ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ
ಸಂಘದ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಂಡು ಸಹಾಯ ಸಹಕಾರ ನೀಡಬೇಕು ಎಂದು ಮನವಿ
Team Udayavani, Feb 9, 2021, 5:07 PM IST
ಯಾದಗಿರಿ: ಕೊಳೆವೆಬಾವಿ ಕೊರೆಯಲು ಬೇಕಾಗುವ ಬಿಡಿ ಭಾಗಗಳು, ಡಿಜಲ್ ಕೇಸಿಂಗ್ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಬೋರ್ ವೆಲ್ ಲಾರಿ ಮಾಲೀಕರ ಸಂಘ ಒಂದು ವಾರದ ಮುಷ್ಕರ ಹಮ್ಮಿಕೊಂಡಿದ್ದು, ಸೋಮವಾರ ನಗರದ ಸಿನ್ನೂರ ಜಿನ್ ಆವರಣದಲ್ಲಿ ಬೋರ್ ವೆಲ್ ಲಾರಿಗಳನ್ನು ನಿಲ್ಲಿಸುವ ಮೂಲಕ ಕೊಳವೆಬಾವಿ ಕೊರೆತದ ಕೆಲಸ ಸ್ಥಗಿತಗೊಳಿಸುವ ಮೂಲಕ ಮುಷ್ಕರ ಆರಂಭಿಸಿದ್ದಾರೆ.
ಫೆ.8ರಿಂದ 14ರವರೆಗೆ ಬೋರ್ ವೆಲ್ ಲಾರಿಗಳ ಕಾರ್ಯ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ ಎಂದು ಸಂಘ ತಿಳಿಸಿದೆ. ಕೊಳವೆಬಾವಿ ಕೊರೆಯಲು ಬೇಕಾಗುವ ಸಾಮಾಗ್ರಿಗಳ ಬೆಲೆ ಏರಿಕೆ ಒಂದಡೆಯಾದರೆ, ಜಿಲ್ಲೆಯಲ್ಲಿ ಬೋರ್ವೆಲ್ ಕೊರೆತಕ್ಕೆ ಎಕರೂಪ ದರ ನಿಗದಿಯಾಗದಿರುವುದು ಸಮಸ್ಯೆಯಾಗುತ್ತಿದೆ. ಈ ಎಲ್ಲ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರದಿಂದ 7 ದಿನಗಳ ವರೆಗೆ ಬೋರ್ವೆಲ್ ಕಾರ್ಯ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ. ಸಾಮಾಗ್ರಿಗಳ ಬೆಲೆ ಕಡಿಮೆ ಮಾಡಬೇಕು. ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಏಕರೂಪ ದರ ನಿಗದಿ ಕುರಿತು ಜಿಲ್ಲಾಧಿಕಾರಿಗಳು ಮಧ್ಯವಹಿಸಿ ದರ ನಿಗದಿ ಪಡಿಸಬೇಕೆಂದು ಸಂಘ ಮನವಿ ಮಾಡಿದೆ.
ಲಾರಿಗಳನ್ನು ಒಂದಡೆ ನಿಲ್ಲಿಸಲಾಗಿದ್ದು, ಯಾವುದೇ ಕಾಮಗಾರಿಗೆ ಮಾಡದಿರುವ ಕುರಿತು ಸಂಘ ನಿರ್ಧರಿಸಿದೆ. ಈ ಕೂಡಲೇ ಬೋರ್ವೆಲ್ ಲಾರಿ ಮಾಲೀಕರ ಸಂಘದ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಂಡು ಸಹಾಯ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಬಸವರಡ್ಡಿ ಮಾಲಿ ಪಾಟೀಲ್ ಅನಪುರ, ಗೌರವಧ್ಯಕ್ಷ ಮಲ್ಲಿಕಾರ್ಜುನ ರಡ್ಡಿ ಗುಂಜನೂರ, ಉಪಾಧ್ಯಕ್ಷ ಶರಣಗೌಡ ಚಿನ್ನಕಾರ್. ಖಜಾಂಚಿಯಾಗಿ ವಿನೋದ ರಡ್ಡಿ ಚಿನ್ನಾಕಾರ್, ಕಾರ್ಯಧ್ಯಕ್ಷ ಮಹ್ಮದ್ ಚಿನ್ನಾಕಾರ, ಕಾರ್ಯದರ್ಶಿ ಮಹೇಶ ಕಾಳಬೆಳಗುಂಡಿ, ಸಹ ಕಾರ್ಯದರ್ಶಿ ಸುರೇಶ ಅಲ್ಲಿಪೂರ ಸೇರಿದಂತೆ ಎಲ್ಲಾ ಬೋರ್ವೆಲ್ ಲಾರಿ ಮಾಲೀಕರ ಸಂಘದ ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ