ಯಲ್ಲಾಪುರದಲ್ಲಿ 15 ಸಾವಿರ ಲೀ. ಆಕ್ಸಿಜನ್ ಉತ್ಪಾದನ ಘಟಕದ ಕೆಲಸ ನಾಳೆ ಆರಂಭ:ಸಚಿವ ಹೆಬ್ಬಾರ್
Team Udayavani, May 6, 2021, 8:52 PM IST
ಕಾರವಾರ : ಯಲ್ಲಾಪುರದಲ್ಲಿ 15 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ ಘಟಕದ ಕೆಲಸ ನಾಳೆ ಅಥವಾ ನಾಡಿದ್ದು ಪ್ರಾರಂಭವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದರು .
ಕಾರವಾರ ಜಿಲ್ಲಾಸ್ಪತ್ರೆ, ಶಿರಸಿ, ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ ಬೃಹತ್ ಆಕ್ಸಿಜನ್ ಘಟಕ ಪ್ರಾರಂಭವಾಗಲಿದೆ ಎಂದು ಸಚಿವ ಹೆಬ್ಬಾರ್ ನುಡಿದರು.
ಈವರೆಗೆ ಅಗತ್ಯ ವಸ್ತುಗಳ ಖರೀದಿಗೆ 6-12 ಸಮಯ ನಿಗದಿಪಡಿಸಿದ್ದು, ಜನಸಾಂದ್ರತೆ ಹೆಚ್ಚಿದೆ. ಹಾಗಾಗಿ ಮೊದಲಿನಂತೆ 6-10ಗಂಟೆಯವರೆಗೆ ಮಾತ್ರ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು. ಜನರು ಸಹಕಾರ ಮಾಡಿಲ್ಲಂದ್ರೆ ಅನಿವಾರ್ಯವಾಗಿ ಲಾಕ್ಡೌನ್ ಮಾಡಬೇಕಾಗುತ್ತೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ : ದಾವಣಗೆರೆ: ಸೂಕ್ತ ಸಮಯಕ್ಕೆ ಸಿಗದ ಬೆಡ್ : ಆಸ್ಪತ್ರೆ ಆವರಣದಲ್ಲೇ ಮೃತಪಟ್ಟ ವ್ಯಕ್ತಿ
ವಾಕ್ಸಿಜನ್ ಸದ್ಯಕ್ಕೆ 18 ವರ್ಷ ಹಾಗೂ ಮೇಲಿನವರಿಗೆ ಕೊಡಲಾಗುತ್ತಿಲ್ಲ. ಈಗಾಗಲೇ ಡೋಸ್ ಪಡೆದುಕೊಂಡವರಿಗೆ ಸೆಕೆಂಡ್ ಡೋಸ್ ನೀಡಲು ನಮ್ಮಲ್ಲಿದ್ದು, ಕೊಡಲಾಗುತ್ತಿದೆ. 10-15 ದಿನದಲ್ಲಿ ವಾಕ್ಸಿನೇಷನ್ ಬರುತ್ತೆ, ಜನರು ಸಹಕಾರವಿರಲಿ ಗರ್ಭಿಣಿಯರಿಗೆ ಡೆಲಿವಾರಿ ಆಗೋ ಎರಡು ವಾರಗಳ ಮೊದಲು ಆರ್ಟಿಪಿಸಿಆರ್ ಟೆಸ್ಟ್ ಅನಿವಾರ್ಯ .ಜಿಲ್ಲೆಯಲ್ಲಿ124 ಡಾಕ್ಟರ್ಸ್ ಡ್ಯೂಟಿ ಪ್ರಾರಂಭಿಸಲಿದ್ದು, ನಕಲಿ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳಲಾಗುತ್ತಿದೆ ಎಂದರು .
ಲಾಕ್ಡೌನ್ ಮಾಡಿದ್ರೆ ಕಾರ್ಮಿಕರ ಸ್ಥಿತಿ, ರೈತರ, ರಾಜ್ಯದ ಹಣಕಾಸಿನ ಸ್ಥಿತಿ ಹೇಗಿರುತ್ತೆ ಅಂತಾ ಗೊತ್ತಿದೆ ಹಾಗಾಗಿ ಸದ್ಯಕ್ಕೆ ಲಾಕ್ಡೌನ್ ಮಾಡೋ ಯಾವುದೇ ನಿರ್ಧಾರ ಕೈಗೊಳ್ಳಲ್ಲ.ಹಣಕಾಸಿನ ಮೂಲಕ ಸರಕಾರಕ್ಕೆ ಸಹಾಯ ಮಾಡಲು ಇಚ್ಛೆಯಿದ್ದರೆ ಜಿಲ್ಲಾಧಿಕಾರಿಗೆ ನೀಡಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್