ಜಿಲ್ಲಾಭಿಮಾನದ ಕೊರತೆ-ಸೋತ ಘಟನೆ-ಸಂಘಟನೆ


Team Udayavani, Jun 20, 2019, 12:18 PM IST

uk-tdy-3..

ಹೊನ್ನಾವರ: ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಅಭೂತಪೂರ್ವ ಮಾನವ ಸಂಪನ್ಮೂಲ ಕೊಟ್ಟ ಉ.ಕ. ಜಿಲ್ಲೆಯ ಹಿಂದಿನ ತಲೆಮಾರಿನವರಲ್ಲಿ ಜಿಲ್ಲಾಭಿಮಾನದ ಒರತೆ ಚಿಮ್ಮುತ್ತಿತ್ತು. ಇಂದು ಅದರ ಕೊರತೆಯಿಂದ ಹಲವು ಸಂಘಟನೆಗಳು ಸೋತು, ನಡೆಯಬಾರದ ಘಟನೆಗಳು ನಡೆಯುತ್ತಿವೆ.

ಯಕ್ಷಗಾನ ಲೋಕಕ್ಕೆ ನೂರಾರು ಕಲಾವಿದರನ್ನು ಕೊಟ್ಟ ಜಿಲ್ಲೆ ಒಂದು ಮೇಳವನ್ನು ಉಳಿಸಿಕೊಳ್ಳಲಾರದೇ ಹೋಯಿತು. ಲಕ್ಷಾಂತರ ಜನ ಯಕ್ಷಾಭಿಮಾನಿಗಳು ಎಂದುಕೊಳ್ಳುತ್ತಾರೆ. ವರ್ಷಕ್ಕೆ ತಲಾ ನೂರು ರೂ. ಕೊಟ್ಟಿದ್ದರೆ ಮೇಳಗಳು ಉಚಿತ ಆಟ ಪ್ರದರ್ಶಿಸುತ್ತಿತ್ತು. ಬಾಯ್ತುಂಬ ಹೊಗಳುವ, ತೆಗಳುವ, ದಿನವಿಡೀ ಚರ್ಚಿಸುವ ಅಭಿಮಾನಿಗಳೆಂದುಕೊಂಡವರು ಕೈಯೆತ್ತಿ ಸಣ್ಣ ಮೊತ್ತ ಕೊಡಲಾರದಾದರು. ದುಡ್ಡು ಕೊಟ್ಟು ನಾಲ್ಕು ಆಟವನ್ನೂ ನೋಡಲಿಲ್ಲ, ಆದರೆ ಅಭಿಮಾನದ ಒಣಮಾತಿಗೆ ಬರ ಬರಲಿಲ್ಲ.

ಜಿಲ್ಲೆಯಲ್ಲಿ ಹಲವರು ಮೇಳ ನಡೆಸಿದರು. ಕೆರೆಮನೆ ಶಂಭು ಹೆಗಡೆ ಅವರ ಮಹಾತ್ವಾಕಾಂಕ್ಷೆಯ ವೃತ್ತಿಮೇಳ ನಿಂತು ಹೋಯಿತು. ಶಿವಾನಂದ ಹಲವು ರಗಳೆಗಳಿಂದ ಬಿಡಿಸಿಕೊಳ್ಳುತ್ತ ಕಷ್ಟದಿಂದ ಮುಂದುವರಿದಿದ್ದಾನೆ. ಜಲವಳ್ಳಿಯವರ ಮಗ ವಿದ್ಯಾಧರ ಆ ಸಾಹಸಕ್ಕಿಳಿದಾಗ ವೆಂಕಟೇಶರಾವ್‌ ಸೋತು ಗೆದ್ದ ಮಗ ಎಂದು ಖುಷಿಪಟ್ಟಿದ್ದರು. ಮತ್ತೆ ಮಗ ಸೋಲುವಾಗ ಅವರಿರಲಿಲ್ಲ ಎಂಬುದು ಸಮಾಧಾನದ ಸಂಗತಿ. ಹಿಂದೆ ಒಂದು ಮೇಳಕ್ಕೆ ಇಬ್ಬರು ಪ್ರಮುಖ ಕಲಾವಿದರು, ಉಳಿದವರು ಸಾಮಾನ್ಯ ಕಲಾವಿದರು. ಒಂದು ಮೇಳದಿಂದ ಅಡ್ವಾನ್ಸ್‌ ಪಡೆದ ಮೇಲೆ ಸೀಜನ್‌ ಮುಗಿಯುವವರೆಗೆ ಬೇರೆ ಮೇಳಕ್ಕೆ ಹೋಗುವಂತಿಲ್ಲ. ವಿದ್ಯಾಧರ ಮೇಳಕ್ಕೆ ಕಲಾವಿದರು ಹೆಚ್ಚಾದರು. ರಾತ್ರಿ 2-3ಕಡೆ ಬಣ್ಣಹಚ್ಚಿದರು. ಶಿಸ್ತಿರಲಿಲ್ಲ. ಜನಕ್ಕೂ ನಮ್ಮದು, ಉಳಿಸಿಕೊಳ್ಳಬೇಕು ಎಂಬ ಅಭಿಮಾನ ಇರಲಿಲ್ಲ. ಮೇಳ ಸಂಘಟನೆ, ಪಾತ್ರ ನಿರ್ವಹಣೆ ಎರಡನ್ನೂ ಮಾಡಲು ಹೊರಟರೆ ಒಂದು ಖಂಡಿತ ಸೋಲುತ್ತದೆ. ಹಲವರು ಸೋತಲ್ಲಿ ವಿದ್ಯಾಧರ ಗೆಲ್ಲಬಹುದು ಎಂಬ ಸಣ್ಣ ಆಸೆ ಸುಳ್ಳಾಗಿದೆ.

ಜಿಲ್ಲೆಯಲ್ಲಿ ಲಕ್ಷಾಂತರ ಜನ ಚಿಟ್ಟಾಣಿ ಅಭಿಮಾನಿಗಳಿದ್ದಾರೆ. ಅವರು ನಿಧನರಾದಾಗ ಮೈಸೂರಿನ ಅಭಿಮಾನಿಯೊಬ್ಬರು ಎರಡು ಪುಸ್ತಕ ಸಿದ್ಧಪಡಿಸಿ, ಪ್ರಕಾಶಕರನ್ನು ಹುಡುಕಿ ಪ್ರಕಟಿಸಿದರು. ಚಿಟ್ಟಾಣಿ ಜೀವಿತ ಕಾಲದ ಮತ್ತು ನಂತರದ ಹಲವು ಮಹತ್ವದ ಲೇಖನಗಳಿದ್ದವು. ಮಂಕಿ ಅಭಿಮಾನಿಯೊಬ್ಬರು 60ಕ್ಕೂ ಹೆಚ್ಚು ಚಿಟ್ಟಾಣಿಯವರ ಡಿವಿಡಿ ಸಿದ್ಧಪಡಿಸಿದ್ದರು. ಕವಲಕ್ಕಿ ಛಾಯಾ ಗ್ರಾಹಕರೊಬ್ಬರು ಸಾವಿರಾರು ಅಪೂರ್ವ ಚಿತ್ರಗಳನ್ನು ಮುದ್ರಿಸಿದ್ದರು. ಜನರಲ್ಲಿ ನಿಜವಾಗಿ ಚಿಟ್ಟಾಣಿ ಅಭಿಮಾನ ಇದ್ದಿದ್ದರೆ ಚಿಟ್ಟಾಣಿಯವರನ್ನು ನೆನಪಿಸುವ ಈ ಪುಸ್ತಕ, ಸಿಡಿ, ಛಾಯಾಚಿತ್ರ ನಾಲ್ಕು ಮುದ್ರಣವಾಗಬೇಕಿತ್ತು. ಜಿಲ್ಲೆಯಲ್ಲಿ 100 ಪುಸ್ತಕ, ಡಿವಿಡಿ, ಫೋಟೋ ಮಾರಾಟವಾಗಲಿಲ್ಲ.

ಕೆಲವು ಕಲಾಪ್ರೇಮಿಗಳು ಸಂಗೀತ, ಯಕ್ಷಗಾನ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಉಚಿತವಾಗಿ ಕೇಳಲು, ನೊಡಲು ಸಾವಿರಾರು ಕಲಾಭಿಮಾನಿಗಳು ಬರುತ್ತಾರೆ. ಇವರ್ಯಾರು ಬಡವರಲ್ಲ. ಇವರಲ್ಲಿ ಶೇ. 90ರಷ್ಟು ಜನ 1ಪೈಸೆ ದೇಣಿಗೆಯನ್ನೂ ಕೊಡುವುದಿಲ್ಲ. ಹೊಟ್ಟೆಬಟ್ಟೆ ಕಟ್ಟಿ ಕಲಾಸಂಪತ್ತನ್ನು ಹಿಂದಿನವರು ಉಳಿಸಿಕೊಟ್ಟು ಹೋಗಿದ್ದಾರೆ. ನಾವು ಕೈಲಾದ ನೆರವು ನೀಡಿ, ನಿಜವಾದ ಅಭಿಮಾನ ತೋರಿಸಿ, ಉಳಿಸಿಕೊಳ್ಳಬೇಕು ಎಂಬ ಭಾವನೆ ಜನಕ್ಕಿಲ್ಲ.

ಮುರ್ಡೇಶ್ವರದ ಬಗ್ಗೆ ಹೆಮ್ಮೆ ಪಡುತ್ತೇವೆ. ಗೋಕರ್ಣದ ಬಗ್ಗೆ ಗೋಕರ್ಣದವರಿಗೇ ಅಭಿಮಾನವಿಲ್ಲ. 500ಕ್ಕೂ ಹೆಚ್ಚು ದೇವಸ್ಥಾನಗಳಿರುವ ಮಹಾಬಲೇಶ್ವರ ಗುಡಿಯ ಆಸುಪಾಸಿನಲ್ಲಿ ಹೆಂಡ ಜೋರಾಗಿದೆ ಎಂದು ಪ್ರತಿಭಟನೆ ನಡೆಯಿತು. ಸ್ವಚ್ಛತೆ ಕೊರತೆ, ನೀರಿನ ಸಮಸ್ಯೆ, ಸಂಚಾರದ ಅಸ್ತವ್ಯಸ್ಥತೆ ಗೋಕರ್ಣದ ಅಂದಗೆಡಿಸಿದೆ. ಜನಕ್ಕೆ ಸ್ವಾಭಿಮಾನವಿದ್ದಿದ್ದರೆ ಕೇಂದ್ರ ಮತ್ತು ರಾಜ್ಯದಿಂದ ವಿಶೇಷ ಸಹಾಯಧನ ಪಡೆದು ಗೋಕರ್ಣದ ಕುರಿತು ಹೆಮ್ಮೆಪಡುವಂತೆ ಮಾಡುತ್ತಿದ್ದರು. ಜಿಲ್ಲೆಯ ಜನಪ್ರತಿನಿಧಿಗಳಿಗೆ ಗೋಕರ್ಣದ ಕುರಿತು ಅಭಿಮಾನ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ.

ಬಾಯ್ಮಾತಿನ ಅಭಿಮಾನ, ಶುಷ್ಕ ಉಪದೇಶ, ಕ್ಷುದ್ರ ರಾಜಕೀಯ, ಸಮಾಜದಲ್ಲಿ ವಿಜೃಂಭಿಸಿದರೆ ಜನಪರ ಯಾವುದೂ ನಿಲ್ಲುವುದಿಲ್ಲ. ತ್ರಿಕರಣ ಪೂರ್ವಕವಾಗಿ ನಾವು, ನಮ್ಮ ಜಿಲ್ಲೆ, ನಮಗಾಗಿ ಅಭಿವೃದ್ಧಿ ಎಂಬ ಭಾವನೆಗಳು ಸಮಾಜದಲ್ಲಿದ್ದರೆ ಜಿಲ್ಲೆ ಉದ್ಧಾರವಾಗುತ್ತದೆ.

ಹೋರಾಟಕ್ಕಿಲ್ಲ ಪುರುಸೋತ್ತು:

ಆಸ್ಪತ್ರೆಗಾಗಿ, ಚಿಕಿತ್ಸಾ ಸೌಲಭ್ಯಕ್ಕಾಗಿ ಕೆಲವರು ಹೋರಾಡುತ್ತಿದ್ದಾರೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗ್ಳಲ್ಲಿ ಲೈಕ್‌ ಕೊಡುವುದನ್ನು ಬಿಟ್ಟು ಇನ್ನೇನೂ ಮಾಡದವರಿಂದ ಆಸ್ಪತ್ರೆ ಆಗುವುದಿಲ್ಲ. ಫಲಾನುಭವಿಗಳಾಗಲು ಎಲ್ಲರೂ ಸಿದ್ಧ, ಹೋರಾಟಕ್ಕೆ ಪುರುಸೊತ್ತಿಲ್ಲ. ತಾಲೂಕು ಕೇಂದ್ರದಲ್ಲಿರುವ ಮಾರ್ಕೆಟಿಂಗ್‌ ಸೊಸೈಟಿ, ಎಪಿಎಂಸಿ ಮುಂತಾದವು ಎಲ್ಲ ರೈತರ ಉದ್ಧಾರಕ್ಕೆ ಹುಟ್ಟಿಕೊಂಡವು. ಶಿರಸಿಯ ಟಿಎಸ್‌ಎಸ್‌ ಹೊರತಾಗಿ ಉಳಿದ ತಾಲೂಕುಗಳಲ್ಲಿರುವ ಸಂಸ್ಥೆ ಸ್ವಂತಕ್ಕೆ ಸೊರಗುವಾಗ ಉಪಕಾರ ಮಾಡುವ ಪ್ರಶ್ನೆ ಎಲ್ಲಿ ಬಂತು. ಜನಕ್ಕೆ ಇದು ನಮ್ಮದು ಎಂಬ ಅಭಿಮಾನ ಇದ್ದರೆ ಟಿಎಸ್‌ಎಸ್‌ನಂತೆ ಎಲ್ಲ ತಾಲೂಕುಗಳಲ್ಲೂ ದೊಡ್ಡ ಸಂಸ್ಥೆ ತಲೆ ಎತ್ತುತ್ತಿತ್ತು.
•ಜೀಯು ಹೊನ್ನಾವರ

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.