ಸಿದ್ದಾಪುರ: ಮೀನು ಬೇಟೆಯಲ್ಲಿ ಸಿಗದ ಮೀನು; ಆಕ್ರೋಶಿತ ಜನರಿಂದ ಆಯೋಜಕರು,ಪೊಲೀಸರ ಮೇಲೆ ಹಲ್ಲೆ
Team Udayavani, May 29, 2022, 4:22 PM IST
ಸಿದ್ದಾಪುರ (ಉ. ಕ.) : ಕೆರೆ ಬೇಟೆ (ಮೀನು ಬೇಟೆ ) ಯಲ್ಲಿ ಮೀನು ಸಿಗದ ಕಾರಣಕ್ಕೆ ಜನರು ರೊಚಿಗೆದ್ದು ಪೊಲೀಸರು,ಆಯೋಜಕರ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಕಾನಗೋಡಿನ ದೊಡ್ಡ ಕೆರೆಯಲ್ಲಿ ಭಾನುವಾರ (ಮೇ 29) ನಡೆದಿದೆ.
ತಾಲೂಕಿನ ಕಾನಗೋಡಿನ ದೊಡ್ಡ ಕೆರೆಯಲ್ಲಿ ಈಶ್ವರ ದೇವಸ್ಥಾನದ ಸಹಾಯರ್ಥಕ್ಕಾಗಿ ಕೆರೆ ಮೀನು ಬೇಟೆಯನ್ನು ಆಯೋಜಿಸಲಾಗಿತ್ತು. ಕೆರೆಬೇಟೆಯಲ್ಲಿ ಪಾಲ್ಗೊಳ್ಳುವ ಪ್ರತಿ ವ್ಯಕ್ತಿಗೂ ಪ್ರವೇಶ 600 ರೂ. ಶುಲ್ಕ ವಿಧಿಸಲಾಗಿತ್ತು. ಸುಮಾರು 6 -8 ರಿಂದ ಜನರು ಮೀನು ಬೇಟೆಯಲ್ಲಿ ಭಾಗಿಯಾಗಿದ್ದರು.
ಸುಮಾರು ಹೊತ್ತು ಮೀನು ಬೇಟೆಯಲ್ಲಿದ್ದ ಜನರಿಗೆ ಮೀನು ಸಿಗದ ಕಾರಣಕ್ಕೆ, ಜನರು ಆಕ್ರೋಶಗೊಂಡು ಸ್ಥಳೀಯ ದೇವಸ್ಥಾನದ ಕಮಿಟಿ ಸದಸ್ಯರಿಗೆ ಹಾಗೂ ಬಂದೋಬಸ್ತ್ ಗೆಂದು ಬಂದಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ರಾದ್ಧಾಂತ ಮಾಡಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲಾಗದೆ ಪೊಲೀಸರು, ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಲಾಠಿ ಚಾರ್ಜ್ ಮಾಡಿ ಜನರನ್ನು ನಿಯಂತ್ರಿಸಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಸ್ವಗ್ರಾಮದಲ್ಲಿ ನಾಳೆ ಅಂತ್ಯಕ್ರಿಯೆ
ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಇಬ್ಬರು ನಾಯಕರ ಪೈಪೋಟಿ : ಸಚಿವ ಬಿ ಶ್ರೀರಾಮುಲು ಲೇವಡಿ
ಪೊಲೀಸರ ಮಿಂಚಿನ ಕಾರ್ಯಾಚರಣೆ: ಚಂದ್ರಶೇಖರ ಗುರೂಜಿ ಹಂತಕರ ಬಂಧನ
ಚಿಕ್ಕೋಡಿ: ಸಾಕಲಾಗುವುದಿಲ್ಲವೆಂದು ಮಗಳನ್ನು ಹತ್ಯೆಗೈದ ತಂದೆಗೆ ಜೀವಾವಧಿ ಶಿಕ್ಷೆ
ಮಳೆಯ ನಡುವೆಯೂ ವಿದ್ಯುತ್ ತಂತಿ ದುರಸ್ತಿಗೊಳಿಸಿ ಜೆಸ್ಕಾಂ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆ