ಅಂದು ತಾಯಿ, ಇಂದು ಮಗಳ ಉಡುಪಿ ಭೇಟಿ
Team Udayavani, Nov 21, 2017, 8:04 AM IST
ಉಡುಪಿ: ಗ್ವಾಲಿಯರ್ ರಾಜಮಾತೆ ವಿಜಯ ರಾಜೇ ಸಿಂಧಿಯಾ ಹಿಂದಿನಿಂದಲೂ ಪೇಜಾವರ ಶ್ರೀಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರು 1969ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಪ್ರಥಮ ಪ್ರಾಂತ ಸಮ್ಮೇಳನಕ್ಕೆ ಆಗಮಿಸಿದ್ದರೆ ಈಗ 15ನೇ ಧರ್ಮಸಂಸದ್ ಅಧಿವೇಶನ ನಡೆಯಲು ಇನ್ನು ಕೇವಲ ನಾಲ್ಕೇ ದಿನ ಇರುವಾಗ ಅವರ ಪುತ್ರಿ, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಆಕಸ್ಮಿಕ ವಾಗಿ ಪ್ರಥಮ ಬಾರಿ ಆಗಮಿಸಿ ದೇವರ ದರ್ಶನ ಪಡೆದರು.
ಸೋಮವಾರ ವಸುಂಧರಾ ರಾಜೇ ಮತ್ತು ಪುತ್ರ ದುಷ್ಯಂತ್ ಸಿಂಗ್ ಅವರು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದ ಬಳಿಕ ಅವರಿಗೆ ಶ್ರೀಕೃಷ್ಣ ಮಠದ ಮುಂಭಾಗ ಚಂದ್ರಶಾಲೆಯಲ್ಲಿ ಸ್ಮರಣಿಕೆ, ಪ್ರಸಾದ ನೀಡಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹರಸಿದರು. ವಿಜಯರಾಜೇ ಸಿಂಧಿಯಾ ಅವರೊಂದಿಗೆ ಇದ್ದ ಸಂಬಂಧವನ್ನು ಶ್ರೀಗಳು ನೆನಪಿಸಿಕೊಂಡರು.
ಅನಿರೀಕ್ಷಿತ ಭೇಟಿ: ಉಡುಪಿಗೆ ನಾನಿಂದು ದಿಢೀರ್ ಭೇಟಿ ನೀಡಿದ್ದೇನೆ. ಪೂರ್ವನಿಗದಿ ಆಗಿರಲಿಲ್ಲ. ಇದು ನನ್ನ ಪ್ರಥಮ ಭೇಟಿ. ಇದನ್ನು ನಾನು ಮರೆಯುವಂತಿಲ್ಲ. ನಾಲ್ಕು ತಲೆಮಾರಿನಿಂದ ಪೇಜಾವರ ಶ್ರೀಗಳವರ ಸಂಪರ್ಕವಿದೆ. ಈಗ ಐದನೇ ಪರ್ಯಾಯದ ಕೊನೆಯ ಹಂತದಲ್ಲಿರುವಾಗ ನಾನು ಮತ್ತು ಮಗ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇವೆ. ಕೊಲ್ಲೂರಿಗೆ ಹಿಂದೆ ಬರಬೇಕೆಂದು ಪ್ರಯತ್ನಿಸಿದ್ದೆ. ಆಗಿರಲಿಲ್ಲ. ಈಗ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡಿದಂತಾಗಿದೆ ಎಂದು ವಸುಂಧರಾ ರಾಜೇ ಸುದ್ದಿಗಾರರಿಗೆ ತಿಳಿಸಿದರು.
“ನೀವು ಬರುತ್ತೀರಿ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಬರುತ್ತಿಲ್ಲ’ ಎಂದು ಪತ್ರಕರ್ತರು ಹೇಳಿದಾಗ “ಅದರ ಬಗ್ಗೆ ಏನನ್ನೂ ಹೇಳಬಯಸುವುದಿಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ
Bengaluru: ಫ್ಲೈಓವರ್ಗಳಲ್ಲೂ ಕಸ ಸುರಿಯುವ ವಾಹನ ಸವಾರರು