ಸುರಪುರ: ಉಳಿತಾಯ ಬಜೆಟ್ ಮಂಡನೆ
Team Udayavani, Jan 19, 2018, 4:10 PM IST
ಸುರಪುರ: ಎಸ್ಎಚ್ ಖಾನಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಅಧ್ಯಕ್ಷತೆಯಲ್ಲಿ ಬುಧವಾರ 2018-19ನೇ ಸಾಲಿನ ಬಜೆಟ್ ಮಂಡನೆ ವಿಶೇಷ ಸಭೆ ಜರುಗಿತು.
ಸಭೆಯಲ್ಲಿ 1,97,69,000 ಉಳಿತಾಯ ಬಜೆಟ್ ಮಂಡಿಸಲಾಯಿತು. 2018-19ನೇ ಸಾಲಿನ ಸಾಮಾನ್ಯ ನಿಧಿ ಮತ್ತು ಖಾಯಂ ನಿಧಿ ಆಯವ್ಯಯ ಮುಂಗಡ ಪತ್ರದಲ್ಲಿ ವಿವಿಧ ಬಾಬತ್ತುಗಳಿಂದ ರೂ. 7,94,50,000 ಆದಾಯ ಹಾಗೂ ರೂ. 5,96, 81,000 ನಾನಾ ಶೀರ್ಷಿಕೆಯಡಿಯಲ್ಲಿ ವೆಚ್ಚ ಮಾಡುವುದ ಸೇರಿ ಒಟ್ಟು ರೂ. 1,97,69,000 ಗಳ ಉಳಿತಾಯಗಳ ಮುಂಗಡ ಪತ್ರಕ್ಕೆ ಸಭೆಯು ನಿರ್ಣಯ ಕೈಗೊಂಡಿತು.
2018-19ನೇ ಸಾಲಿನ ಕ್ರಿಯಾ ಯೋಜನೆಯಡಿ ವಿವಿಧ ಕಾಮಗಾರಿಗಳ ರೂ. 700 ಲಕ್ಷಗಳಿಗೆ ಅನುಮೋದನೆ ನೀಡಲಾಯಿತು. ಅಲ್ಲದೆ ಸಮಿತಿಯ 2016-17ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿನ 9 ಕಾಮಗಾರಿಗಳು ಮತ್ತು ಡಬ್ಲೂಐಎಫ್ ಯೋಜನೆಯಡಿ ಎಪಿಎಂಸಿ ಸಮಿತಿಯ ಸುರಪುರದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 1000 ಮೆಟ್ರಿಕ್ ಟನ್ 99 ಲಕ್ಷದ ಪ್ರಸ್ತಾವನೆ ಮಂಜೂರಾತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಾರ್ಯದರ್ಶಿ ರಿಯಾಜುರ ರಹೆಮಾನ್, ಬಜೆಟ್ನ ವರದಿ ವಾಚನ ಮಾಡಿದರು. ಎಪಿಎಂಸಿ ಅಧ್ಯಕ್ಷ ನಿಂಗಣ್ಣ
ಬಾದ್ಯಾಪುರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜಶೇಖರ ದೇಸಾಯಿ, ಸದಸ್ಯರಾದ ಮಲ್ಲಿಕಾರ್ಜುನ, ಮಲ್ಲಣ್ಣ ಸಾಹುಕಾರ, ಅಮರೇಶ ಕಟ್ಟಿಮನಿ, ಸಣಕೆಪ್ಪ ಸಾಹುಕಾರ, ರಾಯಪ್ಪ, ನಾಗಣ್ಣ ದಂಡಿನ, ದುರಗಪ್ಪ ಗೋಗಿಕರ, ಸಂಗನಗೌಡ ಸೋಮನಗೌಡ, ದೇವಣ್ಣ ಮಲಗಲದಿನ್ನಿ, ಬಸವರಾಜ ಆರೆಶಂಕರ, ಗೋಪಾಲರಾವ್
ಮಾಳದಕರ, ರಂಗನಾಥ ಗುಡಗುಂಟಿ, ಬಸವರಾಜ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್