Yellapur : ಗ್ರಾ.ಪಂ.ಎದುರುಗಡೆ ಮಾಜಿ ಅಧ್ಯಕ್ಷರಿಬ್ಬರ ಮಾರಾಮಾರಿ
Team Udayavani, Nov 5, 2023, 11:21 PM IST
ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ಎದುರುಗಡೆ ರಸ್ತೆಯಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷರಿಬ್ಬರು ಕೈ ಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ. ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಜಾನನ ಭಟ್ಟ ಸೂತ್ರೆ ಕಳಚೆ ಮತ್ತು ಇನ್ನೋರ್ವ ಮಾಜಿ ಅಧ್ಯಕ್ಷ ವಿ.ಎನ್.ಭಟ್ಟ ಹೊಡೆದಾಡಿಕೊಂಡಿದ್ದು ಈ ಮೂಲಕ ರಾಜಕೀಯದ ಗುಂಪುಗಾರಿಕೆ ಬಹಿರಂಗವಾಗಿದೆ. ಓರ್ವ ವ್ಯಕ್ತಿ ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ತಡೆದು ಹೊಡೆದಾಡುವುದನ್ಬು ತಪ್ಪಿಸಿದ್ದಾರೆ.ಈಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಗಜಾನನ ಭಟ್ಟ ಸೂತ್ರೆ ಶಾಸಕ ಹೆಬ್ಬಾರರ ಪರಮಾಪ್ತರರು ಜತೆಗೆ ಪಂಚಾಯತ ಮಾಜಿ ಅಧ್ಯಕ್ಷರು.ಇನ್ನೊಬ್ಬರು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷವಿರೋಧಿ ನಡೆಸಿದ್ದಾರೆಂದು ಹೆಬ್ಬಾರರು ಆಪಾದಿಸಿ ಹೈಕಮಾಂಡಿಗೆ ಸಲ್ಲಿಸಿದ್ದ ದೂರಿನಲ್ಲಿದ್ದ ವ್ಯಕ್ತಿ.
ಇಬ್ಬರ ನಡುವೆ ಕಳೆದ ಕೆಲ ಸಮಯದಿಂದ ಒಂದಲ್ಲಾ ಒಂದು ಕಾರಣಗಳಿಗಾಗಿ ಆಂತರಿಕ ಕಲಹ ಅಭಿವೃಧ್ದಿ ಕಾಮಗಾರಿ ವಿಷಯದಲ್ಲಿ ಪರಸ್ಪರ ದೂರು ಕೆಸೆರೆರೆಚಿಕೊಳ್ಳುವುದು ನಡೆದೇ ಇತ್ತು.ಈ ಹಿಂದೆಯೂ ಹಲವು ಬಾರೀ ಇಬ್ಬರ ಮಧ್ಯೆ ಸಣ್ಣಪುಟ್ಟ ಘರ್ಷಣೆ ನಡೆದಿತ್ತೆನ್ನಲಾಗಿದೆ.
ಚುನಾವಣೆ ಮುಗಿದ ನಂತರ ಆಗಾಗ ತಲೆ ಎತ್ತಿ ನಿಲ್ಲುವ ಇಂತಹ ರಾಜಕೀಯ ಬೆಳವಣಿಗೆಗಳು ಇದೀಗ ವಜ್ರಳ್ಳಿಯಿಂದ ಪ್ರಾರಂಭವಾಗಿದೆ ಎಂದು ಆಡಿಕೊಳ್ಳುವುದಕ್ಕೆ ಶುರುವಾಗಿದೆ.ಈ ಘಟನೆ ಬಗ್ಗೆ ವಜ್ರಳ್ಳಿ ದೇಹಳ್ಳಿ ಕಳಚೆ ಭಾಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರೋಪ ಪ್ರತ್ಯಾರೋಪಗಳು ಹರಿದಾಡುತ್ತಿವೆ.ಹೊಡೆದಾಟದ ಸಂಭಂಧ ವಿ.ಎನ್.ಭಟ್ಟ ದೂರು ನೀಡಿದ ಬಳಿಕ ಗಜಾನನ ಭಟ್ಟ ಕೂಡ ಪ್ರತಿದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ