು 50 ಬಗೆಯ ಹಣ್ಣು, ತರಕಾರಿಗಳನ್ನು ರೈತರು ತಂದಿದ್ದರು. ಚಿಕ್ಕ ಮಗಳೂರಿನಿಂದ ಈರುಳ್ಳಿ, ಟೊಮೆಟೊ, ಕ್ಯಾರೆಟ್, ಬೀಟ್ರೂಟ್, ಅವರೆಕಾಯಿ, ಮೂಲಂಗಿ, ಸೌತೆ ಕಾಯಿ, ಮುಳ್ಳುಸೌತೆಯಂತಹ ಸುಮಾರು 15 ತರಹದ ಉತ್ಪನ್ನಗಳು ಬಂದಿದ್ದವು. ವಿವಿಧ ಬಗೆಯ ಅಕ್ಕಿ, ಸಿರಿಧಾನ್ಯ, ಅವಲಕ್ಕಿ, ಬೇಳೆಕಾಳು, ಸಾಂಬಾರು ಪದಾರ್ಥಗಳು, ಉಪ್ಪು, ಸಕ್ಕರೆ, ಬೆಲ್ಲ ಹೀಗೆ ನಾನಾ ವಿಧದ ಸಾಮಗ್ರಿಗಳನ್ನು ಗ್ರಾಹಕರು ಖರೀದಿಸಿದರು. ಸುಮಾರು ಶೇ. 90 ಉತ್ಪನ್ನಗಳು ಮಾರಾಟವಾಗಿವೆ. ಉಳಿದ ಸಾಮಗ್ರಿಗಳನ್ನು ಉಡುಪಿಯ ಗೋಮಾತಾ ಟ್ರೇಡರ್ನವರು ಖರೀದಿಸಲಿದ್ದಾರೆ ಎಂದು ಉಡುಪಿ, ದ.ಕ., ಚಿಕ್ಕಮಗಳೂರು ಸಾವಯವ ಒಕ್ಕೂಟದ ಸಿಇಒ ಮಂಜುನಾಥ್ “ಉದಯವಾಣಿ’ಗೆ ತಿಳಿಸಿದರು.
ಜನರಿಗೆ ಸಾವಯವದ ಅರಿವು ಆಗಿದೆ
ಜನರಿಗೆ ಸಾವಯವ ಸಂತೆ ಮತ್ತೆ ಆರಂಭಿಸಿದ್ದು ಖುಷಿಯಾಗಿದೆ. ಹಿಂದಿನ ಗ್ರಾಹಕರಲ್ಲದೆ ಹೊಸ ಗ್ರಾಹಕರೂ ಬಂದು ಉತ್ಪನ್ನಗಳನ್ನು ಕೊಂಡೊಯ್ದಿದ್ದಾರೆ. “ಈ ಎರಡು ಮೂರು ತಿಂಗಳಲ್ಲಿ ಸಾವಯವ ಉತ್ಪನ್ನಗಳು ಲಭ್ಯವಾಗದೆ ಇದ್ದದ್ದು ನಮಗೆ ಅರಿವಾಗಿದೆ. ಈ ಅವಧಿಯಲ್ಲಿ ನಮ್ಮ ಆರೋಗ್ಯ ಮತ್ತೆ ಹದಗೆಟ್ಟು ಔಷಧಿಗಳಿಗೆ ಹೆಚ್ಚು ಖರ್ಚಾಯಿತು. ಇನ್ನು ಮುಂದೆ ಸಂತೆಯನ್ನು ನಿಲ್ಲಿಸಬೇಡಿ. ನಿರಂತರವಾಗಿ ಮುಂದುವರಿಸಿ’ ಎಂದು ವಿಶೇಷವಾಗಿ ಮಹಿಳೆಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ದೇವದಾಸ ಹೆಬ್ಟಾರ್, ನಿರ್ದೇಶಕರು, ಉಡುಪಿ, ದ.ಕ., ಚಿಕ್ಕಮಗಳೂರು ಸಾವಯವ ಒಕ್ಕೂಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ