ಖರ್ಚು ವೆಚ್ಚ ಸಲ್ಲಿಸದಿದ್ದರೆ ಶಿಸ್ತು ಕ್ರಮ


Team Udayavani, Apr 8, 2018, 5:56 PM IST

yad-.jpg

ಸುರಪುರ: ಚುನಾವಣಾ ಆಯೋಗವು ಪ್ರತಿ ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚವನ್ನು 28 ಲಕ್ಷ ರೂಪಾಯಿಗೆ
ನಿಗದಿಗೊಳಿಸಿ ಆದೇಶಿಸಿದೆ. ಸ್ಪರ್ಧಿಸುವ ಅಭ್ಯರ್ಥಿಗಳು ಪ್ರತಿ ದಿನ ಕಚೇರಿಗೆ ಆಗಮಿಸಿ ಚುನಾವಣಾ ಲೆಕ್ಕಾಧಿಕಾರಿಯನ್ನು ಭೇಟಿಯಾಗಿ ಖರ್ಚು ವೆಚ್ಚ ಮಾಹಿತಿ ನೀಡಬೇಕು. ಖರ್ಚು ವೆಚ್ಚ ನೀಡದೆ ಇರುವ ಅಭ್ಯರ್ಥಿ ಮೇಲೆ ಆಯೋಗದ ನಿದೇರ್ಶನದಂತೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಎನ್‌. ಡೇವಿಡ್‌ ಹೇಳಿದರು.

ಇಲ್ಲಿಯ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಜಕೀಯ ಪಕ್ಷಗಳ ಮುಖಂಡರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಚುನಾವಣಾ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಬಳಕೆ ಮಾಡುವ ವಿವಿಧ ಸಾಮಗ್ರಿಗಳ ಹಾಗೂ ಪರಿಕ ರಗಳಿಗೆ ನಿಗದಿ ಪಡಿಸುರುವ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿ, ಪ್ರತಿ ದಿನ ತಪ್ಪದೆ ಲೆಕ್ಕ ನೀಡುವಂತೆ ಕಡಕ್ಕಾಗಿ ಎಚ್ಚರಿಕೆ ನೀಡಿದರು.

ಬಸ್‌ ಬಾಡಿಗೆ ಶುಲ್ಕ 10 ಸಾವಿರ, ಲಾರಿ ಬಾಡಿಗೆ 5,100, ಟ್ರ್ಯಾಕ್ಟರ್‌ ಅಥವಾ ಟೆಂಪೋ 2,790, ಕಾರು ಬಾಡಿಗೆ 3 ಸಾವಿರ, ಕ್ರೆಷರ್‌ 2 ಸಾವಿರ, ಆಟೋ ಟಾಟಾ 12 ನೂರ, ವಸತಿ ಗೃಹ ಶುಲ್ಕ 1,450, ಸ್ವಾಗತ ಕಮಾನ 15 ನೂರ,  ಧ್ವನಿ ವರ್ಧಕಕ್ಕೆ 3 ಸಾವಿರ, ವಿಶೇಷ ಮೈಕ್‌ 2 ಸಾವಿರ, ಸಾಮಾನ್ಯ ಧ್ವನಿವರ್ಧಕ 950, ಕಮಾನಗಳಿಗೆ 15 ನೂರ, 15×30 ಶಾಮಿಯಾನಕ್ಕೆ 6 ನೂರ, ಪೆಂಡಾಲ್‌
ನಿರ್ಮಾಣ 4,320, 1 ನೂರ ಕುರ್ಚಿಗಳಿಗೆ 5 ನೂರು, ಬಟ್ಟೆ ಭಾವುಟ, ಧ್ವಜ, ಬ್ಯಾಡ್ಜ್, ಸ್ಟಿಕರ್‌, ಪ್ಲೆಕ್ಸ್‌, ಬ್ಯಾನರ್‌, ಕಟೌಟ್‌,
ಪೋಡಿಯಂ, ಟೇಬಲ್‌, ಪೆನ್ನು, ಕುರ್ಚಿ, ಟೇಬಲ್‌, ನೀರಿನ ಬಾಟಲ್‌, ವಿದ್ಯುತ್‌ ದೀಪ, ಸೇರಿದಂತೆ ಚುನಾವಣೆಗೆ ಬಳಸಬಹುದಾದ ಇತರೆ ಸಣ್ಣ ಪುಟ್ಟ ಸಾಮಗ್ರಿಗಳ ಬಳಕೆಗೆ ಚುನಾವಣಾ ಇಲಾಖೆ ಖರ್ಚು ವೆಚ್ಚ ನಿಗದಿಪಡಿಸಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗ ನಿಗಪಡಿಸಿರುವ ಧರದಲ್ಲಿ ಖರ್ಚು ವೆಚ್ಚ ನೀಡಬೇಕು. ಪಕ್ಷದ ಧ್ವಜ, ಆಭ್ಯರ್ಥಿ ಭಾವಚಿತ್ರವುಳ್ಳ ಟೀಶರ್ಟ್‌ ವಿತರಣೆ, ಟೋಪಿ, ಕರ ಪತ್ರ, ಮಾದರಿ ಪತ್ರಗಳ ಮುದ್ರಣ ಕೂಡ ಅಭ್ಯರ್ಥಿಯ ಲೆಕ್ಕಕ್ಕೆ ಹೋಗಲಿದೆ. ಇದನ್ನು ಹೊರತು ಪಡಿಸಿ ಸ್ಟಾರ್‌ ಪ್ರಚಾರಕರು ಪಕ್ಷದ ಪರವಾಗಿ ಪ್ರಚಾರ ಮಾಡಿದಲ್ಲಿ ಆ ಖರ್ಚು ಪಕ್ಷದ ಮೇಲೆ ಹಾಕಲಾಗುತ್ತದೆ. ಒಂದು ವೇಳೆ ಆಭ್ಯರ್ಥಿ ಪರ ಪ್ರಚಾರ ಮಾಡಿದಲ್ಲಿ ಆ ವೆಚ್ಚ ಸಂಬಂಧ ಪಟ್ಟ ಅಭ್ಯರ್ಥಿಯ ಲೆಕಕ್ಕೆ ಹೋಗಲಿದೆ ಎಂದು ವಿವರಿಸಿದರು.

ಇದೇ ವೇಳೆ ವಿವಿಧ ಪಕ್ಷಗಳ ಮುಖಂಡರಿಗೆ ವಿವಿ ಪ್ಯಾಟ್‌ ಪ್ರಾತ್ಯಕ್ಷೆ ಪ್ರದರ್ಶನ ಮಾಡಲಾಯಿತು. ರಾಜ್ಯ ಹಂತದ ತರಬೇತಿದಾರ ಹಣಮಂತ ಪೂಜಾರಿ ಮತಯಂತ್ರದ ಬಗ್ಗೆ ಮಾಹಿತಿ ನೀಡಿ ಮತದಾನ ಮಾಡಿದ ಏಳು ಸೆಕೆಂಡ ಒಳಗಾಗಿ ವಿವಿ ಪ್ಯಾಟ್‌ ಮತದಾರರನಿಗೆ ಮತಚಲಾವಣೆಯ ಬಗ್ಗೆ ಖಾತ್ರಿ ಪಡಿಸುತ್ತದೆ. ಮತ್ತು ರಶೀದಿ ಹೊರ ಬರುತ್ತದೆ. ಆದರೆ ಅದನ್ನು ಮತದಾರನಿಗೆ ನೀಡಲಾಗುವುದಿಲ್ಲ. ನನ್ನ ಮತ ನನ್ನ ಅಭ್ಯರ್ಥಿಗೆ ಹೋಗದೆ ಅನ್ಯ ಅಭ್ಯರ್ಥಿ ಹೋಗಿದೆ ಎಂದು ಮತದಾರ ಆಕ್ಷೇಪಣೆ ಸಲ್ಲಿಸದಲ್ಲಿ ಮತಗಟ್ಟೆ ಅಧಿಕಾರಿಗಳು ಆತನಿಗೆ ಕೆಲ ಕಾನೂನು ನಿಯಮಗಳನ್ನು ವಿವಿರಿಸಿ ಮರು ಮತದಾನಕ್ಕೆ ಅವಕಾಶ ನೀಡುವರು.

ಆ ಸಂದರ್ಭದಲ್ಲಿ ಚಲಾಯಿಸಿದ ಮತ ಸರಿಯಾಗಿದೆ ಎಂದಾದಲ್ಲಿ ವ್ಯರ್ಥ ಆಕ್ಷೇಪಣೆ ಆರೋಪದಡಿ ಆ ಮತದಾರನನ್ನು ತಕ್ಷಣಕ್ಕೆ ಪೊಲೀಸ್‌ ವಶಕ್ಕೆ ನೀಡಲಾಗುವುದು. ಒಂದು ವೇಳೆ ಮತ ತಪ್ಪಾಗಿ ಚಲಾವಣೆಯಾಗಿದ್ದಲ್ಲಿ ಮತಯಂತ್ರವನ್ನು ಸ್ಥಗಿತಗೊಳಿಸಿ ಇನ್ನೊಂದು ಯಂತ್ರ ತರಿಸಿ ಮತದಾನ ಆರಂಭಿಸಲಾಗುವುದು ಎಂದು ವಿವರಿಸಿದರು.

ವಿವಿಧ ಪಕ್ಷಗಳ ಮುಖಂಡರು ಡಮ್ಮಿ ಮತ ಚಲಾಯಿಸಿ ವಿವಿ ಪ್ಯಾಟ್‌ ಬಗ್ಗೆ ಖಾತ್ರಿ ಪಡಿಸಿಕೊಂಡರು. ಸಹಾಯಕ ಚುನಾವಣಾ ಅಧಿಕಾರಿಯಾದ ತಹಶೀಲ್ದಾರ್‌ ಸುರೇಶ ಅಂಕಲಗಿ, ಸೊಫಿಯಾ ಸುಲ್ತಾನ, ನಿಂಗಣ್ಣ ಬಿರೇದಾರ, ಖರ್ಚುವೆಚ್ಚ ಅಧಿಕಾರಿ ವೆಂಕಟೇಶ ಹೋತಪೇಟ ಇತರರು ಇದ್ದರು.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewwqe

Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.