ಭಾರೀ ಮಳೆ: ಬಸ್ ನಿಲ್ದಾಣ ಜಲಾವೃತ
Team Udayavani, Jun 28, 2019, 11:56 AM IST
ಹೊನ್ನಾವರ: ಜಲಾವೃತಗೊಂಡ ಬಸ್ ನಿಲ್ದಾಣ.
ಹೊನ್ನಾವರ: ನೆರೆ ತಾಲೂಕುಗಳಲ್ಲಿ ಭರ್ಜರಿ ಭಾರಿಸಿದ ಮಳೆ ತಾಲೂಕಿನಲ್ಲಿ ಮಂದವಾಗಿತ್ತು. ಇಂದು ಮುಂಜಾನೆ 10ರ ಸುಮಾರು ಎರಡು ತಾಸು ಸುರಿದ ಮಳೆ ಬಸ್ಸ್ಟ್ಯಾಂಡ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ನೀರಿನಲ್ಲಿ ನೆನೆಸಿದೆ. ಅಂಗಡಿಗೆ ನೀರು ನುಗ್ಗಿದೆ. ಲಕ್ಷ್ಮಣ ತೀರ್ಥದ ಬಳಿ ಭವಾನಿ ಕಲ್ಯಾಣ ಮೇಸ್ತ ಎಂಬವರ ಮನೆಯ ಮೇಲೆ ದೊಡ್ಡ ಮರದ ಟೊಂಗೆ ಬಿದ್ದಿದೆ. ಪ್ರಭಾತನಗರದಲ್ಲೂ ನೀರು ಹರಿಯದೆ ಹಲವು ಮನೆಗೆ ನುಗ್ಗಿದೆ.
ಬಸ್ಸ್ಟ್ಯಾಂಡ್ ಬಳಿಯ ಎಡಬಲ ರಸ್ತೆಗಳ ಎತ್ತರದ ಗುಡ್ಡದ ಮೇಲಿರುವ ನ್ಯಾಯಾಲಯ, ಆಸ್ಪತ್ರೆ, ಮಾರ್ಥೋಮಾ ಶಾಲೆಯ ಕಂಪೌಂಡ್ ನೀರು ಒಂದು ದಿಕ್ಕಿನಿಂದ ಬಂದರೆ, ಇನ್ನೊಂದು ದಿಕ್ಕಿನ ಗಟಾರದಿಂದ ನ್ಯೂ ಇಂಗ್ಲಿಷ್ ಶಾಲೆ, ಅರ್ಬನ್ ಬ್ಯಾಂಕ್ ಭಾಗದ ನೀರು ಬರುತ್ತದೆ. ಎರಡು ಗಟಾರುಗಳ ನೀರನ್ನು ಒಂದು ಕಿರಿದಾದ ಗಟಾರಿಗೆ ತಿರುವಿದ ಕಾರಣ ನೀರು ಉಕ್ಕಿ ಕಂಪೌಂಡ್ ನುಗ್ಗುತ್ತದೆ. ಬಸ್ಸ್ಟ್ಯಾಂಡ್ ಒಳಗಿನ ರಾಜಾಕಾಲುವೆ ಮುಚ್ಚಿ ಹೋಗಿದೆ. ಪ್ರತಿವರ್ಷ ಇದೇ ಹಾಡಾಗಿದೆ. ಜೊತೆಯಲ್ಲಿ ತಂಪುಪಾನೀಯ, ಕಿರಾಣಿ, ಬಟ್ಟೆ ಅಂಗಡಿಯವರು ತಮ್ಮ ಅಂಗಡಿ ಕಸವನ್ನು ರಾತ್ರಿ ಗಟಾರಿಗೆ ತುಂಬುತ್ತಾರೆ. ಪಪಂ ಸ್ವಚ್ಛ ಮಾಡಿದಂತೆ ಮತ್ತೆ ತುಂಬುತ್ತಾರೆ. ಆರಂಭದ ದಿನವೇ ಮಳೆ ಹೊಡೆತ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ