ಪರಿಸರಸ್ನೇಹಿ ಪ್ರತಿಪಾದಕ ಗ್ರಂಥ ಬಿಡುಗಡೆ
Team Udayavani, Sep 10, 2019, 5:38 AM IST
ಉಡುಪಿ: ಭೂತಾನಿನ ಮಾಜಿ ಶಿಕ್ಷಣ ಸಚಿವ ಠಾಕೂರ್ ಸಿಂಗ್ ಪೌಡ್ಯೆಲ್ ಬರೆದ “ಮೈ ಗ್ರೀನ್ ಸ್ಕೂಲ್’ ಪುಸ್ತಕದ ಕನ್ನಡ ಅವತರಣಿಕೆ “ನನ್ನ ಪರ್ಣಿ ಶಾಲೆ’ಯನ್ನು ಮಣಿಪಾಲದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಸಿಎಲ್ಐಎಲ್ ಅಟ್ ಇಂಡಿಯಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಪುಸ್ತಕವನ್ನು ಬಿಡುಗಡೆಗೊಳಿಸಿದ ಮಾಹೆ ವಿ.ವಿ. ಕುಲಪತಿ ಡಾ|ಎಚ್. ವಿನೋದ ಭಟ್ ಅವರು, ಭಾರತೀಯ ಶಿಕ್ಷಣ ಪದ್ಧತಿಗೆ ಮರೆಯಲಾಗದ ಕೊಡುಗೆ ಸಲ್ಲಿಸಿರುವ ಡಾ| ರಾಧಾಕೃಷ್ಣನ್ ಅವರ ಸ್ಮರಣೀಯ ದಿನದಂದು ಬಹುಭಾಷೀಯ ಸಮ್ಮೇಳನವನ್ನು ಆಯೋಜಿಸಿದ್ದು ಶ್ಲಾಘನೀಯ. ಭಾರತೀಯ ಆಯಾಮದಲ್ಲಿ ಹೊಸ ಬೋಧನಕ್ರಮದ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿರುವ ಯೂರೋಪ್ ಮತ್ತು ಭಾರತೀಯ ಪಾಲುದಾರ ಸಂಸ್ಥೆಗಳು ಉತ್ತಮ ಕೆಲಸ ನಿರ್ವಹಿಸುತ್ತಿವೆ ಎಂದರು.
ಪ್ರಕೃತಿಯ ಘನಿಷ್ಠ ಸಂಬಂಧದೊಂದಿಗೆ ಒಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆ ಸಾಧ್ಯ ಎಂಬುದನ್ನು ಪುಸ್ತಕದಲ್ಲಿ ಪ್ರತಿಪಾದಿಸಿದ್ದೇನೆ. ವ್ಯಕ್ತಿಯು ಪ್ರಕೃತಿಯೊಂದಿಗೆ ಬಾಳುವೆ ನಡೆಸುವ ಬದುಕಿನ ಸಂಸ್ಕೃತಿ ಶಾಲಾ ಮಟ್ಟದಲ್ಲಿ ಜಾರಿಗೊಂಡರೆ ಬಲಿಷ್ಠ ಪರಿಸರಸ್ನೇಹಿ ಮತ್ತು ಮಾನವಿಕ ಸೂಕ್ಷ್ಮತೆಗಳನ್ನು ಒಳಗೊಂಡ ವ್ಯಕ್ತಿಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತನ್ನ ಪುಸ್ತಕದ ಬಗ್ಗೆ ಪೌಡ್ಯೆಲ್ ಹೇಳಿದರು.ಮಣಿಪಾಲ್ ಯುನಿವರ್ಸಲ್ ಪ್ರಸ್ ಮುಖ್ಯ ಸಂಪಾದಕಿ ಪ್ರೊ|ನೀತಾ ಇನಾಂದಾರ್ ಸ್ವಾಗತಿಸಿ ಪೌಡ್ಯೆಲ್ ಅವರನ್ನು ಭೇಟಿಯಾದಾಗ ಪುಸ್ತಕವನ್ನು ಅನುವಾದಿಸಲು ಪ್ರೇರಣೆ ದೊರಕಿತು ಎಂದರು. ಅನುವಾದ ಕಾರ್ಯದಲ್ಲಿ ಡಾ| ಎನ್. ಟಿ. ಭಟ್ ಅವರ ಸಹಕಾರವನ್ನು ಸ್ಮರಿಸಿಕೊಂಡರು. ಡಾ| ಎನ್.ಟಿ. ಭಟ್ ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ