Sirsi: ಸ್ವತಃ ಅತಿಥಿಯಾಗಿ ಬಂದು ಶಾಲಾ ಕೊಠಡಿ ಉದ್ಘಾಟಿಸಿದ ಶಿಕ್ಷಣ ಸಚಿವ!
Team Udayavani, Jan 20, 2024, 12:02 PM IST
ಶಿರಸಿ: ಶಿಕ್ಷಣ ಇಲಾಖೆಯ ವಿವೇಕ ಯೋಜನೆಯಡಿ 104 ಕಡೆ ಶಾಲೆಗಳಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿಯನ್ನು ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅತಿಥಿಯಾಗಿ ಬಂದು ಜ.20ರ ಶನಿವಾರ ಉದ್ಘಾಟಿಸಿದರು.
ನಿಗದಿತ ಅಂಕೋಲಾ ಕಾರ್ಯಕ್ರಮಕ್ಕೆ ಹೊರಟ ವೇಳೆ ನೂತನ ಉರ್ದು ಶಾಲೆಯ ಕೊಠಡಿ ಉದ್ಘಾಟಿಸಿ ಕೊಟ್ಟರು.
ಪ್ರಾರಂಭದಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶುಕ್ರವಾರ ರಾತ್ರಿ ಶಿರಸಿಗೆ ವಾಸ್ತವ್ಯಕ್ಕೆ ಬಂದಾಗ ಕೊಠಡಿ ಉದ್ಘಾಟನೆ ಪ್ರಸ್ತಾವನೆ ಬಂತು. ಚಿಕ್ಕ ಕೊಠಡಿ, ಉದ್ಘಾಟಿಸಿ ಬರುವೆ ಎಂದಾಗ, ನನ್ನ ಇಲಾಖೆ ಕಾರ್ಯಕ್ರಮ. ಸಣ್ಣದಾದರೇನು? ದೊಡ್ಡದಾದರೇನು ಎಂದು ಮಧು ಬಂಗಾರಪ್ಪ ಆಗಮಿಸಿದರು ಎಂದು ಬಣ್ಣಿಸಿದರು.
ಇದಕ್ಕೂ ಮೊದಲು ಮಾತನಾಡಿದ ಡಿಡಿಪಿಐ ಬಸವರಾಜ್ ಪಾರಿ, ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಅನೇಕ ಕ್ರಮಗಳಿವೆ. ಆದರೆ, ಅವರೇ ಶಿಕ್ಷಣ ಪ್ರೀತಿಯಿಂದ ಆಗಮಿಸಿದ್ದು ನಮ್ಮ ಭಾಗ್ಯ ಎಂದರು.
ಭೀಮಣ್ಣ ಶಾಸಕರು ಆದ ಮೇಲೆ ಪ್ರಥಮ ಬಾರಿಗೆ ಸರಕಾರಿ ಕಾರ್ಯಕ್ರಮದಲ್ಲಿ ಅವರ ಕ್ಷೇತ್ರದಲ್ಲಿ ಭಾಗಿಯಾದ ಸಂತೋಷ. ಮಕ್ಕಳಿಗೆ ಶಿಕ್ಷಣ ಕೊಡುವುದು ದೇವರ ಕೆಲಸ. ಮುಂದಿನ ವರ್ಷ 500 ಕೆಪಿಎಸ್ ಮಾದರಿ ಶಾಲೆ ಆರಂಭಿಸಲು ಯೋಜಿಸಿದ್ದೇವೆ. ಎಲ್ ಕೆಜಿಯಿಂದ ಪಿಯುಸಿ ತನಕ 14 ವರ್ಷ ಮಗು ಒಂದೇ ಕಡೆ ಓದುವಂತೆ ಆಗಬೇಕು ಎಂದರು.
ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಙವರ, ದಯಾನಂದ ನಾಯಕ, ಖಾದರ ಆನವಟ್ಟಿ, ಎಸ್.ಕೆ.ಭಾಗವತ, ಇಕ್ಬಾಲ್ ಬಿಳಗಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ