ಮನೆ ಬಾಗಿಲಿಗೆ ಹೃದಯ ವೈದ್ಯರು


Team Udayavani, Nov 11, 2019, 3:07 PM IST

uk-tdy-1

ಹೊನ್ನಾವರ: ಹಗಲು, ರಾತ್ರಿ ರೋಗಿಗಳ ಹೃದಯದ ಏರುಪೇರಿಗೆ ಸ್ಪಂದಿಸುವ ಡಾ| ಪದ್ಮನಾಭ ಕಾಮತ್‌ ಅವರ ಆಲೋಚನೆ ಮನೆಬಾಗಿಲಿಗೆ ಹೃದಯ ವೈದ್ಯರು (ಕಾರ್ಡಿಯೋಲಜಿಸ್ಟ್‌ ಎಟ್‌ ಡೋರ್‌ ಸ್ಟೆಪ್‌) ಇಷ್ಟೊಂದು ಯಶಸ್ವಿಯಾಗುತ್ತದೆ ಎಂದು ಅವರಿಗೂ ಕಲ್ಪನೆ ಇರಲಿಕ್ಕಿಲ್ಲ. 2018ರಲ್ಲಿ ಆರಂಭವಾದ ಈ ಯೋಜನೆ ಈವರೆಗೆ 2,750ಕ್ಕೂ ಹೃದಯ ಸಂಬಂಧಿ ಕಾಯಿಲೆಯನ್ನು ಗುರುತಿಸಿ, ತುರ್ತು ಸಲಹೆ ನೀಡಿ ಅವರ ಜೀವ ಉಳಿಸಲು ನೆರವಾಗಿದೆ. 11,670 ಜನ ಈ ಯೋಜನೆಗೆ ಸ್ಪಂದಿಸಿದ್ದಾರೆ.

ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಹೃದಯ ವಿಭಾಗದ ಮುಖ್ಯಸ್ಥರಾಗಿರುವ ಡಾ| ಪದ್ಮನಾಭ ಕಾಮತ್‌ ಯಕ್ಷಗಾನ ಪ್ರಿಯರು. ಹಳ್ಳಿಗೆ ಆಟಕ್ಕೆ ಹೋದಾಗ ಯಾರಿಗೋ ಹೃದಯಾಘಾತವಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿರುವುದನ್ನು ಕಂಡು ಮನನೊಂದು ಈ ಯೋಜನೆ ಹುಟ್ಟುಹಾಕಿದರು. 2019ರಲ್ಲಿ ಈ ಯೋಜನೆ ವಿಸ್ತರಿಸಿದರು. ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ದಾನಿಗಳಿಂದ ಇಸಿಜಿ ಉಪಕರಣ ಪಡೆದು ವೈದ್ಯರಿಗೆ ಮತ್ತು ನರ್ಸ್‌ಗಳಿಗೆ ಮಾಹಿತಿ ನೀಡಿ ಎದೆ ನೋವಿನ, ಹೃದಯಾಘಾತದ ಲಕ್ಷಣದ ರೋಗಿಗಳು ಬಂದರೆ ಅವರ ಇಸಿಜಿ ತೆಗೆದು ತಕ್ಷಣ ಸಿಎಡಿ ವಾಟ್ಸ್‌ಆ್ಯಪ್‌ ಗ್ರೋಪ್‌ಗೆ ವಾಟ್ಸ್‌ಆ್ಯಪ್‌ ಮುಖಾಂತರ ಕಳಿಸಬೇಕು. ತಕ್ಷಣ ಡಾ| ಕಾಮತ್‌ ಅಥವಾ ಅವರ ಬಳಗದವರು ಅಗತ್ಯವಿದ್ದರೆ ತುರ್ತು ಚಿಕಿತ್ಸೆ ಮತ್ತು ಹೆಚ್ಚಿನ ಚಿಕಿತ್ಸೆಗೆ ಸಮೀಪದ ಹೃದಯ  ವೈದ್ಯರನ್ನು ಕಾಣಲು ಸೂಚಿಸುತ್ತಾರೆ.

ಈ ಸೂಚನೆ ಪಾಲಿಸಿದ 550ಕ್ಕೂ ಹೆಚ್ಚು ಜನ ಈ ವರೆಗೆ ಜೀವ ಉಳಿಸಿಕೊಂಡಿದ್ದಾರೆ. ಕಾರ್ಡಿಯೋಲಜಿ ಎಟ್‌ ಡೋರ್‌ ಸ್ಟೆಪ್‌ ಎಂದು ಹೆಸರಿಟ್ಟ ಈ ಯೋಜನೆಯಲ್ಲಿ ಕಾಮತರ ಜೊತೆ 1,250 ವೈದ್ಯರು ಕೈಜೋಡಿಸಿದ್ದಾರೆ. ಐದು ವಾಟ್ಸಾಆ್ಯಪ್‌ ಗುಂಪುಗಳಿವೆ. ಮೂರು ಗುಂಪು ಕರ್ನಾಟಕದಲ್ಲಿ, ಒಂದು ದೇಶಾದ್ಯಂತ, ಇನ್ನೊಂದು ಗುಂಪು ಮಹಾರಾಷ್ಟ್ರದಲ್ಲಿ ಮಾತ್ರ ಸಲಹೆ ನೀಡುತ್ತದೆ.

ಈವರೆಗೆ ದಾನಪಡೆದು ಉತ್ತರ ಕನ್ನಡ ಸಹಿತ ಕರ್ನಾಟಕದ 16 ಜಿಲ್ಲೆಗಳಲ್ಲಿ, ಕೇರಳದ 1, ಉತ್ತರಾಖಂಡದ 1 ಮತ್ತು ಮಹಾರಾಷ್ಟ್ರದ 8 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತದೆ. ದಿನಕ್ಕೆ 50-60 ಇಸಿಜಿಗಳು ಬರುತ್ತದೆ. ಇದರ ಹೊರತಾಗಿ ಹೃದಯ ಸಮಸ್ಯೆ ಇಲ್ಲದ ವಿಷಯ ತಿಳಿದು ಸಂತೋಷಪಟ್ಟವರು ಅಸಂಖ್ಯ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಲ್ಲಿ 125 ಇಸಿಜಿ ಯಂತ್ರಗಳು ಕಾರ್ಯಾಚರಿಸುತ್ತಿದೆ.  16ನೇ ಜಿಲ್ಲೆಯಾಗಿ ಮಂಡ್ಯ ಸೇರ್ಪಡೆಯಾಗಿದ್ದು, 205ನೇ ಇಸಿಜಿ ಯಂತ್ರವನ್ನು ಮಂಡ್ಯಕ್ಕೆ ನೀಡಲಾಗುತ್ತಿದೆ.

ಇದಲ್ಲದೇ ಜನೌಷಧಿ ಕೇಂದ್ರಗಳಿಗೂ ಇಸಿಜಿ ಯಂತ್ರಗಳನ್ನು ನೀಡಲಾಗಿದ್ದು, ಹೃದಯ ಸಮಸ್ಯೆ ಉಳ್ಳವರು ಅಲ್ಲಿ ಇಸಿಜಿ ಮಾಡಿಸಿ ತಮ್ಮ ವೈದ್ಯರುಗಳಿಂದ ವಾಟ್ಸ್‌ ಆ್ಯಪ್‌ ಸಲಹೆ ಪಡೆದು ಔಷಧ ಡೋಸ್‌ಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೊದಲಾದ ಜಾಲತಾಣಗಳನ್ನು ಜನ ಟೀಕೆಮಾಡುತ್ತಾರೆ, ಸಜ್ಜನರ ಕೈಯಲ್ಲಿ ಇಂತಹ ಆಧುನಿಕ ತಂತ್ರಜ್ಞಾನ ಸಿಕ್ಕರೆ ಅದೆಷ್ಟು ಫಲಕಾರಿಯಾಗಬಹುದು ಎಂಬುದಕ್ಕೆ ಡಾ| ಕಾಮತ್‌ ಅವರ ಬಳಗವೇ ಸಾಕ್ಷಿ. ಇಂತಹ ಹೃದಯವಂತ ವೈದ್ಯರು ನಾಡಿನ ಸಂಪತ್ತು. ಹೃದಯ ಚಿಕಿತ್ಸಾ ಸೌಲಭ್ಯವಿಲ್ಲದ ಉತ್ತರ ಕನ್ನಡ ಮಟ್ಟಿಗೆ ಇದು ವರವಾಗಿದೆ.

 

-ಜೀಯು ಹೊನ್ನಾವರ

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.