ಅಂಕೋಲಾ : ಭಾರಿ ಮಳೆಗೆ ಮೂರು ಸೇತುವೆ ಸಂಪೂರ್ಣ ಮುಳುಗಡೆ, ಗ್ರಾಮಗಳ ಸಂಪರ್ಕ ಕಡಿತ
Team Udayavani, May 20, 2022, 6:13 PM IST
ಅಂಕೋಲಾ : ಎಲ್ಲೆಡೆ ಕಳೆದೆರಡು ದಿನದಿಂದ ಭಾರಿ ಮಳೆ ಉಂಟಾಗುತ್ತಿದ್ದು ತಾಲೂಕಿನ ಜೀವ ನದಿ ಗಂಗಾವಳಿ ನದಿಗೆ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ರಾಮನಗುಳಿ ಭಾಗದ ಮೂರು ತಾತ್ಕಾಲಿಕ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಆ ಭಾಗದ ಸಂಪರ್ಕವು ಕಡಿತಗೊಂಡಿದೆ.
ರಾಮನಗುಳಿಯಿಂದ ಕಲ್ಲೇಶ್ವರ, ಶೇವಕಾರದಿಂದ ಗುಳ್ಳಾಪುರ ಹಾಗೂ ಕೈಗಡಿಯಿಂದ ಅರಬೈಲ್ ಸಂಕರ್ಪ ಕೊಂಡಿಯಾದ ತಾತ್ಕಾಲಿಕವಾದ ಸೇತುವೆ ಗಂಗಾವಳಿಗೆ ಹರಿದು ಬರುತ್ತಿರುವ ನೀರಿನಲ್ಲಿ ಮುಳುಗಡೆಯಾಗಿದೆ. ಇದರ ಪರಿಣಾಮ ಕಲ್ಲೇಶ್ವರ, ಶೇವಕಾರ ಮತ್ತು ಕೈಗಡಿ ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಕಳೆದ ವರ್ಷ ಗಂಗಾವಳಿ ನದಿಯ ಪ್ರವಾಹದಿಂದ ಇಲ್ಲಿಯ ಸೇತುವೆ ತೂಗು ಸೇತುವೆಗಳು ನೀರಿನ ಹರಿವಿಗೆ ಕೊಚ್ಚಿ ಹೋಗಿದ್ದವು. ಬಳಿಕ ಇಲ್ಲಿ ಸಂಕರ್ಪ ಮಾಡಲು ಸರಕಾರ ಸೇತುವೆ ನಿರ್ಮಾಣ ಮಾಡಲು ಅನೂಮೊದನೆ ನೀಡಿದೆ. ಆದರು ಜನರು ಒಡಾಡಲು ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗಿದ್ದು ಅದು ಈಗ ನೀರಿನಲ್ಲಿ ಮುಳುಗಡೆಯಾಗಿದೆ.
ಹುಬ್ಬಳ್ಳಿ ದಾರವಾಡದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ ಬೆಡ್ತಿ ಮುಇಲಕ ಗಂಗಾವಳಿ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದ್ದು ಗಂಗಾವಳಿ ನೀರಿನ ಮಟ್ಟ ನಿದಾನವಾಗಿ ಏರಿಕೆ ಅಗುತ್ತಿದ್ದು ಜನರು ಮತ್ತೆ ನೆರೆಯ ಬಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ : ಮೈಸೂರು ಅಭಿವೃದ್ಧಿಗೆ ಸಿದ್ದು ಕೊಡುಗೆ ಏನು?; ನಳೀನ್ ಕುಮಾರ್ ಕಟೀಲ್
ನೂಡಲ್ ಅಧಿಕಾರಿಗಳ ತಂಡ ರಚನೆ
ತಾಲೂಕಿನಾದ್ಯಂತ ಮಳೆ ಆಗುತ್ತಿರುವ ಹಿನ್ನೆಲೆ ಮತ್ತು ಗಂಗಾವಳಿ ನೀರಿನ ಮಟ್ಟ ಎರುತ್ತಿರುವ ಕಾರಣ ನೊಡಲ ಅಧಿಕಾರಿಗಳನ್ನೊಳಗೊಂಡ ತಂಡ ರಚನೆ ಮಾಡಿ ಆಯಾ ಭಾಗದಲ್ಲಿ ಗಮನ ನೀಡಲು ಸೂಚಿಸಲಾಗಿದೆ. ಜೊತೆಗೆ ಈಗಾಗಲೇ 10 ಮೀನುಗಾರಿಕಾ ದೋಣಿಗಳನ್ನು ನೆರೆ ಬರುವ ಸ್ಥಳವಾದ ಕೊಡ್ಸಣಿ, ಸುಂಕಸಾಳ, ಶಿರೂರು, ಡೊಂಗ್ರಿ, ಕಲ್ಲೇಶ್ವರ, ಶೆವಕಾರ ಬಾಗದಲ್ಲಿ ಇಡಲು ಯೊಚಿಸಲಾಗಿದೆ. ಈಗಾಗಲೇ ದೊಣಿ ಮಾಲಕರ ಜೊತೆ ಮಾತುಕತೆ ನಡೆಸಲಾಗಿದ್ದು ಒಂದೆರಡು ದಿದಲ್ಲಿಯೇ ನೆರೆ ಸ್ಥಳದಲ್ಲಿ ದೋಣಿ ವ್ಯವಸ್ಥೆ ಮಾಡಲಾಗುವುದು ಎಂದು ತಹಶಿಲ್ದಾರ ಉದಯ ಕುಂಬಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…