ರಸಗೊಬ್ಬರ ಕೊರತೆಯಿಲ್ಲ; ಆತಂಕ ಬೇಡ
Team Udayavani, Nov 6, 2021, 12:07 PM IST
ಬೀದರ: ರಸಗೊಬ್ಬರದ ಬೆಲೆ ಏರಿಕೆಯಾದರೂ ದೇಶದ ರೈತರ ಮೇಲೆ ಹೊರೆ ಹಾಕದೆ ಕೇಂದ್ರ ಸರ್ಕಾರ ಮೊದಲಿನ ದರಕ್ಕೆ ರಸಗೊಬ್ಬರ ನೀಡುತ್ತಿದೆ. ಆದರೆ, ಮೇಲಿಂದ ಮೇಲೆ ರಸಗೊಬ್ಬರ ಕೊರತೆಯ ಹೇಳಿಕೆ ನೀಡುವ ಮೂಲಕ ಆತಂಕ ಮೂಡಿಸಲಾಗುತ್ತಿದ್ದು, ಕೃಷಿಕರು ಇದಕ್ಕೆ ಕಿವಿಗೊಡಬಾರದು ಎಂದು ಕೇಂದ್ರ ರಸಗೊಬ್ಬರ-ರಸಾಯನಿಕ ಖಾತೆ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ.
ಬೀದರ ಜಿಲ್ಲೆಗೆ ಅ.1ರಿಂದ 31ರವರೆಗೆ ಡಿ.ಎ.ಪಿ 7661 ಮೆಟ್ರಿಕ್ ಟನ್ ಅವಶ್ಯಕತೆಯಿದ್ದು, ಅಕ್ಟೋಬರ್ ತಿಂಗಳಲ್ಲಿ 2,000 ಮೆಟ್ರಿಕ್ ಟನ್ ಬಂದಿರುತ್ತದೆ. ಅದರಲ್ಲಿ 1492.985 ಮೆಟ್ರಿಕ್ ಟನ್ ಈಗಾಗಲೆ ರೈತರಿಗೆ ತಲುಪಿದೆ. ಹಾಗೆ 756.835 ಮೇಟ್ರಿಕ್ ಟನ್ ಸ್ಟಾಕ್ ಇದೆ. ನವೆಂಬರ್ ತಿಂಗಳಿಗೆ 2211 ಮೆಟ್ರಿಕ್ ಟನ್ ಬರಬೇಕಾಗಿದ್ದು, ನ.10ರವರೆಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಎಪಿ ಜೊತೆಗೆ ಯೂರಿಯಾ, ಎನ್.ಪಿ.ಕೆ.ಎಸ್., ಎಂ.ಓ.ಪಿ., ಎಸ್.ಎಸ್.ಪಿ, ಕಾಂಪೋಸ್ಟ್ ರಸಗೊಬ್ಬರಗಳ ದಾಸ್ತಾನು ಸಹ ಇದೆ. ರಸಗೊಬ್ಬರ ಪ್ರಮಾಣದ ಬಗ್ಗೆ ಮಾಹಿತಿಯನ್ನು Urvarak.nic.in ವೆಬ್ಸೈಟ್ನಲ್ಲಿ ನೋಡಬಹುದು. ಹಾಗಾಗಿ ಯಾರ ಮಾತಿಗೂ ಕಿವಿಗೊಡದಿರಲು ಹಾಗೂ ರಸಗೊಬ್ಬರ ಇದ್ದರೂ ಸರಿಯಾದ ಮಾಹಿತಿ ರೈತರ ಬಳಿ ತಲುಪದೆ ಇದ್ದ ಸಮಯದಲ್ಲಿ ಕೆಲವೊಂದಿಷ್ಟು ಜನ ಜಾಸ್ತಿ ಶೇಖರಣೆ ಮಾಡಲು ಮುಂದಾಗುತ್ತಾರೆ ಮತ್ತು ಕೃತಕ ಕೊರತೆ ಉಂಟು ಮಾಡುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯ ಮತ್ತು ದೇಶದಲ್ಲಿ ಎಲ್ಲಿಯೂ ಕೂಡ ರಸಗೊಬ್ಬರ ಕೊರತೆಯಿಲ್ಲ. ರೈತರು ಕೂಡ ರಸಗೊಬ್ಬರದ ಕುರಿತು ಹೆದರುವ ಅವಶ್ಯಕತೆಯಿಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ
Eknath Shindeಗೆ ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್
Yadgir: ಸಿಡಿಲು ಬಡಿದು ಕುರಿಗಾಹಿ ಮೃತ್ಯು, 17 ಕುರಿಗಳು ಸಾವು
SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ
Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್?
“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’
Daily Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
4 ವರ್ಷ ಪೂರ್ಣಗೊಳ್ಳದೆ ಎಲ್ಕೆಜಿ ಪ್ರವೇಶವಿಲ್ಲ