ಶಿರ್ವ ಮಹಾದೇವಿ ಭವನ ಸೇವೆ ಸ್ಥಗಿತ ಜಾಲತಾಣದಲ್ಲಿ ವೈರಲ್
Team Udayavani, May 22, 2019, 6:20 AM IST
ಶಿರ್ವ: ಕಳೆದ 49ವರ್ಷಗಳಿಂದ ಶಿರ್ವ ಮಂಚಕಲ್ ಪರಿಸರದಲ್ಲಿ ಶುದ್ಧ ಬ್ರಾಹ್ಮಣರ ಸಾಂಪ್ರದಾಯಿಕ ಶೈಲಿಯ ಸಸ್ಯಾಹಾರಿ ಊಟ ಉಪಾಹಾರಗಳಿಗೆ ಮನೆ ಮಾತಾಗಿದ್ದ ಹೊಟೇಲ್ ಶ್ರೀ ಮಹಾದೇವಿ ಭವನದ ಸೇವೆ ಸೋಮವಾರದಿಂದ ಸ್ಥಗಿತಗೊಂಡ ಸುದ್ದಿ ಗ್ರಾಹಕರಲ್ಲಿ ಬೇಸರ ಮೂಡಿಸಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿರ್ವ ಪರಿಸರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಲವು ದಶಕಗಳಿಂದ ರಿಯಾಯಿತಿ ದರದಲ್ಲಿ ಊಟ, ಬಡ ಮಕ್ಕಳಿಗೆ ಉಚಿತ ಊಟ ನೀಡುತ್ತಿದ್ದ ಮಾಲಕಿ ಸುನಂದಮ್ಮ ಮತ್ತು ಪುತ್ರ ಶಶಿಕುಮಾರ್ ಅವರ ನಗುಮೊಗದ ಆತಿಥ್ಯ ನೀಡುತ್ತಿ ದ್ದರು. ಮುಂಜಾನೆ 5ರಿಂದ ರಾತ್ರಿ 9ರ ವರೆಗೆ 45 ವರ್ಷಗಳಿಂದ ಸೇವೆಯಲ್ಲಿರುವ ಸುಂದರಣ್ಣ ತಂಡದ ನಗುಮೊಗದ ಸೇವೆ ದೊರೆಯುತ್ತಿತ್ತು.
ಶಾಲಾ ಕಾಲೇಜು ಉಪನ್ಯಾಸಕರು, ಬ್ಯಾಂಕ್ ಮತ್ತು ಇನ್ನಿತರ ಸಂಸ್ಥೆಗಳ ಸಿಬಂದಿ ಗಳಿಗೆ ಮನೆಯೂಟದಂತಿರುವ ಸಸ್ಯಾಹಾರಿ ಊಟ, ಇಡ್ಲಿ ವಡೆ, ಪೂರಿ ಬಾಜಿ, ಮಸಾಲೆ ದೋಸೆ ಗೋಳಿಬಜೆ, ಬನ್ಸ್ ಮತ್ತು ಮೈಸೂರ್ಪಾಕ್, ಬರ್ಫಿ, ಜಿಲೇಬಿ, ಸಾs…ನ ರುಚಿ ಸವಿದವರಿಗೆ ಹೊಟೇಲ್ ಮುಚ್ಚುವ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಇಲ್ಲಿನ ಮಿಸಲ್ ಅಂತೂ ಶಾಲಾ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಶಾಲಾ ದಿನಗಳಲ್ಲಿ ಮಹಾದೇವಿ ಭವನದ ಮಿಸಲ್ ತಿಂದಿರುವುದನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ‡’ಸೋಜಾ ಕೂಡ ನೆನಪಿಸಿಕೊಳ್ಳುತ್ತಾರೆ. ವಿದೇಶದಿಂದ ಬಂದ ಶಿರ್ವ ಪರಿಸರದ ಎನ್ನಾರೈಗಳು ಮಹಾದೇವಿ ಭವನದ ಉಪಾಹಾರ ಸವಿಯದೆ ಹಿಂದಿರುಗುವುದು ವಿರಳ.
ಕಾರಣಾಂತರಗಳಿಂದ ಹೊಟೇಲ್ ಉದ್ಯಮ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ .
ಹಲವು ವರ್ಷಗಳಿಂದ ಉದ್ಯಮ ನಡೆಸಿಕೊಂಡು ಬಂದಿರುವ ನಮ್ಮನ್ನು ಪ್ರೋತ್ಸಾಹಿಸಿದ ಶಿರ್ವದ ಜನತೆಗೆ ಕೃತಜ್ಞತೆ ಗಳು ಎಂದು ವ್ಯವಸ್ಥಾಪಕರು ಷಟರ್ನಲ್ಲಿ ಹಾಕಿದ ನೋಟಿಸ್ ಉಪಾಹಾರ ಪ್ರಿಯರಿಗೆ ಬೇಸರ ತರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ